Viral News: ಆರತಕ್ಷತೆ ವೇಳೆ ಮಾವನಿಂದ 3 ಕಂಡೀಷನ್, ‘ನಿನ್ನ ಮಗಳೇ ಬೇಡ’ವೆಂದು ಎಸ್ಕೇಪ್ ಆದ ವರ!

Groom breaks marriage: ಮದುವೆಗಾಗಿ 10 ಲಕ್ಷ ರೂ. ಖರ್ಚಾಗಿದ್ದು, ವಧುವಿಗೆ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ಹಾಕಲಾಗಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ. ವಧುವಿನ ಮಲತಂದೆ ಆಕೆಯ ಮೈಮೇಲಿದ್ದ ಚಿನ್ನ-ಬೆಳ್ಳಿಯನ್ನು ತೆಗೆದುಕೊಂಡಿದ್ದಾನೆಂದು ಆರೋಪಿಸಲಾಗಿದೆ.

Written by - Puttaraj K Alur | Last Updated : Jul 11, 2023, 08:23 PM IST
  • ಉತ್ತರಪ್ರದೇಶದ ಜಾನ್ಸಿಯಲ್ಲಿ ಮದುವೆಯಾದ 24 ಗಂಟೆ ಕಳೆಯುವ ಮುನ್ನವೇ ಮುರಿದುಹೋಗಿದೆ
  • ಆರತಕ್ಷತೆ ವೇಳೆ ವಧುವಿನ ಮಲತಂದೆ ವರನಿಗೆ 3 ವಿಚಿತ್ರ ಕಂಡೀಷನ್ ಹಾಕಿದ್ದಾನೆ
  • ವಧುವಿನ ಮಲತಂದೆಯ ಕಂಡೀಷನ್ ಕೇಳಿ ಮದುವೆಯೇ ಬೇಡವೆಂದು ವರ ಎಸ್ಕೇಪ್
Viral News: ಆರತಕ್ಷತೆ ವೇಳೆ ಮಾವನಿಂದ 3 ಕಂಡೀಷನ್, ‘ನಿನ್ನ ಮಗಳೇ ಬೇಡ’ವೆಂದು ಎಸ್ಕೇಪ್ ಆದ ವರ!  title=
ಮಾವನ 3 ಕಂಡೀಷನ್ ಕೇಳಿ ವರ ಎಸ್ಕೇಪ್!

ನವದೆಹಲಿ: ಮದುವೆ ಅನ್ನೋದು ಸಂತೋಷ ಮತ್ತು ಸಂಭ್ರಮದ ಆಚರಣೆ. ಆದರೆ ಕೆಲವು ಮದುವೆಗಳು ಚಿತ್ರ-ವಿಚಿತ್ರ ಘಟನೆಗಳಿಂದ ಸುದ್ದಿಯಾಗುತ್ತವೆ. ಅದೇ ರೀತಿಯ ವಿಚಿತ್ರ ಘಟನೆಗೆ ಈ ಮದುವೆ ಸಾಕ್ಷಿಯಾಗಿದೆ. ವಿಜೃಂಭಣೆಯಿಂದ ಮದುವೆ ಸಮಾರಂಭ ನೆರವೇರಿದ್ರೂ ಆರತಕ್ಷತೆ ಕಾರ್ಯಕ್ರಮದ ವೇಳೆ ವಿಚಿತ್ರ ಪ್ರಸಂಗ ನಡೆದು ಮದುವೆ ಮುರಿದುಬಿದ್ದಿದೆ.

ಹೌದು, ಆರತಕ್ಷತೆ ವೇಳೆ ವಧುವಿನ ಮಲತಂದೆ ವರನಿಗೆ 3 ವಿಚಿತ್ರ ಕಂಡೀಷನ್ ಹಾಕಿದ್ದಾನೆ. ಈ ಷರತ್ತು ಕೇಳಿದ ವರ ಆರತಕ್ಷತೆಯ ವೇದಿಕೆಯಿಂದಲೇ ‘ನಿನ್ನ ಮಗಳೇ ನನಗೆ ಬೇಡ. ನನಗೆ ಈ ಮದುವೆಯ ಅಗತ್ಯವೇ ಇಲ್ಲವೆಂದು ಹೇಳಿ ಎಸ್ಕೇಪ್ ಆಗಿದ್ದಾನೆ. ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು ಉತ್ತರ ಪ್ರದೇಶದ ಜಾನ್ಸಿ ಜಿಲ್ಲೆ.

ಇದನ್ನೂ ಓದಿ: Delhi Rains: 1978ರ ದುರಂತವನ್ನು ಮತ್ತೆ ನೆನಪಿಸುತ್ತಿದೆ ಡೆಲ್ಲಿ ಮಳೆ

ಮದುವೆಯಾದ 24 ಗಂಟೆ ಕಳೆಯುವ ಮುನ್ನವೇ ಮುರಿದುಹೋಗಿದೆ. ನಾಪತ್ತೆಯಾದ ವರನ ವಿರುದ್ಧ ವಧುವಿನ ಮಲತಂದೆ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಬರುಸಾಗರದ ಯುವಕ ಮನ್ವೀಂದ್ರ ಜ್ಯೋತಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಜೂನ್ 6ರಂದು ಮನ್ವಿಂದ್ರ ಮತ್ತು ಜ್ಯೋತಿಯವರ ವಿವಾಹ ಅದ್ದೂರಿಯಾಗಿ ನೆರವೇರಿತ್ತು. ವಧು-ವರರಿಬ್ಬರ ಬಂಧುಗಳು ಮದುವೆ ಮೆರವಣಿಗೆಯಲ್ಲಿ ಖುಷಿಯಿಂದಲೇ ಪಾಲ್ಗೊಂಡು ಕುಣಿದು ಕುಪ್ಪಳಿಸಿದ್ದಾರೆ. ವಧುವನ್ನು ವರನ ಮನೆಗೆ ಕಳಿಸಿಕೊಳ್ಳುವ ಕಾರ್ಯಕ್ರಮ ನೆರವೇರಿತ್ತು. ಬಳಿಕ ವಧುವನ್ನು ವರನ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಮರುದಿನ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಆರತಕ್ಷತೆ ಮುಗಿಯುವ ವೇಳೆ ವಧುವಿನ ಮಲತಂದೆ ತಮ್ಮ ವಿಚಿತ್ರ ಕಂಡೀಷನ್‍ಗಳ ಮೂಲಕ ಎಲ್ಲರಿಗೂ ಆಘಾತ ನೀಡಿದ್ದಾರೆ.  

ವಧುವಿನ ಮಲತಂದೆ ವರನಿಗೆ ಹಾಕಿದ ಮೊದಲನೆಯ ಷರತ್ತು ಮದುವೆಯ ನಂತರ ಗಂಡ-ಹೆಂಡತಿ ಇಬ್ಬರೂ ಯಾವುದೇ ಕಾರಣಕ್ಕೂ ಸೆಕ್ಸ್‌ ಮಾಡುವಂತಿಲ್ಲವೆಂಬುದು. 2ನೇಯದು ಮದುವೆಯ ಬಳಿಕ ಹುಡುಗಿಯ ತಂಗಿ ಸಹ ಅಕ್ಕನೊಂದಿಗೆ ಅಲ್ಲಿಯೇ ಇರುತ್ತಾಳೆ ಅನ್ನೋದು, ಇನ್ನೂ 3ನೇಯದಾಗಿ ಮಗಳ ಮನೆಗೆ ತಾನು ಯಾವಾಗ ಬೇಕಾದರೂ ಬರಬಹುದು. ಆದರೆ ಇದನ್ನು ಮನೆಯಲ್ಲಿದ್ದವರು ಯಾರೂ ಪ್ರಶ್ನೆ ಮಾಡುವಂತಿಲ್ಲವೆಂದು ಹೇಳಿದ್ದಾರೆ.

ಇದನ್ನೂ ಓದಿಸೀತೆಯ ಸೌಂದರ್ಯಕ್ಕೆ ರಾಮ-ರಾವಣರು ಹುಚ್ಚರಾಗಿದ್ದರು: ಕಾಂಗ್ರೆಸ್ ಸಚಿವನ ವಿವಾದಾತ್ಮಕ ಹೇಳಿಕೆ

ವಧುವಿನ ಮಲತಂದೆ ವಿಧಿಸಿದ ಷರತ್ತುಗಳಿಂದ ವರನಿಗೆ ಆಘಾತವಾಗಿದೆ. ಈ ಬಗ್ಗೆ ದೊಡ್ಡಮಟ್ಟದ ಚರ್ಚೆಯಾಗಿದೆ. ವಧುವಿನ ತಂದೆ ಮಾತ್ರ ನಾನು ಯಾವುದೇ ಕಾರಣಕ್ಕೂ ನನ್ನ ಷರತ್ತುಗಳನ್ನು ಬದಲಿಸುವುದಿಲ್ಲವೆಂದು ಹೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ವರ, ‘ನನಗೆ ನಿನ್ನ ಮಗಳೇ ಬೇಡ’ ಅಂತಾ ಆರತಕ್ಷತೆ ಕಾರ್ಯಕ್ರಮದಿಂದಲೇ ಎಸ್ಕೇಪ್ ಆಗಿದ್ದಾನೆ. ಘಟನೆಯಿಂದ ಕೋಪಗೊಂಡ ವರನ ಕುಟುಂಬಸ್ಥರು ವಧುವಿನ ಮಲತಂದೆ ವಿರುದ್ಧ ಬರುಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮದುವೆಗಾಗಿ 10 ಲಕ್ಷ ರೂ. ಖರ್ಚಾಗಿದ್ದು, ವಧುವಿಗೆ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ಹಾಕಲಾಗಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ. ವಧುವಿನ ಮಲತಂದೆ ಆಕೆಯ ಮೈಮೇಲಿದ್ದ ಚಿನ್ನ-ಬೆಳ್ಳಿಯನ್ನು ತೆಗೆದುಕೊಂಡಿದ್ದಾನೆಂದು ಆರೋಪಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News