Bhairati Rangal : ಕಬ್ಜ ಯಶಸ್ಸಿನ ಬೆನ್ನಲ್ಲೇ ಭೈರತಿ ರಣಗಲ್ ಗೆ ಸಜ್ಜಾದ ಶಿವಣ್ಣ: ಮುಂದಿನ ಚಿತ್ರದ ಸುಳಿವು ನೀಡಿದ ಮುತ್ತಣ್ಣ!

Shivarajkumar: ಡಾ. ಶಿವರಾಜಕುಮಾರ್‌ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದರ ನಡುವೆ ಮುಂಬರುವ ಸಿನಿಮಾಗಳ ಸುಳಿವು ನೀಡಿದ್ದಾರೆ.

Written by - Zee Kannada News Desk | Last Updated : May 1, 2023, 01:50 PM IST
  • ಭೈರತಿ ರಣಗಲ್ ಸಿನಿಮಾ​ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡ ಶಿವಣ್ಣ
  • ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಚಾರಕ್ಕೆ ಮುಂದಾಗಿರುವ ಮುತ್ತಣ್ಣ
  • ಸದ್ಯ ಚುನಾವಣೆ ಸಮೀಪವಿರುವುದರಿಂದ ಶಿವಣ್ಣ ಹಾಗೂ ಅವರ ಪತ್ನಿ ಪ್ರಚಾರದಲ್ಲಿ ಭಾಗಿ
Bhairati Rangal : ಕಬ್ಜ ಯಶಸ್ಸಿನ ಬೆನ್ನಲ್ಲೇ  ಭೈರತಿ ರಣಗಲ್ ಗೆ ಸಜ್ಜಾದ ಶಿವಣ್ಣ: ಮುಂದಿನ ಚಿತ್ರದ ಸುಳಿವು ನೀಡಿದ ಮುತ್ತಣ್ಣ! title=

ಶಿವಮೊಗ್ಗ: ಡಾ. ಶಿವರಾಜಕುಮಾರ್‌ ನಟನೆಯ ಕಬ್ಜ ಸಿನಿಮಾ ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿತ್ತು. ಸದ್ಯ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕೆಲ ನಾಯಕರ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದರ ನಡುವೆ ಮುಂಬರುವ ಸಿನಿಮಾಗಳ ಸುಳಿವು ನೀಡಿದ್ದಾರೆ. ಇದರ ಬೆನ್ನಲೇ ಕರುನಾಡ ಮುತ್ತಣ ಕೆಲ ಸಿನಿಮಾಗಳ ತಯಾರಿಯಲ್ಲಿದ್ದಾರೆ. 

ಶಿವಮೊಗ್ಗದಲ್ಲಿ ನಟ ಶಿವರಾಜ್​ಕುಮಾರ್, ಅವರ ಪತ್ನಿ ಗೀತಾ ಶಿವರಾಜ್​ಕುಮಾರ್ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಹಾಗೂ ಪ್ರಚಾರ ಕುರಿತು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  Choreographer Chaitanya: ಖ್ಯಾತ ಡ್ಯಾನ್ಸ್  ಕೋರಿಯೊಗ್ರಾಫರ್ ಚೈತನ್ಯ ಆತ್ಮಹತ್ಯೆ!

‘ಕಬ್ಜ’ ಸಿನಿಮಾ ಕ್ಲೈಮ್ಯಾಕ್ಸ್​ನಲ್ಲಿ ಶಿವಣ್ಣನ ಎಂಟ್ರಿ ವೀಕ್ಷಕರಿಗೆ ಸಖತ್‌ ಥ್ರಿಲ್‌ ನೀಡಿತ್ತು. ಇದರ ನಡುವೆ  ‘ಕಬ್ಜ 2’ ಸಿನಿಮಾ ಎಲ್ಲೆಡೆ ಕೇಳಿ ಬರುತ್ತಿದೆ. ಈ ಬಗ್ಗೆ ಮಾತಾನಾಡಿರುವ ಶಿವಣ್ಣ, ಕಬ್ಜ 2 ಕಥೆ ಕೇಳಿಲ್ಲಎಂದಿದ್ದಾರೆ. 

ಇದನ್ನೂ ಓದಿ: Choreographer Chaitanya: ಖ್ಯಾತ ಡ್ಯಾನ್ಸ್  ಕೋರಿಯೊಗ್ರಾಫರ್ ಚೈತನ್ಯ ಆತ್ಮಹತ್ಯೆ!

ಇನ್ನುಳಿದಂತೆ ಅವರ ಮುಂಬರುವ ಚಿತ್ರ ಭೈರತಿ ರಣಗಲ್​ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ನಿರ್ದೇಶಕ ನರ್ತನ್ ಹಾಗೂ ಶಿವರಾಜ್​ಕುಮಾರ್ ಅವರ ಕಾಂಬಿನೇಷನ್​ನಲ್ಲಿ ಮೂಡಿ ಬಂದ ‘ಮಫ್ತಿ’ ಸಿನಿಮಾ ಯಶಸ್ಸು ಕಂಡಿತ್ತು. ಈಗ ಚಿತ್ರಕ್ಕೆ ಪ್ರೀಕ್ವೆಲ್ ಸಿದ್ಧಗೊಳ್ಳುತ್ತಿದೆ. ‘ಭೈರತಿ ರಣಗಲ್’ ಎಂದು ಹೆಸರು ಇಡಲಾಗಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

‘ರಣಗಲ್ ಮೇಲೆ ಕಾನ್ಸಂಟ್ರೇಷನ್ ಜಾಸ್ತಿ’ ಎಂದಿದ್ದಾರೆ. ಅವರ ಇನ್ನೊಂದು ಸಿನಿಮಾವಾದ ‘ಘೋಸ್ಟ್’ ಬಗ್ಗೆ ಮಾತಾನಾಡಿದ  ಶಿವಣ್ಣ, ಈ ಸಿನಿಮಾ ಕರ್ನಾಟಕ ಮಾತ್ರವಲ್ಲ ಈಡೀ ಭಾರತಕ್ಕೆ ಒಳ್ಳೆಯ ಸಿನಿಮಾ ಆಗತ್ತೆ. ಈ ವಿಚಾರದಲ್ಲಿ ಅತಿಆಸೆ ಪಡ್ತಾ ಇದಿನೋ ಗೊತ್ತಿಲ್ಲ’ ಎಂದರು. ಸದ್ಯ ಕರುನಾಡ ಮುತ್ತಣ ಮುಂಬರುವ ವಿಧಾನ ಸಭೆ ಚುನಾವಣೆಯ ಪ್ರಚಾರದ ಬ್ಯೂಸಿಯಾಗಿದ್ದಾರೆ. 

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News