ಬಿಜೆಪಿ ನಾಯಕರಿಂದ ನನಗೆ ಮಂತ್ರಿ ಸ್ಥಾನದ ಆಫರ್ ಬಂದಿದ್ದು ನಿಜ: ಬಿ.ಸಿ. ಪಾಟೀಲ್

ಶಿವರಾಮ್ ಹೆಬ್ಬಾರ್ ಬಗೆಗಿನ ವಿಚಾರ ನನಗೆ ಗೊತ್ತಿಲ್ಲ. ನನ್ನ ಬಗ್ಗೆ ನಾನು ಹೇಳಬಲ್ಲೇ- ಬಿ.ಸಿ. ಪಾಟೀಲ್  

Last Updated : May 21, 2018, 06:01 PM IST
ಬಿಜೆಪಿ ನಾಯಕರಿಂದ ನನಗೆ ಮಂತ್ರಿ ಸ್ಥಾನದ ಆಫರ್ ಬಂದಿದ್ದು ನಿಜ: ಬಿ.ಸಿ. ಪಾಟೀಲ್ title=
Pic: ANI

ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯುವ ನಿಟ್ಟಿನಲ್ಲಿ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಅವರಿಗೆ  ಬಿಜೆಪಿ ನಾಯಕರು ಮಂತ್ರಿ ಸ್ಥಾನದ ಆಮಿಷವೊಡ್ಡಿದ್ದರು ಎಂಬುದನ್ನು ಶಾಸಕ ಬಿ.ಸಿ. ಪಾಟೀಲ್ ಸ್ವತಃ ಒಪ್ಪಿಕೊಂಡಿದ್ದಾರೆ.

ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿ ನನಗೆ ಮಂತ್ರಿ ಸ್ಥಾನ ನೀಡುವ ಆಮಿಷವೊಡ್ಡಿದ್ದು ನಿಜ ಎಂದು ಬಿ.ಸಿ. ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸರ್ಕಾರ ರಚನೆಗೆ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿ.ಎಸ್. ಯಡಿಯೂರಪ್ಪನವರು ಕರೆ ಮಾಡಿ ಮಂತ್ರಿ ಸ್ಥಾನ ನೀಡುವ ಆಮಿಷವೊಡ್ಡಿದ್ದರು ಎಂಬ ಆರೋಪಗಳಿಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಬಿ.ಸಿ. ಪಾಟೀಲ್, ಈ ಸುದ್ದಿ ನಿಜ. ಯಡಿಯೂರಪ್ಪ, ಶ್ರೀರಾಮುಲು ಮತ್ತು ಮುರಳೀಧರ್ ರಾವ್ ನನ್ನ ಜೊತೆ ಮಾತನಾಡಿ ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದು, ಮಂತ್ರಿ ಸ್ಥಾನ ನೀಡುವುದಾಗಿ ಹೇಳಿದ್ದು ನಿಜ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶಿವರಾಂ ಹೆಬ್ಬಾರ್ ಅವರೊಂದಿಗೂ ಬಿಜೆಪಿ ನಾಯಕರು ಹಣದ ಆಮಿಷವೊಡ್ಡಿದ್ದರು ಎಂಬ ಆಡಿಯೋ ಟೇಪ್ ಬಿಡುಗಡೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಶಿವರಾಮ್ ಹೆಬ್ಬಾರ್ ಬಗೆಗಿನ ವಿಚಾರ ನನಗೆ ಗೊತ್ತಿಲ್ಲ. ನನ್ನ ಬಗ್ಗೆ ನಾನು ಹೇಳಬಲ್ಲೇ ಎಂದರು.

Trending News