Kailasa : ನಿತ್ಯಾನಂದನ ‘ಮಾಯಾನಗರಿ’ ಕೈಲಾಸ ಎಲ್ಲಿದೆ? ಇದು ನಿಗೂಢ ಲೋಕದ ವಿಸ್ಮಯಕಾರಿ ವಿಚಾರ

Kailasa : ಮಕ್ಕಳ ಅತ್ಯಾಚಾರ ಮತ್ತು ಅಪಹರಣ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿರುವ ನಿತ್ಯಾನಂದನ ಹೆಸರು ಮತ್ತೊಮ್ಮೆ ಸುದ್ದಿಯಾಗಿದೆ. ವಿವಾದಿತ ಧಾರ್ಮಿಕ ಮುಖಂಡ ನಿತ್ಯಾನಂದ ಅವರು ತಮ್ಮದೇ ಆದ ಕೈಲಾಸ ಎಂಬ ದೇಶವನ್ನು ರಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

Written by - Chetana Devarmani | Last Updated : Mar 4, 2023, 02:00 PM IST
  • ಭಾರತದಿಂದ ಪರಾರಿಯಾಗಿರುವ ನಿತ್ಯಾನಂದ
  • ನಿತ್ಯಾನಂದನ ‘ಮಾಯಾನಗರಿ’ ಕೈಲಾಸ ಎಲ್ಲಿದೆ?
  • ಇದು ನಿಗೂಢ ಲೋಕದ ವಿಸ್ಮಯಕಾರಿ ವಿಚಾರ
Kailasa : ನಿತ್ಯಾನಂದನ ‘ಮಾಯಾನಗರಿ’ ಕೈಲಾಸ ಎಲ್ಲಿದೆ? ಇದು ನಿಗೂಢ ಲೋಕದ ವಿಸ್ಮಯಕಾರಿ ವಿಚಾರ  title=
Nityananda

Where Is Country Kailasa : ಮಕ್ಕಳ ಅತ್ಯಾಚಾರ ಮತ್ತು ಅಪಹರಣ ಪ್ರಕರಣದಲ್ಲಿ ಭಾರತದಿಂದ ಪರಾರಿಯಾಗಿರುವ ನಿತ್ಯಾನಂದನ ಹೆಸರು ಮತ್ತೊಮ್ಮೆ ಸುದ್ದಿಯಾಗಿದೆ. ವಿವಾದಿತ ಧಾರ್ಮಿಕ ಮುಖಂಡ ನಿತ್ಯಾನಂದ ಅವರು ತಮ್ಮದೇ ಆದ ಕೈಲಾಸ ಎಂಬ ದೇಶವನ್ನು ರಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಿತ್ಯಾನಂದರು ಇದನ್ನು ಸಂಪೂರ್ಣ ಹಿಂದೂ ರಾಷ್ಟ್ರ ಎಂದು ಕರೆಯುತ್ತಾರೆ. ಇತ್ತೀಚೆಗಷ್ಟೇ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಕೈಲಾಸ ಎಂದು ಕರೆಸಿಕೊಳ್ಳುವ ದೇಶದ ಪ್ರತಿನಿಧಿ ವಿಜಯಪ್ರಿಯಾ ನಿತ್ಯಾನಂದ ಕೂಡ ಹಾಜರಿದ್ದು, ಮತ್ತೆ ನಿತ್ಯಾನಂದ ಹಾಗೂ ಕೈಲಾಸ ಪ್ರಸ್ತಾಪ ಬರಲಾರಂಭಿಸಿದೆ. ವಿಶ್ವಸಂಸ್ಥೆಯ ಸಭೆಯಲ್ಲಿ ಕಾಲ್ಪನಿಕ ರಾಷ್ಟ್ರವಾದ ಯುನೈಟೆಡ್ ಸ್ಟೇಟ್ ಆಫ್ ಕೈಲಾಸದ ಪ್ರತಿನಿಧಿಯ ಉಪಸ್ಥಿತಿಯನ್ನು ಭಾರತವು ಇಷ್ಟಪಡಲಿಲ್ಲ.

ಇದನ್ನೂ ಓದಿ : Imran Khan: ಇಮ್ರಾನ್ ಖಾನ್‌ಗೆ ಮತ್ತೆ ಬಂಧನ ಭೀತಿ, ಈ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿ

ನಿತ್ಯಾನಂದನ ಕಾಲ್ಪನಿಕ ಕೈಲಾಸ ಎಲ್ಲಿದೆ?

ಕೈಲಾಸ ಎಂಬ ಹೆಸರು ಬಂದ ತಕ್ಷಣ ಅನೇಕ ಓದುಗರ ಮನಸ್ಸಿನಲ್ಲಿ ಈ ಪ್ರಶ್ನೆ ಉದ್ಭವಿಸಿರಬೇಕು, ಅಷ್ಟಕ್ಕೂ ಪಲಾಯನವಾದಿ ನಿತ್ಯಾನಂದ ಈ ದೇಶವನ್ನು ಭೂಮಿಯ ಮೇಲೆ ಯಾವ ಸ್ಥಳದಲ್ಲಿ ನಿರ್ಮಿಸಿದ್ದಾನೆ. ಇಂದು ನಾವು ಈ ಪ್ರಶ್ನೆಗೆ ಉತ್ತರವನ್ನು ನೀಡುತ್ತೇವೆ. ಪರಾರಿಯಾಗಿರುವ ನಿತ್ಯಾನಂದ ಈಕ್ವೆಡಾರ್ ಬಳಿಯ ದ್ವೀಪವೊಂದರಲ್ಲಿ ತನ್ನ ಕಾಲ್ಪನಿಕ ದೇಶವನ್ನು ಸ್ಥಾಪಿಸಿದ್ದಾನೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಈ ಕಾಲ್ಪನಿಕ ದೇಶದ ವೆಬ್‌ಸೈಟ್ ಪ್ರಕಾರ, ಪ್ರಪಂಚದ ಶೋಷಣೆಗೆ ಒಳಗಾದ ಹಿಂದೂಗಳು ತಮ್ಮ ಜನಾಂಗ, ಲಿಂಗ ಅಥವಾ ಧರ್ಮವನ್ನು ಲೆಕ್ಕಿಸದೆ, ಕೈಲಾಸಕ್ಕೆ ಬಂದು ಶಾಂತಿಯುತ ಜೀವನವನ್ನು ನಡೆಸಬಹುದು. ಇದಲ್ಲದೆ, ಅಲ್ಪಸಂಖ್ಯಾತ ಹಿಂದೂ ಸಮುದಾಯಗಳು ತಮ್ಮ ಆಧ್ಯಾತ್ಮಿಕತೆ, ಕಲೆ ಮತ್ತು ಸಂಸ್ಕೃತಿಯನ್ನು ಯಾವುದೇ ಹಸ್ತಕ್ಷೇಪವಿಲ್ಲದೆ ಅಭ್ಯಾಸ ಮಾಡಬಹುದು.

ಇದನ್ನೂ ಓದಿ : ನೀವು ಈ ಹಳ್ಳಿಗೆ ಹೋದ್ರೆ ʼಬೆತ್ತಲಾಗಿ ತಿರುಗಾಡ್ಬೇಕುʼ..! ಇಲ್ಲವೇ ಪ್ರವೇಶಕ್ಕೆ ʼಅನುಮತಿ ಇಲ್ಲ..ʼ

ಕಾತಿಕ್ ಕೈಲಾಸದಲ್ಲಿ ಏನು ನಡೆಯುತ್ತಿದೆ?

ಯುನೈಟೆಡ್ ಸ್ಟೇಟ್ ಆಫ್ ಕೈಲಾಸದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ, ಇ-ಪೌರತ್ವ ಮತ್ತು ಇ-ವೀಸಾಕ್ಕಾಗಿ ಅರ್ಜಿಗಳನ್ನು ಸಲ್ಲಿಸಬಹುದು. ನಿತ್ಯಾನಂದನ ಕಾಲ್ಪನಿಕ ದೇಶವು ತನ್ನದೇ ಆದ ಕರೆನ್ಸಿ, ಹಣಕಾಸು ವ್ಯವಸ್ಥೆ, ತನ್ನದೇ ಆದ ಪಾಸ್‌ಪೋರ್ಟ್ ಮತ್ತು ಚಿಹ್ನೆಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ವಿಶ್ವಸಂಸ್ಥೆಯು ನಿತ್ಯಾನಂದನ ದೇಶ ಕೈಲಾಸವನ್ನು ಇನ್ನೂ ಗುರುತಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News