ಸಿದ್ಧವಾಗಿದೆ ಪಾಕಿಸ್ತಾನದ ಹೊಸ 'ಪ್ಲಾನ್ 5 ಆಗಸ್ಟ್'

ಎಲ್ಲಾ ಪ್ರಮುಖ ಉರ್ದು ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ವಿಶೇಷ ಪುಟಗಳ ಮೂಲಕ ಪ್ರಸಾರ ಪಡೆಯಲು ಪಾಕಿಸ್ತಾನದ ಮಾಹಿತಿ ಪ್ರಸಾರ ಸಚಿವಾಲಯ ಸಿದ್ದತೆ ನಡೆಸಿವೆ. ಇದಲ್ಲದೆ ಆಗಸ್ಟ್ 5 ರಂದು ಎಲ್ಲಾ ಪಾಕಿಸ್ತಾನಿ ಸುದ್ದಿ ವಾಹಿನಿಗಳ ಲೋಗೊವನ್ನು ಕಪ್ಪಾಗಿಸಬೇಕು ಎಂದು ಸಹ ನಿರ್ಧರಿಸಲಾಗಿದೆ.  

Last Updated : Jul 28, 2020, 11:45 AM IST
ಸಿದ್ಧವಾಗಿದೆ ಪಾಕಿಸ್ತಾನದ ಹೊಸ  'ಪ್ಲಾನ್ 5 ಆಗಸ್ಟ್' title=

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ನೇ ವಿಧಿಯನ್ನು ತೆಗೆದುಹಾಕಿದ ನೋವು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತು ಇಡೀ ಪಾಕಿಸ್ತಾನದ ಮನಸ್ಸನ್ನು ನೋಯಿಸಿದೆ. ಇಮ್ರಾನ್ ಖಾನ್ ಕಾಶ್ಮೀರವನ್ನು ತಮ್ಮದೇ ಎಂದು ಹೇಳಿಕೊಳ್ಳಬಹುದು. ಅದು ಸತ್ಯಕ್ಕೆ ದೂರವಾದ ಮಾತು ಎಂದು ಇಡೀ ವಿಶ್ವಕ್ಕೆ ಮನವರಿಕೆಯಾಗಿದೆ. ಇದೇ ಆಗಸ್ಟ್ 5ಕ್ಕೆ ಕಾಶ್ಮೀರದಿಂದ 370 ನೇ ವಿಧಿಯನ್ನು (Article 370) ತೆಗೆದುಹಾಕಿದ ಭಾರತ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ (Pakistan) ಸೇನೆಯು ಭಾರತದ ವಿರುದ್ಧ ಅಪಪ್ರಚಾರ ನಡೆಸಲು ಸಂಪೂರ್ಣ ಕಾರ್ಯಸೂಚಿಯನ್ನು ಸಿದ್ಧಪಡಿಸಿದೆ.

ಪಾಕಿಸ್ತಾನದ ಮಾಹಿತಿ ಪ್ರಸಾರ ಸಚಿವಾಲಯವು ಎಲ್ಲಾ ಪ್ರಮುಖ ಉರ್ದು ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ವಿಶೇಷ ಪುಟಗಳ ಮೂಲಕ ಪ್ರಸಾರ ಪಡೆಯುವ ಕಾರ್ಯವನ್ನು ಸಿದ್ಧಪಡಿಸುತ್ತಿವೆ. ಇದಲ್ಲದೆ ಆಗಸ್ಟ್ 5 ರಂದು ಪಾಕಿಸ್ತಾನದ ಎಲ್ಲಾ ಸುದ್ದಿ ವಾಹಿನಿಗಳ 'ಲೋಗೊ'ವನ್ನು ಕಪ್ಪಾಗಿಸಬೇಕು ಎಂದು ಸಹ ನಿರ್ಧರಿಸಲಾಗಿದೆ. ಪಾಕಿಸ್ತಾನದ ಎಲ್ಲಾ ಚಾನೆಲ್‌ಗಳಿಗೆ ಕಾಶ್ಮೀರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ನಿರ್ದೇಶಿಸಲಾಗಿದೆ. ಕಾಶ್ಮೀರಿಗಳಿಗಾಗಿ ವಿಶೇಷ ಹಾಡನ್ನು ಸಹ ಸಿದ್ಧಪಡಿಸಲಾಗಿದೆ.

ಈ ವರ್ಷದ ಆಗಸ್ಟ್ 5 ರಂದು ಪಾಕಿಸ್ತಾನವು ಕಾಶ್ಮೀರಿ ನಾಯಕರು, ಕಾರ್ಯಕರ್ತರು ಮತ್ತು ಭಾರತದ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ರಾಯಲ್ ಟ್ರೀಟ್ಮೆಂಟ್ ನೀಡಲಿದೆ ಮತ್ತು ಇಮ್ರಾನ್ ಖಾನ್ ಆಗಸ್ಟ್ 5 ರಂದು ಮುಜಫರಾಬಾದ್ಗೆ ಭೇಟಿ ನೀಡಲಿದ್ದಾರೆ. ಇದಲ್ಲದೆ ಇಮ್ರಾನ್ ಖಾನ್ ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರ (Pok)ದ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಇದನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುವುದು. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಕುರಿತ ಯುಎನ್ ನಿರ್ಣಯಕ್ಕೆ ಸಂಬಂಧಿಸಿದಂತೆ ಕರಪತ್ರಗಳನ್ನು ವಿತರಿಸಲಾಗುವುದು, ಇದರಲ್ಲಿ ಜನಾಭಿಪ್ರಾಯವನ್ನು ಉಲ್ಲೇಖಿಸಲಾಗಿದೆ.

ವಿಶೇಷವೆಂದರೆ ಇಮ್ರಾನ್ ಖಾನ್ ಕಾಶ್ಮೀರದ ಪ್ರಕರಣವನ್ನು ವಿಶ್ವಸಂಸ್ಥೆ ಮತ್ತು ವಿಶ್ವದ ನಾಯಕರ ಬಳಿಗೆ ಕೊಂಡೊಯ್ಯುವ ಬಗ್ಗೆ ಮಾತನಾಡುತ್ತಿದ್ದರು, ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ಮಾತನ್ನು ಯಾರೂ ಕೇಳಲಿಲ್ಲ. ಏಕೆಂದರೆ ಪಾಕಿಸ್ತಾನವು ವಿಶ್ವದ ಭಯೋತ್ಪಾದನೆಯ ನೆಲೆ ಎಂದು ಇಡೀ ಜಗತ್ತು ಈಗ ಅರ್ಥಮಾಡಿಕೊಂಡಿದೆ. ಅದೇನೇ ಇದ್ದರೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಭಾರತದ ವಿರುದ್ಧ ಅಪಪ್ರಚಾರ ನಡೆಸಿದ್ದಕ್ಕಾಗಿ 370 ನೇ ವಿಧಿಯನ್ನು ತೆಗೆದುಹಾಕುವ ವಿರುದ್ಧ ಹಿಂದೂಸ್ತಾನ್ ನಾಯಕರ ವಿರುದ್ಧ ಇಂತಹ ಹೇಳಿಕೆಗಳನ್ನು ವೈರಲ್ ಮಾಡುತ್ತದೆ.

ಇಮ್ರಾನ್ ಖಾನ್ ಅವರ ಕುರ್ಚಿ ಪಾಕಿಸ್ತಾನ ಸೇನೆಯ ಕೈಯಲ್ಲಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ. ಇಡೀ ಪಾಕಿಸ್ತಾನ ಅದರ ಸೈನ್ಯ, ಐಎಸ್‌ಐ (ISI) ಮತ್ತು ಅದರ ಉಗ್ರರನ್ನು ಭಯೋತ್ಪಾದಕರಾಗಿ ನೋಡಲಾಗುತ್ತಿದೆ. ಇವೆಲ್ಲದರ ನಡುವೆ ಭಾರತ ಇಷ್ಟು ವರ್ಷಗಳ ಕಾಶ್ಮೀರದ ಕಥೆಯನ್ನು ಶಾಶ್ವತವಾಗಿ ಒಂದೇ ಹೊಡೆತದಲ್ಲಿ ಕೊನೆಗೊಳಿಸಿತು. ಆಗಸ್ಟ್ 5, 2019 ರಂದು ಪ್ರತ್ಯೇಕತಾವಾದದ 370 ನೇ ವಿಧಿಯನ್ನು ಶಾಶ್ವತವಾಗಿ ರದ್ದುಪಡಿಸಲಾಯಿತು.

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಪಾತ್ರವನ್ನು ದೇಶದ ಮುಂದೆ ಇಟ್ಟರು. ಕಾರಣವಿಲ್ಲದೆ ಎಲ್ಲರನ್ನೂ ದ್ವೇಷಿಸುವುದು ದುಷ್ಟರ ಸ್ವಭಾವ ಮಾತ್ರ ಎಂದು ಹೇಳಿದರು. ಭಾರತದ ಸ್ನೇಹಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಬೆನ್ನಿಗೇ ಚೂರಿ ಹಾಕಿದೆ.

Trending News