ಟೀಂ ಇಂಡಿಯಾದ ಹೊಸ ಕೋಚ್‌ ಗೌತಮ್‌ ಗಂಭೀರ್‌ ಸಂಭಾವನೆ ಎಷ್ಟು ಗೊತ್ತಾ..?

Gautam Gambhirs Remuneration: ಟಿ20 ವಿಶ್ವಕಪ್‌ 2024 ಚಾಂಪಿಯನ್‌ಶಿಪ್‌ ಗೆದ್ದ ನಂತರ ರಾಹುಲ್‌ ದ್ರಾವಿಡ್‌ ಅವರ ಕೋಚ್‌ ಅಧಿಅಕರಾವದಿ ಮುಗಿದಿದ್ದು. ಈ ಸ್ಥಾನಕ್ಕೆ ರಾಹುಲ್‌ ಗುಡ್‌ ಬೈ ಹೇಳಿದ್ದು ಗೊತ್ತೇ ಇದೆ. ಇದೀಗ ಈ ಸ್ಥಾನಕ್ಕೆ ಗೌತಮ್‌ ಗಂಭಿರ್‌ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ವಿಷಯವನ್ನು ಬಿಸಿಸಿಐ ಅದಿಕೃತವಾಗಿ ಘೋಷಣೆ ಮಾಡಿದೆ.   

Written by - Zee Kannada News Desk | Last Updated : Jul 10, 2024, 07:55 AM IST
  • ಮಂಗಳವಾರ, ಜುಲೈ 09ರಂದು ಬಿಸಿಸಿಐ ಈ ವಿಷಯವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
  • ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಕೋಚ್‌ ಆಗಿ ಕಾರ್ಯ ನಿರ್ವಹಿಸಲು ವರ್ಷಕ್ಕೆ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ.
  • ಬಿಸಿಸಿಐ ಸಮಯ ತೆಗೆದುಕೊಂಡು ಕೊನೆಗೆ ಗೌತಮ್‌ ಅವರನ್ನು ಟೀಂ ಇಂಡಿಯಾದ ವಿನೂತನ ಕೋಚ್‌ ಆಗಿ ಘೋಷಣೆ ಮಾಡಿದೆ.
ಟೀಂ ಇಂಡಿಯಾದ ಹೊಸ ಕೋಚ್‌ ಗೌತಮ್‌ ಗಂಭೀರ್‌ ಸಂಭಾವನೆ ಎಷ್ಟು ಗೊತ್ತಾ..? title=

Gautam Gambhirs Remuneration: ಟಿ20 ವಿಶ್ವಕಪ್‌ 2024 ಚಾಂಪಿಯನ್‌ಶಿಪ್‌ ಗೆದ್ದ ನಂತರ ರಾಹುಲ್‌ ದ್ರಾವಿಡ್‌ ಅವರ ಕೋಚ್‌ ಅಧಿಅಕರಾವದಿ ಮುಗಿದಿದ್ದು. ಈ ಸ್ಥಾನಕ್ಕೆ ರಾಹುಲ್‌ ಗುಡ್‌ ಬೈ ಹೇಳಿದ್ದು ಗೊತ್ತೇ ಇದೆ. ಇದೀಗ ಈ ಸ್ಥಾನಕ್ಕೆ ಗೌತಮ್‌ ಗಂಭಿರ್‌ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ವಿಷಯವನ್ನು ಬಿಸಿಸಿಐ ಅದಿಕೃತವಾಗಿ ಘೋಷಣೆ ಮಾಡಿದೆ. 

ರಾಹುಲ್‌ ದ್ರಾವಿಡ್‌ ಕೋಚ್‌ ಅಧಿಕಾರಕ್ಕೆ ವಿದಾಯ ಹೇಳಿದಾಗಿನಿಂದಲೂ ಗೌತಮ್‌ ಹೆಸರು ಕೇಳಿ ಬರುತ್ತಿತ್ತು. ಇದರೆ ಬೆನ್ನಲ್ಲೆ ಸುದ್ದಿಗೆ ಪುಷ್ಟಿ ನೀಡುವಂತೆ ಗೌತಮ್‌ ಕೆಕೆಆರ್‌ ಮೆಂಟರ್‌ ಸ್ಥಾನಕ್ಕೆ ವಿದಾಯ ಹೇಳಿದ್ದರು. ಈ ನಡಿಗೆ ಗೌತಮ್‌ ಮುಂದಿನ ಭಾರತ ತಂಡದ ಕೋಚ್‌ ಆಗುತ್ತಾರೆ ಎನ್ನುವ ಸುದ್ದಿಯನ್ನು ಬಹುತೇಕ ಖಚಿತ ಪಡೆಸಿತ್ತು. ಇದೀಗ ಮಂಗಳವಾರ, ಜುಲೈ 09ರಂದು ಬಿಸಿಸಿಐ ಈ ವಿಷಯವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.

ಭಾರತ ತಂಡಕ್ಕೆ ಕೋಚ್‌ ಆಗಿ ಗೌತಮ್‌ ಅವರ ಹೆಸರನ್ನು ಘೋಷಣೆ ಮಾಡಲು ಬಿಸಿಐ ಏಕೆ ಇಷ್ಟು ತಡ ಮಾಡಿತು ಎನ್ನು ಗುಸುಗುಸು ಕೇಳಿಬಂದಿತ್ತು, ಇದಕ್ಕೆ ಕಾರಣ ಸಂಭಾವನೆಯಂತೆ.

ಇದನ್ನೂ ಓದಿ: ರಾಹುಲ್‌ ದರಾವಿಡ್‌ಗೆ ಬಂಫರ್‌ ಆಫರ್‌..? ಬ್ಲಾಂಕ್‌ ಚೆಕ್‌ ನೀಡಿದ ಬಲಿಷ್ಠ ತಂಡ..!

ಹೌದು, ರಾಹುಲ್‌ ದ್ರಾವಿಡ್‌ ಟೀಂ ಇಂಡಿಯಾ ಕೋಚ್‌ ಆಗಿ ಕಾರ್ಯ ನಿರ್ವಹಿಸಲು ವರ್ಷಕ್ಕೆ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ. ಆದರೆ ಗೌತಮ್‌ ಗಂಭೀರ್‌ ಟೀಂ ಇಂಡಿಯಾ ಕೋಚ್‌ ಕಾರ್ಯ ನಿರ್ವಹಿಸಲು ಇನ್ನೂ ಹೆಚ್ಚು ಸಂಭಾವನೆ ಕೇಳಿದ್ದರಂತೆ. ಇದೇ ಕಾರಣದಿಂದಾಗಿ ಬಿಸಿಸಿಐ ಸಮಯ ತೆಗೆದುಕೊಂಡು ಕೊನೆಗೆ ಗೌತಮ್‌ ಅವರನ್ನು ಟೀಂ ಇಂಡಿಯಾದ ವಿನೂತನ ಕೋಚ್‌ ಆಗಿ ಘೋಷಣೆ ಮಾಡಿದೆ.

 ಮೆಂಟರ್ ಆಗಿ ಕೆಕೆಆರ್ ತಂಡಕ್ಕೆ ಮರಳಿದ ಗಂಭೀರ್, 2024ರಲ್ಲಿ ಫ್ರಾಂಚೈಸಿಯ ದಶಕದ ಹಿಂದಿನ ಕಪ್ ಕನಸನ್ನು ನನಸು ಮಾಡಿದರು. ಇದರೊಂದಿಗೆ ಗಂಭೀರ್ ಅವರನ್ನು ತಮ್ಮ ಫ್ರಾಂಚೈಸಿಯಲ್ಲಿ ಉಳಿಸಿಕೊಳ್ಳಲು ಕೆಕೆಆರ್ ಕೂಡ ಭಾರೀ ಮೊತ್ತವನ್ನು ಪಾವತಿಸಲು ಸಿದ್ಧವಾಗಿತ್ತು, ಆದರೆ ಇದೀಗ ಬಿಸಿಸಿಐ ಗೌತಮ್‌ ಬೇಡಿಕೆಗೆ ಒಪ್ಪಿದಂತಿದೆ ಎನ್ನುವ ಸುದ್ದಿ ಕೂಡ ಕೇಳಿ ಬರುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News