'ಭಾಗ್ಯಲಕ್ಷ್ಮಿ' ಧಾರಾವಾಹಿ ನಟನ ಮೇಲೆ ವಾಮಾಚಾರ..! ದೂರು ದಾಖಲು

Bhagyalakshmi Serial actor : ಭಾಗ್ಯಲಕ್ಷ್ಮಿ ಧಾರಾವಾಹಿ ಖ್ಯಾತ ನಟ ಮಹಿಳೆಯೊಬ್ಬರ ವಿರುದ್ಧ ಪೊಲೀಸ್‌ ಠಾಣೆ ಮೇಟ್ಟಿಲೇರಿದ್ದಾರೆ.. ತಮ್ಮ ಮೇಲೆ ವಾಮಾಚಾರ ಮಾಡಿಸಲು ಅಪರಿಚಿತ ಮಹಿಳೆ ಮುಂದಾಗಿದ್ದಾರೆ ಎಂದು ನಟ ದೂರಿದ್ದಾರೆ..  

Written by - Krishna N K | Last Updated : Jul 26, 2024, 06:23 PM IST
    • ಫೋಟೋ ತೆಗೆಸಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ವಾಚಾಚಾರ
    • ಭಾಗ್ಯಲಕ್ಷ್ಮಿ ಧಾರಾವಾಹಿ ಖ್ಯಾತ ನಟ ಮಹಿಳೆಯೊಬ್ಬರ ವಿರುದ್ಧ ದೂರು
    • ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳಲ್ಲಿ ಒಂದು 'ಭಾಗ್ಯಲಕ್ಷ್ಮಿ'
'ಭಾಗ್ಯಲಕ್ಷ್ಮಿ' ಧಾರಾವಾಹಿ ನಟನ ಮೇಲೆ ವಾಮಾಚಾರ..! ದೂರು ದಾಖಲು title=
Bhagyalakshmi kannada serial

Bhagyalakshmi Serial : ಫೋಟೋ ತೆಗೆಸಿಕೊಳ್ಳಲು ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ತಮ್ಮ ಮೇಲೆ ವಾಮಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು 'ಭಾಗ್ಯಲಕ್ಷ್ಮಿ' ಧಾರಾವಾಹಿಯ ನಟ ಪೊಲೀಸರಿಗೆ ದೂರು ನೀಡಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..

ಹೌದು.. ವಿಜಯ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರಮುಖ ಧಾರಾವಾಹಿಗಳಲ್ಲಿ ಒಂದು 'ಭಾಗ್ಯಲಕ್ಷ್ಮಿ'. ಹಲವು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ನಟಿಸಿರುವ ಸತೀಶ್ ಈ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.  ಗೋಪಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.. 

ಇದನ್ನೂ ಓದಿ:ಮುಂಬೈನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಮಾಧವನ್..! ಬೆಲೆ ತಲೆ ಸುತ್ತಿಸುತ್ತೆ..

ಖಳನಟ, ಸೆಂಟಿಮೆಂಟ್, ಕಾಮಿಡಿ... ಹೀಗೆ ತಮ್ಮ ಶೈಲಿಯಿಂದ ವಿಶಿಷ್ಟವಾದ ನಟನೆಯನ್ನು ತೋರುತ್ತಾ ಬಂದಿರುವ ಸತೀಶ್‌ಗೆ ಅವರ ಅಭಿನಯವೇ ಯಶಸ್ಸಿಗೆ ದೊಡ್ಡ ಶಕ್ತಿ ಎನ್ನಬಹುದು. ಕಳೆದ ವರ್ಷ ಸತೀಶ್ ಅವರು ಕೆಲವು ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯನ್ನು ತೊರೆಯುತ್ತಿರುವುದಾಗಿ ಘೋಷಿಸಿದ್ದರು... ಅವರ ಅಭಿಮಾನಿಗಳು ಸಿರಿಯಲ್‌ ತೊರೆಯಬೇಡಿ ಅಂತ ಕೇಳಿಕೊಂಡಿದ್ದರು.ʼʼ

ಈ ವೇಳೆ ಅವರು ತಿರುವನ್ಮಿಯೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅರುಪದೈ ಮುರುಗನ್ ದೇವಸ್ಥಾನಕ್ಕೆ ಹೋದಾಗ, ಮಹಿಳೆಯೊಬ್ಬರು ಸತೀಶ್ ಕುಮಾರ್ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದರು. ಆದರೆ ಸತೀಶ್ ಫೋಟೋ ತೆಗೆಯಲು ನಿರಾಕರಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಬೆಡ್‌ ಮೇಲೆ ಆ ರೀತಿ ಮಾಡುವುದು ಸ್ವಲ್ಪ ಕಷ್ಟ, ನಾನು ಅಳುತ್ತಿದ್ದೆ..! ನಟಿ ಅಂಜಲಿ ಹೇಳಿಕೆ ವೈರಲ್‌

ನಂತರ ಆ ಮಹಿಳೆ ಸತೀಶ್‌ಗೆ ಫೋನ್ ಮಾಡಿ, ನಿಮ್ಮ ಮನೆ ಬಾಗಿಲಲ್ಲಿ ನಿಂಬೆಹಣ್ಣು ಇಟ್ಟುಕೊಂಡು ವಾಮಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.. ಈ ವಿಚಾರ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News