2021-22ನೇ ಸಾಲಿನಲ್ಲಿ 37,500 ಕೋಟಿ ರೂ. ಪ್ಲಾಸ್ಟಿಕ್ ಉತ್ಪನ್ನ ಆಮದು..!

4th Technology conference: 4ನೇ ಸಮ್ಮೇಳನ ವ್ಯಾಪಾರ ಮತ್ತು ಉತ್ಪಾದನೆಯ ಮಾರ್ಗನಕ್ಷೆಯನ್ನು ರೂಪಿಸಲಿದೆ. ಮುಂದಿನ ಸಮ್ಮೇಳನಗಳು ಆಗಸ್ಟ್ 18ರಂದು ಚೆನ್ನೈ ಮತ್ತು ಆಗಸ್ಟ್ 31ರಂದು ಕೊಲ್ಕತ್ತಾದಲ್ಲಿ ನಡೆಯಲಿವೆ.

Written by - Manjunath Hosahalli | Edited by - Puttaraj K Alur | Last Updated : Aug 10, 2023, 06:39 PM IST
  • ದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿ 1 ವರ್ಷವೇ ಕಳೆದಿದೆ
  • ದೇಶದಲ್ಲಿ ಪ್ಲಾಸ್ಟಿಕ್ ಆಮದು ಮಾತ್ರ ಕಡಿಮೆ‌ ಆಗಿಲ್ಲ
  • ಭಾರತವು 37,500 ಕೋಟಿಯಷ್ಟು ಪ್ಲಾಸ್ಟಿಕ್‌ ಉತ್ಪನ್ನ ಆಮದು ಮಾಡಿಕೊಂಡಿದೆ
2021-22ನೇ ಸಾಲಿನಲ್ಲಿ 37,500 ಕೋಟಿ ರೂ. ಪ್ಲಾಸ್ಟಿಕ್ ಉತ್ಪನ್ನ ಆಮದು..!  title=
37,500 ಕೋಟಿಯಷ್ಟು ಪ್ಲಾಸ್ಟಿಕ್‌ ಉತ್ಪನ್ನ ಆಮದು!

ಬೆಂಗಳೂರು: ದೇಶದಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿ 1 ವರ್ಷವೇ ಕಳೆದಿದೆ. ಹೀಗಿದ್ರೂ ದೇಶದಲ್ಲಿ ಪ್ಲಾಸ್ಟಿಕ್ ಆಮದು ಮಾತ್ರ ಕಡಿಮೆ‌ ಆಗಿಲ್ಲ ಎಂಬುದಕ್ಕೆ ಸಾಕ್ಷಿ ಸಾಬೀತಾಗಿದೆ. ಸ್ವತಃ ಪ್ಲಾಸ್ಟಿಕ್ ಮ್ಯಾನ್ಯುಫ್ಯಾಕ್ಚರಿಂಗ್ ಮಾಲೀಕರೇ ಈ ಬಗ್ಗೆ ಅಂಕಿ ಅಂಶಗಳನ್ನು ನೀಡಿದ್ದಾರೆ. 2021-22ನೇ ಸಾಲಿನಲ್ಲಿ ಭಾರತ ದೇಶ ಸುಮಾರು 37,500 ಕೋಟಿ ರೂ.ಗಳ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಈ ಆಮದಿನ ಅವಲಂಬನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಉತ್ಪಾದನಾ ಕ್ಷೇತ್ರದ ವಿಫುಲ ಅವಕಾಶಗಳನ್ನು ಉದ್ಯಮಿಗಳು ಗಮನಹರಿಸಬೇಕಾಗಿದೆ. ಈ ಬಗ್ಗೆ ಆಲ್‌ ಇಂಡಿಯಾ ಪ್ಲಾಸ್ಟಿಕ್‌ ಮ್ಯಾನುಫ್ಯಾಕ್ಚರರ್ಸ್‌ ಅಸೋಸಿಯೇಷನ್‌ ಆಡಳಿತ ಮಂಡಳಿಯ ಅಧ್ಯಕ್ಷರಾದ ಅರವಿಂದ್‌ ಮೆಹ್ತಾ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ 4ನೇ ತಂತ್ರಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಖಿಲ ಭಾರತ ಪ್ಲಾಸ್ಟಿಕ್‌ ಉತ್ಪಾದಕರ ಸಂಘದ ಇತ್ತೀಚಿನ ಅಧ್ಯಯನದ ಪ್ರಕಾರ 2021-22ರಲ್ಲಿ ಭಾರತ 37,500 ಕೋಟಿ ರೂ. ಮೊತ್ತದ ಪ್ಲಾಸ್ಟಿಕ್‌ ಆಮದು ಮಾಡಿಕೊಂಡಿದೆ. ನೆರೆಯ ಚೀನಾ ದೇಶದಿಂದ ಶೇ.48ರಷ್ಟು ವಸ್ತುಗಳು ಆಮದಾಗುತ್ತಿವೆ. ಆಮದು ಅವಲಂಬನೆಯನ್ನು ತಪ್ಪಿಸಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಎಐಪಿಎಂಎ ದೇಶದ 6 ವಲಯಗಳಲ್ಲಿ ಪ್ಲಾಸ್ಟಿಕ್‌ ಕ್ಷೇತ್ರದಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಇದನ್ನೂ ಓದಿ: ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದ ಖಾಸಗಿ ಬಸ್ಗಳು; ಡಬ್ಕಿ ಡಬಲ್ ಟಿಕೆಟ್ ದರ ವಸೂಲಿ!

ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳು ದೇಶದ ಪ್ಲಾಸ್ಟಿಕ್ ವಲಯಕ್ಕೆ ವೇಗವರ್ಧಕವಾಗಿವೆ. ಸಮ್ಮೇಳನ ತಂತ್ರಜ್ಞಾನ ಮತ್ತು ವ್ಯಾಪಾರ ಅವಕಾಶಗಳ ಕುರಿತು ಬೆಳಕು ಚೆಲ್ಲಲಿದೆ. ಪ್ರದರ್ಶನದಲ್ಲಿ ಆಮದು ಮಾಡಿಕೊಂಡ ವಸ್ತುಗಳ ಪ್ರದರ್ಶನದ ಜೊತೆಗೆ ಈ ವಲಯದಲ್ಲಿ ಆಗುತ್ತಿರುವ ಆಧುನಿಕ ಬೆಳವಣಿಗೆ ಕುರಿತು ಬೆಳಕು ಚೆಲ್ಲಲಾಗುತ್ತಿದೆ. ದೇಶ ಪ್ಲಾಸ್ಟಿಕ್ ವಲಯದಲ್ಲಿ ಸ್ವಾವಲಂಬಿಯಾಗುವ ಗುರಿ ಹೊಂದಿದ್ದು, ಇದಕ್ಕಾಗಿ ಇತ್ತೀಚಿನ ತಂತ್ರಜ್ಞಾನಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಎಐಪಿಎಂಎ ಅಧ್ಯಕ್ಷ ಮಯೂರ್‌ ಡಿ. ಶಾ ಮಾತನಾಡಿ, ಭಾರತ ವಿಶ್ವದ ಪ್ರಮುಖ ಪ್ಲಾಸ್ಟಿಕ್ ಉತ್ಪಾದನಾ ತಾಣವಾಗಿ ಹೊರಹೊಮ್ಮಲು ಅವಕಾಶವಿದ್ದು, ವಾರ್ಷಿಕ 7 ಲಕ್ಷ ಕೋಟಿ ರೂ. ಮೊತ್ತದ ಪ್ಲಾಸ್ಟಿಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆರ್ಥಿಕತೆಯಲ್ಲಿ ಭಾರತ ನಿರ್ಣಾಯಕ ಪಾತ್ರ ವಹಿಸಲಿದ್ದು, 50 ಸಾವಿರ ಪ್ಲಾಸ್ಟಿಕ್ ಸಂಸ್ಕರಣಾ ಕೇಂದ್ರಗಳ ಮೂಲಕ ಸರಕು ಉತ್ಪಾದಿಸಬಹುದಾಗಿದೆ. ಇದು ಈ ವಲಯದ ಶೇ.90ರಷ್ಟು ಪ್ರಮಾಣವಾಗಿದೆ ಎಂದರು.

ಇದನ್ನೂ ಓದಿ: ನೂರು ದಿನದೊಳಗೆ ೧೦೦ ಪರ್ಸೆಂಟ್ ಸರ್ಕಾರ : ಸುನಿಲ್ ಕುಮಾರ್

ದೇಶವನ್ನು 5 ಟ್ರಿಲಿಯನ್ ಡಾಲರ್ ಮೊತ್ತದ ಆರ್ಥಿಕತೆಯ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಪ್ಲಾಸ್ಟಿಕ್ ಕೈಗಾರಿಕೆ ಪ್ರಮುಖ ಪಾತ್ರ ವಹಿಸಲಿದೆ. ಅಹಮದಾಬಾದ್‍ನಲ್ಲಿ ನಡೆದ ಸಮ್ಮೇಳನದಲ್ಲಿ ಉತ್ಪಾದಕರು ಮತ್ತು ಮಾರಾಟಗಾರರ ನಡುವೆ ನೇರ ವೇದಿಕೆ ಕಲ್ಪಿಸಲಾಗಿತ್ತು. ಇದು ಹಲವಾರು ತಂತ್ರಜ್ಞಾನ ಮತ್ತು ನಾವೀನ್ಯತೆಯ ಮಾದರಿಗಳನ್ನು ಆಮದು ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸಿ.ಎ.ಶಶಿಧರ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿರುವ ಹಲವಾರು ಸಣ್ಣ ಕೈಗಾರಿಕೆಗಳು ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸುತ್ತಿವೆ. ಆದರೆ ಜನರಲ್ಲಿರುವ ತಪ್ಪು ತಿಳುವಳಿಕೆಯಿಂದಾಗಿ ಉತ್ಪಾದಕರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಏಕ ಬಳಕೆಯ ಪ್ಲಾಸ್ಟಿಕ್‌ ಮಾತ್ರ ಬ್ಯಾನ್‌ ಆಗಿದ್ದು, ಬಹುಬಳಕೆಯ ಮತ್ತು ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ತಯಾರಿಸುವ ಕೈಗಾರಿಕೆಗಳ ಹಿತರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಕೈಗಾರಿಕಾ ನೀತಿಯಲ್ಲಿ ಪ್ಲಾಸ್ಟಿಕ್‌ ಕೈಗಾರಿಕೆಗಳ ಯಾವುದೇ ಪ್ರಸ್ತಾಪವಿಲ್ಲ. ಕ್ಲಸ್ಟರ್‌ ಬೇಸ್ಡ್‌ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ಅವಕಶ್ಯತೆಯಿದೆ. ಪ್ಲಾಸ್ಟಿಕ್‌ ಕ್ಲಸ್ಟರ್‌ ನಿರ್ಮಾಣದಿಂದ ಹಲವಾರು ಕೈಗಾರಿಕೆಗಳಿಗೆ ಅನುಕೂಲವಾಗಿಲಿದೆ ಎಂದು ಹೇಳಿದರು. 

ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಮಾತನಾಡಿ, ರಾಜ್ಯದಲ್ಲಿ ಹೂಡಿಕೆಗೆ ವ್ಯಾಪಕವಾದ ಅವಕಾಶವಿದೆ. ಸಣ್ಣ ಕೈಗಾರಿಕೆಗಳಿಗೂ ರಾಜ್ಯದಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದ್ದು, ಸಬ್ಸಿಡಿ ಹಾಗೂ ಹಲವಾರು ಆಕರ್ಷಕ ಯೋಜನೆಗಳನ್ನು ಅಳವಡಿಸಲಾಗಿದೆ. ಏಕಬಳಕೆಯ ಪ್ಲಾಸ್ಟಿಕ್‌ ಹೊರತುಪಡಿಸಿ ಬೇರೆ ಉತ್ಪನ್ನಗಳ ತಯಾರಿಕೆಗೆ ಯಾವುದೇ ಸಮಸ್ಯೆ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ಲಾಸ್ಟಿಕ್‌ ಉದ್ಯಮವನ್ನು ಪ್ರಾರಂಭಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಉದ್ಯೋಗ ಮಿತ್ರ ಸಂಪರ್ಕಿಸುವಂತೆ ಉದ್ಯಮಿಗಳಿಗೆ ಕರೆ ನೀಡಿದರು. ಇನ್ನು ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ಲಾಸ್ಟಿಕ್‌ ಉತ್ಪಾದಕರು ಭಾಗವಹಿಸಿದ್ದರು. 4ನೇ ಸಮ್ಮೇಳನ ವ್ಯಾಪಾರ ಮತ್ತು ಉತ್ಪಾದನೆಯ ಮಾರ್ಗನಕ್ಷೆಯನ್ನು ರೂಪಿಸಲಿದೆ. ಮುಂದಿನ ಸಮ್ಮೇಳನಗಳು ಆಗಸ್ಟ್ 18ರಂದು ಚೆನ್ನೈ ಮತ್ತು ಆಗಸ್ಟ್ 31ರಂದು ಕೊಲ್ಕತ್ತಾದಲ್ಲಿ ನಡೆಯಲಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News