ಬಿಗ್ ಬಾಸ್‌ 10: ಎರಡನೇ ವಾರ ಎಲಿಮಿನೇಟ್‌ ಆಗ್ತಿರುವ ಕಂಟೆಸ್ಟಂಟ್‌ ಇವರು.!

Bigg Boss Kannada 10 Elimination : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಎರಡನೇ ವಾರದ ವೀಕೆಂಡ್‌ ಎಪಿಸೋಡ್‌ ಬಂದೇ ಬಿಡ್ತು. ಈಗ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಮನೆಯಿಂದ ಹೊರ ಹೋಗುವ ಸಮಯ. ಎರಡನೇ ವಾರ ಎಲಿಮಿನೇಟ್ ಆಗೋದು ಯಾರು? ಎಂಬ ಕುತೂಹಲ ಎಲ್ಲರನ್ನೂ ಕಾಡ್ತಿದೆ.  

Written by - Chetana Devarmani | Last Updated : Oct 21, 2023, 02:25 PM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ಎರಡನೇ ವಾರದ ವೀಕೆಂಡ್‌
  • ಎಲಿಮಿನೇಟ್ ಆಗೋದು ಯಾರು?
ಬಿಗ್ ಬಾಸ್‌ 10: ಎರಡನೇ ವಾರ ಎಲಿಮಿನೇಟ್‌ ಆಗ್ತಿರುವ ಕಂಟೆಸ್ಟಂಟ್‌ ಇವರು.! title=

Bigg Boss Kannada Elimination : ಮೊದಲ ವಾರ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಮನೆಯಿಂದ ಸ್ನೇಕ್ ಶ್ಯಾಮ್ ಎಲಿಮಿನೇಟ್‌ ಆಗಿದ್ದರು. ಎರಡನೇ ವಾರ ಯಾರು ಹೊರ ಹೋಗಬಹುದು ಎಂಬ ಕ್ಯೂರಿಯಾಸಿಟಿ ಎಲ್ಲರಲ್ಲೂ ಹೆಚ್ಚಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಎರಡನೇ ವಾರ ಭಾಗ್ಯಶ್ರೀ, ತುಕಾಲಿ ಸಂತು, ಗೌರೀಶ್ ಅಕ್ಕಿ, ಸಂಗೀತಾ ಶೃಂಗೇರಿ, ತನಿಷಾ ಕುಪ್ಪಂಡ ಮತ್ತು ಕಾರ್ತಿಕ್‌ ಸೇರಿ ಒಟ್ಟು ಆರು ಮಂದಿ ನಾಮಿನೇಟ್‌ ಆಗಿದ್ದಾರೆ. 

ಕಿರುತೆರೆ ನಟಿ ಭಾಗ್ಯಶ್ರೀ ಅವರಿಗೆ ಟಾಸ್ಕ್‌ಗಳಲ್ಲಿ ಭಾಗವಹಿಸಲು ಅವಕಾಶವೇ ಸಿಕ್ಕಿಲ್ಲ. ಮನೆಯಲ್ಲಿ ಒಂದು ರೀತಿ ಟಾರ್ಗೆಟ್‌ ಆಗಿರುವ ಭಾಗ್ಯಶ್ರೀ ಸಿಕ್ಕ ಅವಕಾಶದಲ್ಲಿಯೇ ತಮ್ಮ ಕೈಲಾದ ಶ್ರಮ ಹಾಕಿದ್ದಾರೆ. ಇನ್ನೂ ಟಾಸ್ಕ್‌ನಲ್ಲಿ ಸೀತಿದ್ದಕ್ಕಾಗಿ ಶಿಕ್ಷೆಯ ರೂಪದಲ್ಲಿ ಭಾಗ್ಯಶ್ರೀ ಇಡೀ ರಾತ್ರಿ ‘ಬಿಗ್ ಬಾಸ್’ ಮನೆಯಿಂದ ಹೊರಗಿದ್ದು ಶಿಕ್ಷೆ ಅನುಭವಿಸಿದ್ದಾರೆ. 

ಇದನ್ನೂ ಓದಿ: ಕೋಟಿ ಕೋಟಿ ಗಳಿಸಿದರೂ ಕೆಜಿಎಫ್ 2 ದಾಖಲೆ ಮುರಿಯಲಿಲ್ಲ ಜವಾನ್! 

ಭಾಗ್ಯಶ್ರೀ ಅವರು ತುಕಾಲಿ ಸಂತು ಮತ್ತು ವರ್ತೂರು ಸಂತೋಷ್‌ ಜೊತೆಗೆ ಸ್ಕಿಟ್‌ ನಲ್ಲಿ ಸೂಪರ್‌ ಪರ್ಫಾಮೆನ್ಸ್ ಮಾಡಿದರು. ಆದರೆ ಮನೆಯವರಿಂದ ಟಾರ್ಗೆಟ್‌ ಆಗಿರುವುದು ಭಾಗ್ಯಶ್ರೀಗೆ ಪಾಸಿಟಿವ್‌ ಅಗುತ್ತೋ ನೆಗೆಟಿವ್‌ ಆಗುತ್ತೋ ಗೊತ್ತಿಲ್ಲ. ಭಾಗ್ಯಶ್ರೀ ಇಂದು ಔಟ್ ಆಗ್ತಾರಾ? 

ಪತ್ರಕರ್ತ ಗೌರೀಶ್ ಅಕ್ಕಿ ಇತರರಿಗೆ ಹೋಲಿಸಿದರೆ ಸ್ಕ್ರೀನ್ ಸ್ಪೇಸ್‌ ಕೊಂಚ ಕಡಿಮೆ ಇದೆ. ಈ ಹಿಂದೆ ಅವರು ಎರಡರಿಂದ ನಾಲ್ಕು ವಾರ ಇರಬಹುದು ಎಂದು ಹೇಳಿದರು. ಅದೇ ಮೈಂಡ್‌ ಸೆಟ್‌ಗೆ ಅವರು ಫಿಕ್ಸ್‌ ಆಗಿದ್ದಾರಾ ಎಂದು ಕೆಲವರಿಗೆ ಭಾಸವಾಗ್ತಿದೆ. ಅವರೇ ಹೇಳಿದಂತೆ ಗೌರೀಶ್ ಅಕ್ಕಿ ಈ ವಾರ ಮನೆಯಿಂದ ಎಲಿಮಿನೇಟ್‌ ಆಗ್ತಾರಾ? 

ಮನೆತಯಲ್ಲಿ ಫುಲ್‌ ರೆಬೆಲ್‌ ಆಗಿರುವ ಸಂಗೀತಾ ಶೃಂಗೇರಿ ಸಹ ಈ ವಾರ ನಾಮಿನೇಟ್‌ ಆಗಿದ್ದಾರೆ. ಈ ವಾರವಿಡಿ ವಿನಯ್‌ ಜೊತೆಗಿನ ಜಗಳದಿಂದ ಸಂಗೀತಾ ಶೃಂಗೇರಿ ಹೈಲೈಟ್‌ ಆಗಿದ್ದರು. ಸಂಗೀತಾ ಶೃಂಗೇರಿ ಈ ವಾರ ಔಟ್ ಆಗೋ ಚಾನ್ಸ್‌ ತುಂಬಾ ಕಡಿಮೆ ಆಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಜೋಡಿ ಸಿಗದೇ ರಕ್ಷಕ್, ಪ್ರತಾಪ್, ಸಂತೋಪ್‌ ತೊಳಲಾಟ! 

ಕಾರ್ತಿಕ್ ಮಹೇಶ್ ಈ ವಾರ ತುಂಬಾ ಸ್ಟ್ರಾಂಗ್‌ ಆಗಿ ಆಟವಾಡಿದ್ದಾರೆ. ಟಾಸ್ಕ್‌ನಲ್ಲಿ ಕಾರ್ತಿಕ್ ಮಹೇಶ್ ಬೆಸ್ಟ್‌ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಇದಲ್ಲದೇ ಸಂಗೀತಾ ಮತ್ತು ಕಾರ್ತಿಕ್ ನಡುವಿನ ಬಾಂಡ್‌ ವೀಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಿದೆ. ಹಾಗಾಗಿ ಇವರು ಹೊರ ಹೋಗೋದು ಡೌಟ್‌. 

ತಮ್ಮ ಸೌಂಡ್‌ನಿಂದಲೇ ಸೌಂಡ್‌ ಮಾಡುವ ತನಿಷಾ ಕುಪ್ಪಂಡ ಟಾಸ್ಕ್‌ನಲ್ಲಿ ಬೆಸ್ಟ್. ನೇರವಾಗಿ ಮಾತನಾಡುವ ತನಿಷಾ ಸ್ಟ್ರಾಂಗ್ ಪರ್ಸನಾಲಿಟಿ ಎಂದೇ ಬಿಂಬಿಸಿಕೊಂಡಿದ್ದಾರೆ. ಹೀಗಾಗಿ ತನಿಷಾ ಕುಪ್ಪಂಡ ಕೂಡ ಈ ವಾರ ಎಲಿಮಿನೇಟ್‌ ಆಗೋದು ಅನುಮಾನವೇ. 

ತುಕಾಲಿ ಸಂತು ಎರಡನೇ ವಾರದ ಆಟ ಹಲವರ ಮನಗೆದ್ದಿದೆ. ತಮ್ಮ ಸೆನ್ಸ್‌ ಆಫ್ ಹ್ಯೂಮರ್‌ನಿಂದ ವೀಕ್ಷಕರ ಮನಗೆಲ್ಲುತ್ತಿರುವ ತುಕಾಲಿ ಸಂತು, ಮನೆಯ ಎಂಟರ್‌ಟೇನ್ಮೆಂಟ್‌ ಫ್ಯಾಕ್ಟರ್ ಆಗಿದ್ದಾರೆ. ತುಕಾಲಿ ಸಂತು ಈ ವಾರ ಔಟ್ ಆಗದೇ ಇರಲು ಇದು ಒಂದು ಸ್ಟ್ರಾಂಗ್‌ ಕಾರಣವಾಗಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News