ಕಾಗದದ ಕೊರತೆಯಿಂದ ಶಾಲಾ ಪರೀಕ್ಷೆಗಳನ್ನು ರದ್ದುಗೊಳಿಸಿದ ಶ್ರೀಲಂಕಾ..!

ಶ್ರೀಲಂಕಾವು ಈಗ ಹಣಕಾಸಿನ ಕೊರತೆಯಿಂದಾಗಿ ಕಾಗದವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೆ ಇರುವುದರಿಂದಾಗಿ ಅದು ಲಕ್ಷಾಂತರ ಶಾಲಾ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Written by - Zee Kannada News Desk | Last Updated : Mar 20, 2022, 08:33 AM IST
  • ಶ್ರೀಲಂಕಾ ತನ್ನ ಪ್ರಮುಖ ಸಾಲದಾತರಲ್ಲಿ ಒಬ್ಬರಾದ ಚೀನಾವನ್ನು ಸಾಲ ಪಾವತಿಗಳನ್ನು ಮುಂದೂಡಲು ಸಹಾಯ ಮಾಡುವಂತೆ ಕೇಳಿದೆ.
  • ಆದರೆ ಬೀಜಿಂಗ್‌ನಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಕಾಗದದ ಕೊರತೆಯಿಂದ ಶಾಲಾ ಪರೀಕ್ಷೆಗಳನ್ನು ರದ್ದುಗೊಳಿಸಿದ ಶ್ರೀಲಂಕಾ..! title=

ನವದೆಹಲಿ: ಶ್ರೀಲಂಕಾವು ಈಗ ಹಣಕಾಸಿನ ಕೊರತೆಯಿಂದಾಗಿ ಕಾಗದವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದೆ ಇರುವುದರಿಂದಾಗಿ ಅದು ಲಕ್ಷಾಂತರ ಶಾಲಾ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

1948 ರಲ್ಲಿನ ಸ್ವಾತಂತ್ರ್ಯದ ನಂತರ ಶ್ರೀಲಂಕಾ (Srilanka) ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ, ಸೋಮವಾರದಿಂದ ಒಂದು ವಾರದ ಅವಧಿಯ ಪರೀಕ್ಷೆಗಳನ್ನು ತೀವ್ರ ಕಾಗದದ ಕೊರತೆಯಿಂದಾಗಿ ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.

'ಅಗತ್ಯವಾದ ಕಾಗದ ಮತ್ತು ಶಾಯಿಯನ್ನು ಆಮದು ಮಾಡಿಕೊಳ್ಳಲು ಪ್ರಿಂಟರ್‌ಗಳು ವಿದೇಶಿ ವಿನಿಮಯವನ್ನು ಪಡೆಯಲು ಸಾಧ್ಯವಾಗದ ಕಾರಣ ಶಾಲಾ ಮುಖ್ಯಸ್ಥರು ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ" ಎಂದು ಪಶ್ಚಿಮ ಪ್ರಾಂತ್ಯದ ಶಿಕ್ಷಣ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Russia Ukraine War: ಉಕ್ರೇನ್ ಮೇಲೆ ಕಿಂಜಾಲ್ ಹೈಪರ್‌ಸಾನಿಕ್ ಕ್ಷಿಪಣಿ ಪ್ರಯೋಗಿಸಿದ ರಷ್ಯಾ

ಅಗತ್ಯ ಆಮದುಗಳಿಗೆ ಹಣಕಾಸು ಒದಗಿಸಲು ವಿದೇಶಿ ವಿನಿಮಯ ಸಂಗ್ರಹದ ಕೊರತೆಯಿಂದ ದುರ್ಬಲಗೊಂಡ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಈಗ ಆಹಾರ, ಇಂಧನ ಮತ್ತು ಔಷಧಗಳ ಸಂಗ್ರಹ ಕುಸಿದಿದೆ.22 ದಶಲಕ್ಷದಷ್ಟು ಹಣದ ಕೊರತೆಯಿರುವ ದಕ್ಷಿಣ ಏಷ್ಯಾದ ರಾಷ್ಟ್ರವು ಈ ವಾರ ತನ್ನ ಹದಗೆಡುತ್ತಿರುವ ವಿದೇಶಿ ಸಾಲದ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಬಾಹ್ಯ ಮೀಸಲುಗಳನ್ನು ಹೆಚ್ಚಿಸಲು ಐಎಂಎಫ್ ಮೊರೆ ಹೋಗಿದೆ.

ಶ್ರೀಲಂಕಾ ಈಗ ಸುಮಾರು $6.9 ಶತಕೋಟಿ ಡಾಲರ್ ಸಾಲವನ್ನು ಈ ವರ್ಷ ಪೂರೈಸಬೇಕಾಗಿದೆ.ಆದರೆ ಅದರ ವಿದೇಶಿ ಕರೆನ್ಸಿ ಮೀಸಲು ಫೆಬ್ರವರಿ ಅಂತ್ಯದಲ್ಲಿ ಸುಮಾರು $2.3 ಶತಕೋಟಿ ಡಾಲರ್ ಇತ್ತು.ದೇಶಾದ್ಯಂತ ಈಗ ಎಲ್ಲೆಡೆ ದಿನಸಿ ಮತ್ತು ತೈಲಕ್ಕಾಗಿ ಉದ್ದನೆಯ ಸರತಿ ಸಾಲುಗಳು ಹೆಚ್ಚಿವೆ,ಅಲ್ಲಿನ ಆಡಳಿತ ಸರ್ಕಾರವು ಈಗ ಸಂಕಷ್ಟದಲ್ಲಿರುವ ಜನರಿಗಾಗಿ ಹಾಲಿನ ಪುಡಿ, ಸಕ್ಕರೆ, ಉದ್ದು ಮತ್ತು ಅಕ್ಕಿಯ ಪಡಿತರವನ್ನು ಸ್ಥಾಪಿಸಿದೆ.

ಇದನ್ನೂ ಓದಿ: ಭಾರತದಲ್ಲಿ 42 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿರುವ ಜಪಾನ್..!

ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ತನ್ನ ಪ್ರಮುಖ ಸಾಲದಾತರಲ್ಲಿ ಒಬ್ಬರಾದ ಚೀನಾವನ್ನು ಸಾಲ ಪಾವತಿಗಳನ್ನು ಮುಂದೂಡಲು ಸಹಾಯ ಮಾಡುವಂತೆ ಕೇಳಿತ್ತು. ಆದರೆ ಬೀಜಿಂಗ್‌ನಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News