BBK 10 : ಡ್ರೋನ್‌ ಪ್ರತಾಪ್‌ನ ಹಿಯ್ಯಾಳಿಸಿದ ಸ್ಪರ್ಧಿಗಳಿಗೆ ಕಿಚ್ಚ ಕ್ಲಾಸ್‌..! ಮಾಡಿದ ತಪ್ಪು ಕ್ಷಮಿಸಿ ದೇವರೆ ವರ ಕೊಡ್ತಾನೆ, ನಿವ್ಯಾರು..?

Bigg Boss Kannada Season 10 : ತಪ್ಪು ಮಾಡಿ, ದೇವರ ಮುಂದೆ ನಿಯತ್ತಾಗಿ ಬೇಡಿಕೊಂಡ್ರೆ ದೇವರೆ ಕ್ಷಮಿಸಿ ವರ ಕೊಡ್ತಾನೆ. ಅಂತಹದರದಲ್ಲಿ ನಾವ್ಯಾರು.. ನಿವ್ಯಾರು..? ಅಂತ ಕಿಚ್ಚ ಸುದೀಪ್‌ ಹೇಳಿರುವ ಮಾತು ಬಹಳ ಅರ್ಥ ಗರ್ಭಿತವಾಗಿದೆ. ಈ ವಾರದ ಸಂಚಿಕೆಯಲ್ಲಿ ಪ್ರತಾಪ್‌ ಪರ ಬಿಗ್‌ಬಾಸ್‌ ನಿಲ್ಲುವು ಸ್ಪಷ್ಟವಾಗಿದೆ. 

Written by - Krishna N K | Last Updated : Oct 14, 2023, 06:48 PM IST
  • ʼವಾರದ ಕಥೆ ಕಿಚ್ಚನ ಜೊತೆ' ಶೋ ತುಂಬಾ ಕ್ಯೂರಿಯಾಸಿಟಿಯಾಗಿರಲಿದೆ
  • ದೊಡ್ಮನೆ ಸದಸ್ಯರಿಗೆ ಕಿಚ್ಚ ಸುದೀಪ್‌ ಬದುಕಿನ ನೀತಿ ಪಾಠ ಮಾಡಲಿದ್ದಾರೆ
  • ಕೆಲವೊಂದಿಷ್ಟು ವಿಚಾರವಾಗಿ ಬಿಗ್‌ಬಾಸ್‌ ಕ್ಲಾಸ್‌ ತೆಗೆದುಕೊಳ್ಳುವ ಸಾಧ್ಯತೆ ಇದೆ
BBK 10 : ಡ್ರೋನ್‌ ಪ್ರತಾಪ್‌ನ ಹಿಯ್ಯಾಳಿಸಿದ ಸ್ಪರ್ಧಿಗಳಿಗೆ ಕಿಚ್ಚ ಕ್ಲಾಸ್‌..! ಮಾಡಿದ ತಪ್ಪು ಕ್ಷಮಿಸಿ ದೇವರೆ ವರ ಕೊಡ್ತಾನೆ, ನಿವ್ಯಾರು..? title=
drone pratap

BBK 10 : ಇಂದಿನ ʼವಾರದ ಕಥೆ ಕಿಚ್ಚನ ಜೊತೆ' ಶೋ ತುಂಬಾ ಕ್ಯೂರಿಯಾಸಿಟಿಯಾಗಿರಲಿದೆ ಅನಿಸುತ್ತೆ. ಸ್ಪರ್ಧಿಗಳಿಗೆ ಕೆಲವೊಂದಿಷ್ಟು ವಿಚಾರವಾಗಿ ಬಿಗ್‌ಬಾಸ್‌ ಕ್ಲಾಸ್‌ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಡ್ರೋನ್‌ ಪ್ರತಾಪ್‌ಗೆ ನಿಂದಿಸಿದ ದೊಡ್ಮನೆ ಸದಸ್ಯರಿಗೆ ಕಿಚ್ಚ ಸುದೀಪ್‌ ಬದುಕಿನ ನೀತಿ ಪಾಠ ಮಾಡಲಿದ್ದಾರೆ.

ಹೌದು.. ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ʼವಾರದ ಕಥೆ ಕಿಚ್ಚನ ಜೊತೆ' ಮೊದಲ ಶೋ ಇಂದು ರಾತ್ರಿ 9ಗಂಟೆಗೆ ಪ್ರಸಾರವಾಗಲಿದೆ. ಈಗಾಗಲೇ ಈ ಕುರಿತ ಪ್ರಮೋ ರಿಲೀಸ್‌ ಆಗಿದೆ. ಪ್ರಮೋದಲ್ಲಿ ಡ್ರೋನ್‌ ಪ್ರತಾಪ್‌ (drone prathap)  ಅವರ ತಪ್ಪನ್ನು ಎತ್ತಿ ಹಿಡಿದು ವ್ಯಂಗ್ಯವಾಡಿದ ಸ್ಪರ್ಧಿಗಳ ಮಾತು ಮತ್ತು ಕಿಚ್ಚ ಸುದೀಪ್‌ ನೀತಿ ಪಾಠದ ಹೇಳಿಕೆ ಕಾಣಬಹುದು.

ಇದನ್ನೂ ಓದಿ: ಬಿಗ್‌ಬಾಸ್‌ ಮನೆಯಲ್ಲಿ ಮೊಬೈಲ್‌ ಬಳಕೆಗೆ ಅವಕಾಶವಿದೆ..! ಈ ವಿಚಾರ ನಿಮ್ಗೆ ಗೊತ್ತಾ..?

ತಪ್ಪು ಮಾಡಿ, ದೇವರ ಮುಂದೆ ನಿಯತ್ತಾಗಿ ಬೇಡಿಕೊಂಡ್ರೆ ದೇವರೆ ಕ್ಷಮಿಸಿ ವರ ಕೊಡ್ತಾನೆ. ಅಂತಹದರದಲ್ಲಿ ನಾವ್ಯಾರು.. ನಿವ್ಯಾರು..? ಅಂತ ಕಿಚ್ಚ ಸುದೀಪ್‌ ಹೇಳಿರುವ ಮಾತು ಬಹಳ ಅರ್ಥ ಗರ್ಭಿತವಾಗಿದೆ. ಈ ವಾರದ ಸಂಚಿಕೆಯಲ್ಲಿ ಪ್ರತಾಪ್‌ ಪರ ಬಿಗ್‌ಬಾಸ್‌ ನಿಲ್ಲುವು ಸ್ಪಷ್ಟವಾಗಿದೆ. ತಪ್ಪು ಮಾಡುವುದು ಮನುಷ್ಯನ ಸಹಜಗುಣ ಅದನ್ನು ತಿದ್ದಿ ನಡೆಯುವುದು ಮನುಷ್ಯ ಧರ್ಮ ಎನ್ನುವ ನೀತಿ ಪಾಠವನ್ನು ದೊಡ್ಮನೆ ಮಂದಿಗೆ ಕಿಚ್ಚ ಇವತ್ತು ಅರ್ಥ ಮಾಡಿಸಲಿದ್ದಾರೆ ಎಂಬುವುದು ಪ್ರಮೋ ನೋಡಿದ್ರೆ ತಿಳಿಯುತ್ತೆ. 

ಹೌದು.. ಪ್ರತಾಪ್‌ ವಿಚಾರ ಹೆಚ್ಚಿಗೆ ಹೇಳುವುದು ಬೇಡ, ಅದು ಎಲ್ಲರಿಗೂ ತಿಳಿದಿದೆ. ಇದೇ ವಿಚಾರವಾಗಿ ದೊಡ್ಮನೆ ಮಂದಿ ಅವರನ್ನು ಹಿಯಾಳಿಸಿ ಅಳುವಂತೆ ಮಾಡಿದ್ದನ್ನು ಎಲ್ಲರೂ ನೋಡಿದ್ದೇವೆ. ಇದೀಗ ಅದೇ ಕೆಲ ಸ್ಪರ್ಧಿಗಳಿಗೆ ಕುತ್ತಾಗಿ ಪರಿಣಮಿಸಲಿದೆ ಎನ್ನಬಹುದು. ಸ್ನೇಹಿತ್, ವಿನಯ್ ಗೌಡ, ತುಕಾಲಿ ಸಂತು, ವರ್ತೂರು ಸಂತೋಷ್ ಡ್ರೋನ್ ಮಾತಾಡಿ ಪ್ರತಾಪ್ ಅಳುವಂತೆ ಮಾಡಿದ್ದರು. ಅಲ್ಲದೆ ಅದು ಅತಿರೇಕಕ್ಕೆ ಹೋಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News