ಕರ್ನಾಟಕ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?

    

Last Updated : Apr 27, 2018, 07:46 PM IST
ಕರ್ನಾಟಕ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ? title=

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಯಾವ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎನ್ನುವ ಎಲ್ಲ ಅಂಶಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆಯಾಗಿದೆ. ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ  ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿ ಇದು ಕರ್ನಾಟಕ ರಾಜ್ಯದ ಜನರ ನಾಡಿ ಮಿಡಿತವನ್ನು ಹೊಂದಿದ ದಾಖಲೆ ಎಂದು ಬಣ್ಣಿಸಿದ್ದಾರೆ.

 ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು: 

  •  5 ವರ್ಷಗಳಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ  ನಮ್ಮ ಸರ್ಕಾರವು ನೀರಾವರಿಗಾಗಿ ಸುಮಾರು 50 ಸಾವಿರ ಕೋಟಿ ರೂ.ಗಳನ್ನು ಒದಗಿಸಿದೆ ಮತ್ತು 6.5 ಲಕ್ಷ ಎಕರೆ ನೀರಾವರಿ ಭೂಮಿ ಸೃಷ್ಟಿಸಿದೆ.ಬರ-ಮುಕ್ತ ಕರ್ನಾಟಕವನ್ನು ಖಚಿತಪಡಿಸಿಕೊಳ್ಳಲು ನಾವು 1.25 ಲಕ್ಷ ಕೋಟಿ ರೂ. ನೀರಾವರಿಗಾಗಿ ಖರ್ಚು ಮಾಡಲಿದ್ದೇವೆ.
  • ಐಟಿ ಬಿಟಿ ಸಾಗುತ್ತಿರುವ ನಾವು ರಾಜ್ಯದ ಜಿಎಸ್ಡಿಪಿಯ 25% ಗಿಂತಲೂ ಹೆಚ್ಚಿನ ಕೊಡುಗೆ ನೀಡುತ್ತೇವೆ ಮತ್ತು ಉದ್ಯಮಗಳಿಗೆ ಹೆಚ್ಚಿನ ಪ್ರಚೋದನೆಯನ್ನು ನೀಡುತ್ತೇವೆ.
  • 3 ಮಿಲಿಯನ್ ಗಿಂತಲೂ ಹೆಚ್ಚು ಮಾಹಿತಿ ತಂತ್ರಜ್ಞಾನದ ಉದ್ಯೋಗಗಳನ್ನು ಪೂರೈಸಲು, ಕೌಶಲ್ಯ ವೃದ್ಧಿಸುವ ಮತ್ತು ಮಾಹಿತಿ ತಂತ್ರಜ್ಞಾನವನ್ನು ಒಳಗೊಂಡಿರುವ ಪಠ್ಯಕ್ರಮಗಳ ಮೂಲಕ ಉನ್ನತ ಮಟ್ಟದ ಐಟಿ ಪ್ರತಿಭಾ ಪೂಲ್ (ಟ್ಯಾಲೆಂಟ್ ಪೂಲ್)ನ್ನು ನಿರ್ಮಿಸುತ್ತೇವೆ.
  • ನಮ್ಮ ಸರಕಾರದ ಪ್ರಮುಖ 'ಅನ್ನ ಭಾಗ್ಯ' ಕರ್ನಾಟಕದಲ್ಲಿ ಸುಮಾರು 4 ಕೋಟಿ ಜನರಿಗೆ ಉಚಿತ ರೇಷನ್ ಒದಗಿಸುತ್ತದೆ.ಹಸಿವು ಮುಕ್ತ ರಾಜ್ಯವನ್ನು ನಿರ್ಮಿಸಲು ನಾವು ಬದ್ದರಾಗಿದ್ದು ಆದ್ದರಿಂದ , 'ಅನ್ನ ಭಾಗ್ಯ'ವನ್ನು ವಲಸಿಗ ಕಾರ್ಮಿಕರಿಗೆ ವಿಸ್ತರಿಸಲಾಗುವುದು.
  • ನಮ್ಮ ಸರ್ಕಾರ ಉತ್ತಮ ಉತ್ಪಾದನೆ ಮತ್ತು ಆದಾಯ ಭದ್ರತೆಯೊಂದಿಗೆ ರೈತರನ್ನು ಸಶಕ್ತಗೊಳಿಸಿದೆ. ಈಗ ಕೃಷಿ ಮತ್ತು ಇತರ ಕ್ಷೇತ್ರಗಳಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲು 10 ಕೃಷಿ-ಹವಾಮಾನ ವಲಯಗಳನ್ನು ಸಂಪರ್ಕಿಸುವ ಕಾರಿಡಾರ್ ನ್ನು ನಾವು ರಚಿಸುತ್ತೇವೆ.
  • ಕರ್ನಾಟಕ ಕಳೆದ ಐದು ವರ್ಷಗಳಲ್ಲಿ ಸುಮಾರು 50 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. 2018-23ರ ಹೊತ್ತಿಗೆ ನಾವು 50% ನಷ್ಟು ಉದ್ಯೋಗವನ್ನು ಹೆಚ್ಚಿಸುತ್ತೇವೆ ಮತ್ತು ಪ್ರತಿವರ್ಷ 15-20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ.
  • ಸಿದ್ದರಾಮಯ್ಯ ನೇತೃತ್ವದಲ್ಲಿ , ನಮ್ಮ ಸರ್ಕಾರವು ಸಮಂಜಸವಾದ, ಅಂತರ್ಗತ ಮತ್ತು ಗುಣಮಟ್ಟದ ಶಿಕ್ಷಣವನ್ನು ಸಕ್ರಿಯಗೊಳಿಸಿದೆ. ಆದ್ದರಿಂದ ಇದನ್ನು ಉತ್ತಮಪದಿಸುತ್ತಾ  ನಾವು ಪ್ರತಿ ಮಗುವಿಗೆ 12 ವರ್ಷಗಳ  ಶಾಲಾಶಿಕ್ಷಣವನ್ನು ಕಡ್ದಾಯಗೊಳಿಸುತ್ತೇವೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ  'ವಿದ್ಯಾಸರಿ' ಯೋಜನೆಯನ್ನು  ವಿಸ್ತರಿಸುತ್ತೇವೆ.
  • ನಾವು ಇಡೀ ದೇಶದಲ್ಲಿ  ಕರ್ನಾಟಕದಲ್ಲಿ  ಸಾರ್ವತ್ರಿಕ ಆರೋಗ್ಯ ಯೋಜನೆಯನ್ನು ಪ್ರಾರಂಭಿಸಿದ ಮೊದಲ ರಾಜ್ಯವಾಗಿತ್ತು. ಆರೋಗ್ಯ ಸೂಚ್ಯಂಕವನ್ನು  ಸುಧಾರಿಸಲು ಮತ್ತು ಅಪೌಷ್ಟಿಕತೆ ಮುಕ್ತ ಕರ್ನಾಟಕದ ನಿರ್ಮಾಣ  ಮಾಡಲು ನಾವು UHC & Mathrupoorna ನಂತಹ ಪ್ರಮುಖ ಕಾರ್ಯಕ್ರಮಗಳನ್ನು ವಿಸ್ತರಿಸುತ್ತೇವೆ.

 

Trending News