BBK10: ಬಿಗ್‌ಬಾಸ್‌ ಮನೆಯಲ್ಲಿ ಬ್ರಹ್ಮಾಂಡ ಗುರೂಜಿ ಕಾರ್ತಿಕ್ ಹಾಗೂ ತುಕಾಲಿ ಬಗ್ಗೆ ಭವಿಷ್ಯ ನುಡಿದಿದ್ದಾರೆ ; ದೊಡ್ಮನೆ ಮಂದಿ ಶಾಕ್!

Bigg Boss: ಬಿಗ್‌ಬಾಸ್‌ ಮನೆಗೆ ಈ ವಾರ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮ ಅತಿಥಿಯಾಗಿ ಆಗಮಿಸಿದ್ದು, ಆಟದ ಮಧ್ಯೆ ಗುರೂಜಿ ಕಾರ್ತಿಕ್‌ , ತುಕಾಲಿ ಸ್ಟಾರ್‌ ಸಮತು ಹಾಗೈ ನೀತು ಬಗ್ಗೆ ಭವಿಷ್ಯ ನುಡಿದಿದ್ದಾರೆ.

Written by - Zee Kannada News Desk | Last Updated : Nov 21, 2023, 10:08 AM IST
  • ಬ್ರಹ್ಮಾಂಡ ಗುರೂಜಿ ಕಾರ್ತಿಕ್‌ಗೆ ಮದುವೆ ಟೈಮ್‌ನಲ್ಲಿ ಮದುವೆ ಆಗುವ ಹುಡುಗಿ ಇವನನ್ನು ನೋಡಿಕೊಂಡು ಮದುವೆ ಆಗಬೇಕು ಎಂದಿದ್ದಾರೆ.
  • ಕಾರ್ತಿಕ್‌ ಭವಿಷ್ಯ ನುಡಿದ ನಂತರೆ ಬ್ರಹ್ಮಾಂಡ ಗುರೂಜಿ ತುಕಾಲಿ ಮಗು ಆಯ್ತಾ ಎಂದು ಕೇಳಿದರು.
  • ಬ್ರಹ್ಮಾಂಡ ಗುರೂಜಿ ಬಳಿಕ ನೀತು ಬಗ್ಗೆ ಭವಿಷಯ ನುಡಿಯುವಾಗ ನೀತು ವಿದೇಶಕ್ಕೆ ಹೋಗ್ತಾಳೆ ಎಂದರು.
BBK10: ಬಿಗ್‌ಬಾಸ್‌ ಮನೆಯಲ್ಲಿ ಬ್ರಹ್ಮಾಂಡ ಗುರೂಜಿ ಕಾರ್ತಿಕ್ ಹಾಗೂ ತುಕಾಲಿ ಬಗ್ಗೆ ಭವಿಷ್ಯ ನುಡಿದಿದ್ದಾರೆ ; ದೊಡ್ಮನೆ ಮಂದಿ ಶಾಕ್! title=

Bramhanda Guruji In BBK10: ಬಿಗ್‌ಬಾಸ್‌ ಕನ್ನಡ ಸೀಸನ್ 1 ಶೋನಲ್ಲಿ ಭಾಗವಹಿಸಿ ಮುಂಡಾ ಮುಚ್ತು ಅಂತ ಹೇಳಿ ಎಲ್ಲರನ್ನೂ ನಗಿಸಿದ್ದ, ಬ್ರಹ್ಮಾಂಡ ಗುರೂಜಿ  ನರೇಂದ್ರ ಶರ್ಮ, ಇದೀಗ ಬಿಗ್‌ಬಾಸ್‌ ಸೀಸನ್‌ 10  ಮನೆಗೆ ಆಗಮಿಸಿದ್ದಾರೆ. ಪ್ರತಿ ವಾರ ಬಿಗ್‌ಬಾಸ್‌ ಮನೆಗೆ ಒಬ್ಬರಲ್ಲ ಒಬ್ಬರು ಅತಿಥಿಗಳು ಬಂದು ಹೋಗುತ್ತಿದ್ದು, ಈ ವಾರ ಬ್ರಹ್ಮಾಂಡ ಗುರೂಜಿ, ದೊಡ್ಮನೆಗೆ ಎಂಟ್ರೀ ನೀಡಿ ಆಟದ ಮಧ್ಯೆ 'ತುಕಾಲಿ ಸ್ಟಾರ್' ಸಂತು, ನೀತು, ಕಾರ್ತಿಕ್‌ಗೆ ಭವಿಷ್ಯವನ್ನು ಹೇಳಿದ್ದಾರೆ. ತುಕಾಲಿ ಸಂತು ಕುಂಭ ರಾಶಿ ನಂದು, ಅದಿಕ್ಕೆ ನೀಲಿ ಬಣ್ಣದ ಉಂಗುರ ಹಾಕಿಕೊಂಡೆ  ಎಂದು ಬ್ರಹ್ಮಾಂಡ ಗುರೂಜಿಗೆ ಹೇಳಿದಾಗ, "ಕುಂಭ ರಾಶಿಗೆ ನೀಲಿ ಹಾಕ್ಕೊಳದಲ್ಲ, ಇರಲಿ ಬಿಡು" ಅಂತ ಬ್ರಹ್ಮಾಂಡ ಗುರೂಜಿ ಸಂತುಗೆ ಹೇಳಿದ್ದಾರೆ. ಇನ್ನು ಕಪ್ಪು ಬಣ್ಣದ ಬಟ್ಟೆ ಹಾಕಿಕೊಂಡಿದ್ದ ಕಾರ್ತಿಕ್ ನೋಡಿ ಗುರೂಜಿ  "ನೋಡು ಅವನು ಬ್ಲ್ಯಾಕ್. ನೀಲಿ ಅಂದ್ರೆ ಶನಿ. ಬ್ಲ್ಯಾಕ್ ಅಂದ್ರೂ ಶನಿ" ಎಂದು ಹೇಳಿದ್ದಾರೆ.

ಬಳಿಕ ಬ್ರಹ್ಮಾಂಡ ಗುರೂಜಿ ಕಾರ್ತಿಕ್‌ಗೆ  ಮದುವೆ ಟೈಮ್‌ನಲ್ಲಿ ಮದುವೆ ಆಗುವ ಹುಡುಗಿ ಇವನನ್ನು ನೋಡಿಕೊಂಡು ಮದುವೆ ಆಗಬೇಕು ಎಂದಿದಕ್ಕೆ ಕಾರ್ತಿಕ್‌ ನಾನು ಅವಳನ್ನು ನೋಡಿಕೊಂಡು ಮದುವೆ ಆಗಬೇಕಾ? ಅವಳು ನನ್ನ ನೋಡಿಕೊಂಡು ಮದುವೆ ಆಗಬೇಕಾ ಎಂದು ಕೇಳಿದ್ದಾರೆ. ಅದಕ್ಕೆ ಗುರೂಜಿ ಕಾರ್ತಿಕ್‌ಗೆ ದ್ವಿಕಳ ತ್ರಿಯೋಗ ಇದೆ. ಒಬ್ಬಳನ್ನು ಅವನು ಎರಡು ಸಲ ಮದುವೆ ಆದರೆ ಪರವಾಗಿಲ್ಲ, ಇಬ್ಬಿಬ್ಬರನ್ನು ಮದುವೆ ಆದರೆ ಏನು ಕಥೆ? ಎಂದಿದಕ್ಕೆ ತುಕಾಳಿ ಸಂತು ಇದನ್ನೇ ಸಂತು ಅಣ್ಣ ಕೂಡ ಹೇಳಿದ್ರು ಎಂದರು. ಅದಕ್ಕೆ ಕಾರ್ತಿಕ್ ಆ ತರ ಏನಿಲ್ಲ ಎಂದು ಹೇಳಿದರು. ಅದಕ್ಕೆ ಮತ್ತೆ ಗುರೂಜಿ ಇದೆ ಕಣೋ ಎಂದಿದಕ್ಕೆ ಕಾರ್ತಿಕ್‌ ಹೌದಾ ಎಂದರು.

ಇದನ್ನು ಓದಿ: ಬಿಗ್ ಬಾಸ್ ಮನೆಗೆ ಬ್ರಹ್ಮಾಂಡ ಗುರೂಜಿ ಸ್ಪೆಷಲ್ ಎಂಟ್ರಿ.!

ಕಾರ್ತಿಕ್‌ ಭವಿಷ್ಯ ನುಡಿದ ನಂತರೆ ಬ್ರಹ್ಮಾಂಡ ಗುರೂಜಿ ತುಕಾಲಿ ಮಗು ಆಯ್ತಾ ಎಂದು ಕೇಳಿದಕ್ಕೆ ಸಂತು ಇಲ್ಲ, ಒಂದಾದ ಮೇಲೆ ಒಂದು ಶೋ ತರ ಬಂದೆ ಎಂದಿದಕ್ಕೆ ಗುರೂಜಿ ನೀನು ಆದಷ್ಟು ಬೇಗ ಮಗು ಮಾಡಿಕೊಳ್ಳಬೇಕು, ಬುಧ ಬಂದ್ರೆ ಅದು ಮುಂದಕ್ಕೆ ಹೋಗಿಬಿಡತ್ತೆ ಎಂದಿದಕ್ಕೆ ಗುರೂಜಿ ಹೌದಾ ಎಂದರು. ಬಳಿಕ ಬ್ರಹ್ಮಾಂಡ ಗುರೂಜಿ ಹೆಂಡ್ತಿ ಸ್ವಂತನಾ? ಅತ್ತೆ ಮಗಳೋ? ದೂರದವಳೋ? ಎಂದು ಸೋತುಹೆ ಕೇಳಿದಕ್ಕೆ ತುಕಾಲಿ ಸ್ಟಾರ್  ದೂರದ ಸಂಬಂಧ ಎಂದರು. ಆಗ ಗುರೂಜಿ ಮುಂದಿನ ಯುಗಾದಿ ಒಳಗಡೆ ಮಗು ಆಗಬೇಕು. ಬುಧ ಬದಲಾದ್ರೆ ಎರಡೂ ಕಾಲು ವರ್ಷಕ್ಕೆ ಮುಂದಕ್ಕೆ ತಳ್ತಾನೆ ಎಂದರು.

ಬ್ರಹ್ಮಾಂಡ ಗುರೂಜಿ ಬಳಿಕ ನೀತು ಬಗ್ಗೆ ಭವಿಷಯ ನುಡಿಯುವಾಗ ನೀತು ವಿದೇಶಕ್ಕೆ ಹೋಗ್ತಾಳೆ ಎಂದರು. ತುಕಾಲಿ ಸ್ಟಾರ್ ಸಂತು ಯಾವ ದಿನ ಹುಟ್ಟಿದ್ದೀನಿ ಅಂತ ಗೊತ್ತಿಲ್ವಂತೆ, ಬ್ರಹ್ಮಾಂಡ ಗುರೂಜಿ ನೀನು ಹುಟ್ಟಿರೋದು ಗ್ಯಾರಂಟಿ ಅಲ್ವಾ ಅಂತ ನಗೆ ಚಟಾಕಿ ಹಾರಿಸಿದ್ದಾರೆ. ಹಾಗೇ ಕಾರ್ತಿಕ್‌ಗೆ ಈಗಾಗಲೇ ಒಂದು ಬ್ರೇಕಪ್ ಆಗಿದೆ. ಇನ್ನೊಂದು ಹುಡುಗಿ ಹೊರಗಡೆ ಕಾದುಕೊಂಡು ಕೂತಿದ್ದಾರೆ ಎಂದು ಸ್ನೇಹಿತ್ ಅವರು ಒಮ್ಮೆ ಹೇಳಿದ್ದರು. ಮುಂದೆ ಏನಾಗತ್ತೆ ಅಂತ ಕಾದು ನೋಡೋಣ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News