Weird News: 70 ಸಾವಿರ ಕೊಟ್ಟು ಹೆಣ್ಣು ಖರೀದಿಸಿ ಮದುವೆಯಾಗಿ ಕೊಂದ..!

Brutal murder case: ತಿಂಗಳುಗಟ್ಟಲೆ ಮನೆಯಿಂದ ಓಡಿಹೋಗುತ್ತಿದ್ದದ್ದ ಸ್ವೀಟಿ. ವರ್ತನೆಯಿಂದ ನನಗೆ ಸಾಕಾಗಿ ಹೋಗಿತ್ತು. ಆಕೆಗೆ ಎಷ್ಟು ಬುದ್ಧಿ ಹೇಳಿದರೂ ಕೇಳುತ್ತಿರಲಿಲ್ಲ. ಹೀಗಾಗಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಧರ್ಮವೀರ್ ಪೊಲೀಸರಿಗೆ ತಿಳಿಸಿದ್ದಾನೆ.

Written by - Puttaraj K Alur | Last Updated : Aug 11, 2023, 02:39 PM IST
  • 70 ಸಾವಿರ ಕೊಟ್ಟು ಹೆಣ್ಣು ಖರೀದಿಸಿದ ವ್ಯಕ್ತಿಯೊಬ್ಬ ಮದುವೆಯಾಗಿ ಆಕೆಯನ್ನೇ ಕೊಂದ!
  • ಬಿಹಾರದ ಪಾಟ್ನಾ ಮೂಲದ ಮಹಿಳೆಯನ್ನು ಕೊಂದ ದೆಹಲಿ ಮೂಲದ ವ್ಯಕ್ತಿ!
  • ಸಂಬಂಧಿಕರ ಜೊತೆಗೆ ಸೇರಿ ಮಹಿಳೆಯ ಮೃತದೇಹವನ್ನು ಕಾಡಿನಲ್ಲಿ ಎಸೆದ ವ್ಯಕ್ತಿ
Weird News: 70 ಸಾವಿರ ಕೊಟ್ಟು ಹೆಣ್ಣು ಖರೀದಿಸಿ ಮದುವೆಯಾಗಿ ಕೊಂದ..!  title=
Brutal murder case

ನವದೆಹಲಿ: 70 ಸಾವಿರ ರೂ. ಕೊಟ್ಟು ಮಹಿಳೆಯನ್ನು ಖರೀದಿಸಿದ ವ್ಯಕ್ತಿಯೊಬ್ಬ ಆಕೆಯನ್ನು ಮದುವೆಯಾಗಿ ನಂತರ ಕೊಲೆ ಮಾಡಿದ್ದಾನೆ. ಹೌದು, ದೆಹಲಿ ಮೂಲದ ವ್ಯಕ್ತಿಯೊಬ್ಬ ಈ ಹೀನ ಕೃತ್ಯವೆಸಗಿದ್ದಾನೆ. 70 ಸಾವಿರ ರೂ. ನೀಡಿ ಬಿಹಾರದ ಪಾಟ್ನಾ ಮೂಲದ ಸ್ವೀಟಿ ಎಂಬಾಕೆಯನ್ನು ಖರೀದಿಸಿದ್ದ ಧರ್ಮವೀರ್ ಎಂಬಾತ ಆಕೆಯನ್ನು ಮದುವೆಯಾಗಿದ್ದಾನೆ. ಬಳಿಕ ತಾನೇ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ.

ಸ್ವೀಟಿಯನ್ನು ಮದುವೆಯಾದ ಧರ್ಮವೀರ್ ಕೆಲವು ದಿನ ಆಕೆಯೊಂದಿಗೆ ಚೆನ್ನಾಗಿಯೇ ಇದ್ದನಂತೆ. ಆದರೆ ಸ್ವೀಟಿ ಆಗಾಗ ಮನೆಬಿಟ್ಟು ಓಡಿ ಹೋಗುತ್ತಿದ್ದಳಂತೆ. ಆಕೆ ಎಲ್ಲಿಗೆ ಹೋಗುತ್ತಾಳೆ? ಯಾವಾಗ ವಾಪಸ್ ಬಳುತ್ತಾಳೆ ಅನ್ನೋದರ ಬಗ್ಗೆ ಆತನಿಗೆ ತಿಳಿಸುತ್ತಿರಲಿಲ್ಲವಂತೆ. ಇದು ಧರ್ಮವೀರ್ ಕೋಪಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕೆ ಲೋಕಸಭಾದಿಂದ ಕಾಂಗ್ರೆಸ್‌ನ ಅಧೀರ್ ಚೌಧರಿ ಅಮಾನತು

ಸ್ವೀಟಿ ನಡೆಯಿಂದ ತೀವ್ರ ಅಸಮಾಧಾನ ಹೊಂದಿದ್ದ ಧರ್ಮವೀರ್ ತನ್ನ ಇಬ್ಬರು ಸಂಬಂಧಿಕರ ಜೊತೆ ಸೇರಿಕೊಂಡು ಸ್ವೀಟಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಆಕೆಯ ಮೃತದೇಹವನ್ನು ಹರಿಯಾಣ ಗಡಿ ಸಮೀಪದ ಫತೇಪುರ್ ಬೇರಿಯ ಅರಣ್ಯ ಪ್ರದೇಶದಲ್ಲಿ ಎಸೆದಿದ್ದ.

ಕಾಡಿನಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ವಿಷಯ ಪೊಲೀಸರಿಗೆ ತಿಳಿದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ತನಿಖೆ ವೇಳೆ ಸ್ಥಳೀಯ ಸಿಸಿಟಿವಿ ಪರಿಶೀಲಿಸಿದಾಗ ಪೊಲೀಸರಿಗೆ ಅನುಮಾನಾಸ್ಪದವಾಗಿ ಆಟೋ ರಿಕ್ಷಾ ಓಡಾಡಿರುವುದು ಕಂಡುಬಂದಿತ್ತು. ಆಟೋ ರಿಕ್ಷಾದ ಮಾರ್ಗವನ್ನು ಟ್ರ್ಯಾಕ್ ಮಾಡಿದ ಖಾಕಿಪಡೆಗೆ ಅದರ ನೋಂದಣಿ ಸಂಖ್ಯೆ ಸಿಕ್ಕಿತ್ತು. ಬಳಿಕ ಆಟೋ ಚಾಲಕನನ್ನು ಬಂಧಿಸಿ ವಿಚಾರಿಸಿದಾಗ ಆತ  ಧರ್ಮವೀರ್ ಬಗ್ಗೆ ಮಾಹಿತಿ ನೀಡಿದ್ದಾನೆ.  ಬಳಿಕ ಪೊಲೀಸರು ಧರ್ಮವೀರ್ ಜೊತೆಗೆ ಆತನ ಸಂಬಂಧಿಕರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಕಲಾಪದಲ್ಲಿ ಮುಂದುವರೆದ ಗದ್ದಲ ಗಲಾಟೆ

ತಿಂಗಳುಗಟ್ಟಲೆ ಮನೆಯಿಂದ ಓಡಿಹೋಗುತ್ತಿದ್ದದ್ದ ಸ್ವೀಟಿ. ವರ್ತನೆಯಿಂದ ನನಗೆ ಸಾಕಾಗಿ ಹೋಗಿತ್ತು. ಆಕೆಗೆ ಎಷ್ಟು ಬುದ್ಧಿ ಹೇಳಿದರೂ ಕೇಳುತ್ತಿರಲಿಲ್ಲ. ಹೀಗಾಗಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಧರ್ಮವೀರ್ ಪೊಲೀಸರಿಗೆ ತಿಳಿಸಿದ್ದಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News