ಒಮ್ಮೆ ಬಟ್ಟೆ ಬಿಚ್ಚಿ ತೋರಿಸ್ತೀರಾ..? ಬೀಚ್‌ಗೆ ಬನ್ನಿ.. ಅಂತಾರೆ..! ʼಅಪ್ಪಾಜಿʼ ನಟಿಯ ಶಾಕಿಂಗ್‌ ಹೇಳಿಕೆ

Actress Aamani : ಒಂದಾನೊಂದು ಕಾಲದಲ್ಲಿ ಹಲವು ಚಿತ್ರಗಳಲ್ಲಿ ಹೆಸರು ಮಾಡಿದ್ದ ನಾಯಕಿ ಅಮಾನಿ ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ನಟಿ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಅಮಾನಿ ಕಾಸ್ಟಿಂಗ್ ಕೌಚ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ.  

Written by - Krishna N K | Last Updated : Nov 22, 2023, 04:37 PM IST
  • ನಟಿ ಅಮಾನಿ ಇದೀಗ ಮತ್ತೆ ಚಿತ್ರರಂಗಕ್ಕೆ ಕಮ್‌ ಬ್ಯಾಕ್‌ ಮಾಡಿದ್ದಾರೆ.
  • ಎರಡನೇ ಇನ್ನಿಂಗ್ಸ್ ಆರಂಭಿಸಿರುವ ನಟಿ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
  • ಇದೀಗ ಅಮಾನಿ ಕಾಸ್ಟಿಂಗ್ ಕೌಚ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ.
ಒಮ್ಮೆ ಬಟ್ಟೆ ಬಿಚ್ಚಿ ತೋರಿಸ್ತೀರಾ..? ಬೀಚ್‌ಗೆ ಬನ್ನಿ.. ಅಂತಾರೆ..! ʼಅಪ್ಪಾಜಿʼ ನಟಿಯ ಶಾಕಿಂಗ್‌ ಹೇಳಿಕೆ title=

Aamani about casting couch : ವಿಷ್ಣುವರ್ಧನ್‌ ನಟನೆಯ ಅಪ್ಪಾಜಿ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದ ನಟಿ ಅಮಾನಿ ಹಲವು ಕೌಟುಂಬಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಎರಡು ಬಾರಿ ನಂದಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮದುವೆಯಾದ ನಂತರ ಸಿನಿಮಾರಂಗದಿಂದ ದೂರ ಉಳಿದಿದ್ದ ನಟಿ ಸಧ್ಯ ಕಮ್‌ಬ್ಯಾಕ್‌ ಮಾಡಿದ್ದಾರೆ. 

ಇತ್ತೀಚೆಗಷ್ಟೇ ಸೆಕೆಂಡ್ ಇನ್ನಿ ಆರಂಭಿಸಿ ಕೆಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಡಲ್ ಕ್ಲಾಸ್ ಹುಡುಗ, ಮೋಸ್ಟ್ ಎಲಿಜಿಬಲ್ ಬ್ಯಾಚುಲರ್, ವಿನರೋ ಭಾಗ್ಯಮು ವಿಷ್ಣು ಕಥಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಮಾಧ್ಯಮಗಳೊಂದಿಗೆ ಮಾತನಾಡಿದ ಅಮಾನಿ, ಸಿನಿರಂಗದಲ್ಲಿ ಎದುರಿಸಿದ ತೊಂದರೆಗಳ ಬಗ್ಗೆ, ಅದರಲ್ಲೂ ವಿಶೇಷವಾಗಿ ತಮಿಳು ಇಂಡಸ್ಟ್ರಿಯಲ್ಲಿ ನಡೆದ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ : ಎಲೆಕ್ಟ್ರಿಫೈಯಿಂಗ್ Pro Kabaddi League ಗೆ ಕೌಂಟ್‌ಡೌನ್ ಶುರು

ಸಿನಿಮಾದಲ್ಲಿ ಪ್ರಯತ್ನಿಸುತ್ತಿದ್ದಾಗ ತಮ್ಮ ಫೋಟೋಗಳನ್ನು ನೋಡಿ ಕರೆ ಮಾಡುತ್ತಿದ್ದರು. ನನ್ನ ಮೈ ಬಣ್ಣವನ್ನು ನೋಡಿ ಕೆಲವು ಅವಕಾಶ ನೀಡಿಲ್ಲ. ಬಣ್ಣದಿಂದ ನನ್ನನ್ನು ತಿರಸ್ಕರಿಸಿದ್ದು ತುಂಬಾ ನೋವುಂಟು ಮಾಡಿದೆ ಎಂದು ಅಮಾನಿ ನೋವನ್ನು ತೋಡಿಕೊಂಡಿದ್ದರು. 

ವಿಶೇಷವಾಗಿ ತಮಿಳು ಇಂಡಸ್ಟ್ರಿಯ ಬಗ್ಗೆ ಮಾತನಾಡಿದ ನಟಿ, ತೆಲುಗು ಇಂಡಸ್ಟ್ರಿಗಿಂತ ತಮಿಳಿನಲ್ಲಿ ಕಾಸ್ಟಿಂಗ್ ಕೌಚ್ ಹೆಚ್ಚು ಇದೆ ಎಂದು ಹೇಳಿದ್ದಾರೆ. ಮೇಲಾಗಿ ಸಿನಿಮಾದಲ್ಲಿ ಅವಕಾಶ ಕೊಡಿ ಎಂದು ಕರೆದು ಇಲ್ಲ ಸಲ್ಲದ ಪ್ರಶ್ನೆ ಕೇಳುತ್ತಿದ್ದರು.. ಸ್ಟ್ರೆಚ್ ಮಾರ್ಕ್ಸ್ ಇದೆಯಾ..? ಒಮ್ಮೆ ಬಟ್ಟೆ ಬಿಚ್ಚಿ ತೋರಿಸುತ್ತೀರಾ..? ಎಂಬಂತಹ ಅಸಭ್ಯ ಪ್ರಶ್ನೆಗಳನ್ನು ಕೆಲವರು ಕೇಳಿದ್ದಾರೆ ಎಂದು ಅಮಾನಿ ಹೇಳಿದ್ದಾರೆ. 

ಇದನ್ನೂ ಓದಿ :ಅಶ್ಲೀಲ ಉಡುಪಿನಲ್ಲಿ ಕಿರುತೆರೆ ನಟಿ..! ಸಿರೀಯಲ್‌ನಲ್ಲಿ ಶಾಂತಿ ಸೋಷಿಯಲ್‌ ಮಿಡಿಯಾದಲ್ಲಿ ಡಿಸ್ಕೋ ಶಾಂತಿ ಎಂದ ನೆಟಿಜನ್ಸ್‌

ಅಷ್ಟೇ ಅಲ್ಲ, ಸಿನಿಮಾ ಒಪ್ಪಿಕೊಂಡು ಅಡ್ವಾನ್ಸ್ ತೆಗೆದುಕೊಂಡ ಎರಡು ದಿನಗಳ ನಂತರ ಮ್ಯಾನೇಜರ್ ಅಥವಾ ಡೈರೆಕ್ಟರ್ ಇಲ್ಲವೇ ಫೈನಾನ್ಷಿಯರ್ ಬೀಚ್‌ಗೆ ಬನ್ನಿ ಎಂದು ಕರೆಯುತ್ತಿದ್ದರು ಎಂದು ಅಮಾನಿ ಕಾಸ್ಟಿಂಗ್‌ ಕೌಚ್‌ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲಾ ಕ್ಷೇತ್ರದಲ್ಲೂ ಕಾಸ್ಟಿಂಗ್ ಕೌಚ್ ಇದೆ ಎಂದು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News