ಖಾಲಿ ಬಿಟ್ಟ ಸೈಟ್ಗಳೇ ಟಾರ್ಗೆಟ್: ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

ಸುವರ್ಣಮ್ಮ ಎಂಬುವರಿಗೆ 1988ತಲ್ಲಿ‌ ಎಚ್ಎಂಟಿ‌ ಲೇಔಟ್ ನಲ್ಲಿ ಸೈಟ್ ಹಂಚಿಕೆಯಾಗಿತ್ತು. ತದ ನಂತರ ಅವರು ತಮ್ಮ ಹೆಸರಿನಲ್ಲಿ ಕ್ರಯಪತ್ರ ಮಾಡಿಸಿಕೊಂಡಿದ್ದರು. ಕೆಲ ತಿಂಗಳ ಬಳಿ ಸೈಟ್ ಬಳಿ ತೆರಳಿದ್ದಾಗ ತನ್ನ‌ ಹೆಸರಿನ ಮೂಲಕವೇ ಸೈಟ್ ಮಾರಾಟ ಮಾಡಿ ವಂಚಿಸಿದ್ದಾರೆ ಎಂದು ಗೊತ್ತಾಗಿತ್ತು.‌ ಈ ಸಂಬಂಧ ವಿದ್ಯಾರಣ್ಯಪುರ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Written by - Yashaswini V | Last Updated : May 20, 2022, 02:20 PM IST
  • ನಕಲಿ ದಾಖಲಾತಿ ಸೃಷ್ಟಿಸಿ ಸೈಟ್ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ
  • ಕಬೀರ್ ಆಲಿ, ಪೈಜುಲ್ಲಾ, ಜಯಮ್ಮ, ಜಗದೀಶ್, ಪೂಜಾ ಬಂಧಿತ ಆರೋಪಿಗಳು
  • ಹಲವು ವರ್ಷಗಳಿಂದ ಖಾಲಿ ಇರುವ ನಿವೇಶನಗಳನ್ನ ಗುರುತಿಸುತ್ತಿದ್ದ ಆರೋಪಿಗಳು
ಖಾಲಿ ಬಿಟ್ಟ ಸೈಟ್ಗಳೇ ಟಾರ್ಗೆಟ್: ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್ title=
Sites target

ಬೆಂಗಳೂರು: ರಾಜಧಾನಿಯಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟದೆ ‌ಖಾಲಿ‌ ನಿವೇಶನ ಹಾಗೇ ಬಿಟ್ಟಿದ್ದೀರಾ ? ಅಥವಾ ಭವಿಷ್ಯದಲ್ಲಿ ಸೈಟ್ ಮಾರಾಟ ಮಾಡಿ ಹೆಚ್ಚು ಹಣ ಸಂಪಾದಿಸಬಹುದು ಎಂದು ನಿವೇನಾದರೂ ಲೆಕ್ಕಚಾರ ಹಾಕಿಕೊಂಡಿದ್ದೀರಾ? ಹಾಗಾದರೆ ನೀವು ಈ ಸ್ಟೋರಿ ಓದಲೇಬೇಕಿದೆ. ಕೊಂಚ ಯಾಮಾರಿದರೂ ಕಷ್ಟಪಟ್ಟು ಖರೀದಿ‌ ಮಾಡಿದ ಸೈಟು ವಂಚಕರ ಪಾಲಾಗಲಿದೆ.
ರಾಜಧಾನಿಯಲ್ಲಿ ಖಾಲಿಯಿರುವ ಸೈಟ್ ಗುರುತಿಸಿ ಮಾಲೀಕರ ಹೆಸರಿನಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಅಕ್ರಮವಾಗಿ ಹಣ ಸಂಪಾದನೆ‌ ಮಾಡಿದ್ದ ಐವರು ಆರೋಪಿಗಳನ್ನು ವಿದ್ಯಾರಣ್ಯಪುರ‌ ಪೊಲೀಸರು ಬಂಧಿಸಿದ್ದಾರೆ.

ನರಸೀಪುರ ಗ್ರಾಮದ ನಿವಾಸಿ ಸುವರ್ಣಮ್ಮ‌ ಎಂಬುವರು ನೀಡಿದ‌ ದೂರಿನ ಮೇರೆಗೆ ಕಬೀರ್ ಆಲಿ, ಫೈಜ್ ಸುಲ್ತಾನ, ಕಲ್ಪನಾ, ಯೋಗೇಶ್ ಹಾಗೂ ಪೂಜಾ ಎಂಬುವರನ್ನು ಬಂಧಿಸಿ‌ ಜೈಲಿಗಟ್ಟಲಾಗಿದೆ.‌ ಬಂಧಿತರಿಂದ
102 ಗ್ರಾಂ ತೂಕದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಸಫಾರಿ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ‌. 

ಸುವರ್ಣಮ್ಮ ಎಂಬುವರಿಗೆ 1988ತಲ್ಲಿ‌ ಎಚ್ಎಂಟಿ‌ ಲೇಔಟ್ ನಲ್ಲಿ ಸೈಟ್ ಹಂಚಿಕೆಯಾಗಿತ್ತು. ತದ ನಂತರ ಅವರು ತಮ್ಮ ಹೆಸರಿನಲ್ಲಿ ಕ್ರಯಪತ್ರ ಮಾಡಿಸಿಕೊಂಡಿದ್ದರು. ಕೆಲ ತಿಂಗಳ ಬಳಿ ಸೈಟ್ ಬಳಿ ತೆರಳಿದ್ದಾಗ ತನ್ನ‌ ಹೆಸರಿನ ಮೂಲಕವೇ ಸೈಟ್ ಮಾರಾಟ ಮಾಡಿ ವಂಚಿಸಿದ್ದಾರೆ ಎಂದು ಗೊತ್ತಾಗಿತ್ತು.‌ ಈ ಸಂಬಂಧ ವಿದ್ಯಾರಣ್ಯಪುರ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ- ಹುಡುಗಿ ಮನೆಯವರು ಒಪ್ಪಿದ್ರೆ ಮದುವೆ ಆಗ್ತಿನಿ: ಆ್ಯಸಿಡ್ ನಾಗ

ಸದ್ಯ ಬಂಧಿತ ಆರೋಪಿ ಕಬೀರ್ ಆಲಿ ಆರ್.ಟಿ.ನಗರ‌‌ ನಿವಾಸಿಯಾಗಿದ್ದು ರಿಯಲ್ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ. ನಗರದಲ್ಲಿ ಖಾಲಿಯಿರುವ ಸೈಟುಗಳನ್ನು ಗುರುತಿಸಿಕೊಂಡು ಅಕ್ಕಪಕ್ಕದವರಿಗೆ ವಿಚಾರಿಸಿ ಸೈಟು ಮಾಲೀಕರ ಹೆಸರು ಹಾಗೂ ವಿವರಗಳನ್ನು‌ ಪಡೆದುಕೊಳ್ಳುತ್ತಿದ್ದ. ಅದೇ ರೀತಿ ಸುವರ್ಣಮ್ಮಗೆ ಸೇರಿದ‌ ಸೈಟಿನ ಕಾಗದಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡಿದ್ದ. ಕಲ್ಪನಾ ಎಂಬಾಕೆಯನ್ನು ಸುವರ್ಣಮ್ಮ  ಮಗಳು ಎಂದು ಬಿಂಬಿಸಿ ನಕಲಿ  ಸೈಟ್ ನೀಡಿರುವ ಹಾಗೇ ನಕಲಿ ದಾಖಲೆ ಸೃಷ್ಟಿಸಲಾಗಿತ್ತು.   ನಂತರ ಕಲ್ಪನಾ ನಕಲಿ ಗಂಡ ಯೋಗೇಶ್ ಸೈಟು ಹಸ್ತಾಂತಸಲಾಗಿತ್ತು. ಬಳಿಕ ಪೈಜ್ ಸುಲ್ತಾನ ಹೆಸರಿನಲ್ಲಿ ಅಗ್ರಿಮೆಂಟ್ ಮಾಡಿಸಿಕೊಂಡು‌ ಕೆಲ ದಿನಗಳ ಬಳಿಕ ಕ್ಯಾನ್ಸಲ್ ರದ್ದು ಮಾಡಿಸಿ ಆರೋಪಿ ಯೊಗೇಶ್ ಮುಖಾಂತರ ವೆಂಕಟಸ್ವಾಮಿ ಅವರಿಗೆ 65 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಬಂದ ಹಣದಲ್ಲಿ‌ ಸಹಚರರಿಗೆ ಕಮಿಷನ್ ನೀಡಿ ಉಳಿದ ಹಣವನ್ನ‌ ಕಬೀರ್ ಹಾಗೂ ಫೈಜ್ ಸುಲ್ತಾನ ಮೋಜು ಮಸ್ತಿ ಮಾಡಿದ್ದರು.

ಇದನ್ನೂ ಓದಿ- Bengaluru Acid Attack: ಸ್ವಾಮೀಜಿ ವೇಷತೊಟ್ಟು ಎಸ್ಕೇಪ್ ಆಗಿದ್ದ ಆ್ಯಸಿಡ್ ನಾಗ ಅರೆಸ್ಟ್!

ಪದವೀಧರರಾಗಿದ್ದ ಫೈಜ್ ಸುಲ್ತಾನ:
ವಂಚನೆ‌ ಪ್ರಕರಣದಲ್ಲಿ ಪ್ರಮುಖ‌ ಆರೋಪಿಯಾಗಿರುವ ಪೈಜ್ ಸುಲ್ತಾನ ಪಧವೀಧರೆಯಾಗಿದ್ದಾಳೆ. ವಿವಾಹಿತೆಯಾಗಿರುವ ಈಕೆ ವೈಯಕ್ತಿಕ ಕಾರಣಕ್ಕಾಗಿ ಗಂಡನನ್ನು ತೊರೆದಿದ್ದಳು‌. ಪರಿಚಿತನಾಗಿದ್ದ ಕಬೀರ್ ಜೊತೆ ಸೇರಿಕೊಂಡು ವಂಚನೆ‌ ಮಾರ್ಗ ಕಂಡುಕೊಂಡಿದ್ದಳು. ಗ್ರಾಹಕರೊಂದಿಗೆ ಹೇಗೆ‌ ಮಾತನಾಡಬೇಕು ಎಂಬ ಕಲೆಯನ್ನು ಸಿದ್ದಿಸಿಕೊಂಡಿದ್ದಳು. ಪೊಲೀಸರಿಗೆ ಅನುಮಾನ ಬಾರದಿರಲು ನಕಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಡಿಸಿಕೊಂಡಿದ್ದರು. ‌ಹಣ ಬ್ಯಾಂಕಿನಲ್ಲಿ ಜಮೆಯಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರು. ಆರೋಪಿಗಳ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಇದೇ ರೀತಿ ವಂಚನೆ ಪ್ರಕರಣ ದಾಖಲಾಗಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News