ರಾಹುಲ್‌ ದರಾವಿಡ್‌ಗೆ ಬಂಫರ್‌ ಆಫರ್‌..? ಬ್ಲಾಂಕ್‌ ಚೆಕ್‌ ನೀಡಿದ ಬಲಿಷ್ಠ ತಂಡ..!

Rahul Dravid: ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ವಿದಾಯ ಹೇಳಿದ ಬೆನ್ನಲ್ಲೆ ರಾಹುಲ್ ದ್ರಾವಿಡ್ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಕೆಲವು ತಂಡಗಳು ಮೆಗಾ ಹರಾಜಿನಲ್ಲಿ ರಾಹುಲ್‌ ದಾವಿಡ್‌ ಅವರನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿವೆ.  ಐಪಿಎಲ್ 2025 ಹರಾಜಿಗೂ ಮುನ್ನವೇ ಮೆಗಾ ಹರಾಜು ನಡೆಯಲಿದೆ ಎಂದು ವರದಿಯಾಗಿದೆ.  

Written by - Zee Kannada News Desk | Last Updated : Jul 9, 2024, 02:53 PM IST
  • ದ್ರಾವಿಡ್ ದಿಟ್ಟ ಆಟಗಾರರನ್ನು ಮಾನಸಿಕವಾಗಿ ಹಾಗೂ ತಾಂತ್ರಗಾರಿಕೆಯಲ್ಲಿ ಸಿದ್ಧಗೊಳಿಸುವುದರಲ್ಲಿ ನಿಪುಣರು.
  • ಐಪಿಎಲ್ ಫ್ರಾಂಚೈಸಿಗಳು ದ್ರಾವಿಡ್ ಪರ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
  • ದ್ರಾವಿಡ್ ಅವರನ್ನು ಕೆಕೆಆರ್ ಫ್ರಾಂಚೈಸಿ ಸಂಪರ್ಕಿಸಿದೆ ಎಂದು ಬಂಗಾಳ ಮಾಧ್ಯಮಗಳು ಹೇಳಿಕೊಂಡಿವೆ.
ರಾಹುಲ್‌ ದರಾವಿಡ್‌ಗೆ ಬಂಫರ್‌ ಆಫರ್‌..? ಬ್ಲಾಂಕ್‌ ಚೆಕ್‌ ನೀಡಿದ ಬಲಿಷ್ಠ ತಂಡ..! title=

Rahul Dravid: ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ವಿದಾಯ ಹೇಳಿದ ಬೆನ್ನಲ್ಲೆ ರಾಹುಲ್ ದ್ರಾವಿಡ್ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಕೆಲವು ತಂಡಗಳು ಮೆಗಾ ಹರಾಜಿನಲ್ಲಿ ರಾಹುಲ್‌ ದಾವಿಡ್‌ ಅವರನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿವೆ.  ಐಪಿಎಲ್ 2025 ಹರಾಜಿಗೂ ಮುನ್ನವೇ ಮೆಗಾ ಹರಾಜು ನಡೆಯಲಿದೆ ಎಂದು ವರದಿಯಾಗಿದೆ.

ದ್ರಾವಿಡ್ ದಿಟ್ಟ ಆಟಗಾರರನ್ನು ಮಾನಸಿಕವಾಗಿ ಹಾಗೂ ತಾಂತ್ರಗಾರಿಕೆಯಲ್ಲಿ ಸಿದ್ಧಗೊಳಿಸುವುದರಲ್ಲಿ ನಿಪುಣರು. ಇವರ ಕೋಚಿಂಗ್‌ನಲ್ಲಿ ಟೀಂ ಇಂಡಿಯಾ ಹಲವು ಸಾಧನೆ ಮಾಡಿರುವುದು ಗೊತ್ತೇ ಇದೆ. ಇದೇ ಕಾರಣದಿಂದಾಗಿ ಐಪಿಎಲ್‌ ಫ್ರಾಂಚೈಸಿಗಳು ದ್ರಾವಿಡ್‌ ಮೇಲೆ ಕಣ್ಣಿಟ್ಟಿವೆ.

ಐಪಿಎಲ್ ಫ್ರಾಂಚೈಸಿಗಳು ದ್ರಾವಿಡ್ ಪರ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ತರಬೇತುದಾರ ಅಥವಾ ಮಾರ್ಗದರ್ಶಕರಾಗಿ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ನಡಿಸುತ್ತಿದ್ದಾರೆ. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ದ್ರಾವಿಡ್‌ಗಾಗಿ ಎಲ್ಲಾ ಫ್ರಾಂಚೈಸಿಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟಿದೆ. 

ಇದನ್ನೂ ಓದಿ: ಗೆಳೆಯನ ಪೋಟೊ ರಿವೀಲ್‌ ಮಾಡುವ ಮೂಲಕ ಪಡ್ಡೆ ಹುಡುಗರ ಹೃದಯ ಒಡೆದ ಸ್ಮೃತಿ ಮಂಧಾನ..!

ದ್ರಾವಿಡ್ ಅವರನ್ನು ಕೆಕೆಆರ್ ಫ್ರಾಂಚೈಸಿ ಸಂಪರ್ಕಿಸಿದೆ ಎಂದು ಬಂಗಾಳ ಮಾಧ್ಯಮಗಳು ಹೇಳಿಕೊಂಡಿವೆ. ಆದರೆ ಕೆಕೆಆರ್ ದ್ರಾವಿಡ್‌ಗೆ ಕೋಚ್‌ಗಿಂತ ಮೆಂಟರ್ ಪಾತ್ರವನ್ನು ವಹಿಸುವಂತೆ ಕೇಳಿಕೊಂಡಿದೆ ಎಂದು ವರದಿಯಾಗಿದೆ. ಇದಕ್ಕಾಗಿ ದ್ರಾವಿಡ್ ಅವರಿಗೆ ಖಾಲಿ ಚೆಕ್ ನೀಡಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಐಪಿಎಲ್-2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿದ್ದು ಗೊತ್ತೇ ಇದೆ.   ಕೋಲ್ಕತ್ತಾದ ಯಶಸ್ಸಿನಲ್ಲಿ ಗೌತಮ್ ಗಂಭೀರ್ ಮಾರ್ಗದರ್ಶಕರಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಟೀಂ ಇಂಡಿಯಾ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ಗಂಭೀರ್ ಕೆಕೆಆರ್ ಮೆಂಟರ್ ಕರ್ತವ್ಯಕ್ಕೆ ವಿದಾಯ ಹೇಳಿದ್ದಾರೆ. ಇದರೊಂದಿಗೆ ಕೆಕೆಆರ್ ಫ್ರಾಂಚೈಸಿ ಗಂಭೀರ್ ಬದಲಿಗೆ ದ್ರಾವಿಡ್ ಅವರನ್ನು ಕಣಕ್ಕಿಳಿಸುವ ನಿರೀಕ್ಷೆಯಲ್ಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News