ಬಿಗ್‌ ಬಾಸ್‌ಗೆ ಬಂದಿದ್ದು ನನ್ನ ತಪ್ಪು ನಿರ್ಧಾರ.. ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ ಶೃಂಗೇರಿ!

Bigg Boss Kannada Season 10 : ಬಿಗ್‌ ಬಾಸ್‌ನಲ್ಲಿ ಎರಡನೇ ವಾರದಲ್ಲಿ ಎರಡು ತಂಡಗಳನ್ನು ಮಾಡಿ ಟಾಸ್ಕ್‌ ಆಡಿಸಲಾಗುತ್ತಿದೆ. ಸಂಗೀತಾಗ ಮತ್ತು ವಿನಯ್‌ ಮಧ್ಯೆ ಮೊದಲ ವಾರದ ನಾಮಿನೇಷನ್‌ನಿಂದಲೇ ಹೊತ್ತಿಕೊಂಡಿದ್ದ ಕಿಚ್ಚು ಇದೀಗ ದ್ವೇಷದ ಜ್ವಾಲೆಯಾಗಿದೆ. 

Written by - Chetana Devarmani | Last Updated : Oct 19, 2023, 10:41 AM IST
  • ಬಿಗ್‌ ಬಾಸ್‌ ಎರಡನೇ ವಾರ ಜ್ವಾಲೆಯಾದ ದ್ವೇಷದ ಕಿಚ್ಚು
  • ಸಂಗೀತಾ ಮತ್ತು ವಿನಯ್‌ ಮಧ್ಯೆ ಬಿಗ್‌ ಫೈಟ್‌
  • ಬಿಗ್‌ ಬಾಸ್‌ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ ಶೃಂಗೇರಿ
ಬಿಗ್‌ ಬಾಸ್‌ಗೆ ಬಂದಿದ್ದು ನನ್ನ ತಪ್ಪು ನಿರ್ಧಾರ.. ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ ಶೃಂಗೇರಿ!   title=
Bigg Boss 10

Sangeetha Sringeri Emotional : ಬಿಗ್ ಬಾಸ್ ಕನ್ನಡ ಸೀಸನ್ 10 ಎರಡನೇ ವಾರಕ್ಕೆ ರಣರಂಗವಾಗಿದೆ. ಹಲವು ಸ್ಪರ್ಧಿಗಳ ಮಧ್ಯೆ ದ್ವೇಷದ ಕಿಡಿ ಹೊತ್ತಿಕೊಂಡಿದೆ. ಕೆಲವು ಸ್ಪರ್ಧಿಗಳು ಟಾಸ್ಕ್‌ ವಿಚಾರದಲ್ಲಿ ಸ್ಟ್ರಾಂಗ್‌ ಎನಿಸಿಕೊಂಡಿದ್ದಾರೆ. ಮತ್ತೆ ಕೆಲವರ ವರ್ತನೆ ಜನರ ಮನಗೆಲ್ಲುತ್ತಿದೆ. ಬಿಗ್‌ ಬಾಸ್‌ನಲ್ಲಿ ಎರಡನೇ ವಾರದಲ್ಲಿ ಎರಡು ತಂಡಗಳನ್ನು ಮಾಡಿ ಟಾಸ್ಕ್‌ ಆಡಿಸಲಾಗುತ್ತಿದೆ. ಸಂಗೀತಾ ಮತ್ತು ವಿನಯ್‌ ಮಧ್ಯೆ ಮೊದಲ ವಾರದ ನಾಮಿನೇಷನ್‌ನಿಂದಲೇ ಹೊತ್ತಿಕೊಂಡಿದ್ದ ಕಿಚ್ಚು ಇದೀಗ ದ್ವೇಷದ ಜ್ವಾಲೆಯಾಗಿದೆ. 

ಎರಡನೇ ವಾರಕ್ಕೆ ಬಿಗ್ ಬಾಸ್ ಸಾಕೆನ್ನುವಷ್ಟು ಸಂಗೀತಾ ಶೃಂಗೇರಿ ರೋಸಿ ಹೋದಂತಿದೆ. ವಿನಯ್ ಹಾಗೂ ಸಂಗೀತಾ ಮಧ್ಯೆಯ ಜಗಳ ತಾರಕಕ್ಕೇರುತ್ತಿದೆ. ಒಬ್ಬರ ಧ್ವನಿ ಕೇಳಿದರೆ ಇನ್ನೊಬ್ಬರು ಸಹಿಸಿಕೊಳ್ಳದಷ್ಟು ಸಿಟ್ಟು ಅವರನ್ನ ಕಾಡುತ್ತಿದೆ. ಇವರಿಬ್ಬರ ಜಗಳದ ಮಧ್ಯೆ ಸಿಲುಕಿರುವ ಕಾರ್ತಿಕ್‌ ಪಾಡು ಅಯ್ಯೋ ದೇವರೇ ಎಂಬಂತಿದೆ. 

ಇದನ್ನೂ ಓದಿ: BBK10: ನಾನಾ-ಅವಳಾ? ವಿನಯ್‌ ಪ್ರಶ್ನೆಗೆ ಉತ್ತರ ಕೊಡ್ತಾರಾ ಕಾರ್ತೀಕ್?   

 

 

ಬಿಗ್‌ ಬಾಸ್‌ನಲ್ಲಿ ವಿನಯ್‌ ಒಂದು ತಂಡದ ಕ್ಯಾಪ್ಟನ್‌ ಆಗಿದ್ದು, ಕಾರ್ತಿಕ್‌ ಮತ್ತೊಂದು ತಂಡದ ಕ್ಯಾಪ್ಟನ್‌ ಆಗಿದ್ದಾರೆ. ಸಂಗೀತಾ ಶೃಂಗೇರಿ ಕಾರ್ತಿಕ್‌ ಅವರ ತಂಡದಲ್ಲಿದ್ದಾರೆ. ಟಾಸ್ಕ್‌ನಲ್ಲಿ ಕಾರ್ತಿಕ್ ತಂಡ ಸೋತಿದೆ. ಹೀಗಾಗಿ ಅವರ ತಂಡದ ಸದಸ್ಯರಲ್ಲಿ ಒಬ್ಬರು ಶಿಕ್ಷೆ ಅನುಭವಿಸಬೇಕಿತ್ತು. ವಿನಯ್ ತಂಡದವರು ಈ ಶಿಕ್ಷೆಗೆ ಒಬ್ಬರನ್ನು ಸೆಲೆಕ್ಟ್‌ ಮಾಡಬೇಕಿತ್ತು. ವಿನಯ್‌ ಟೀಂ ಶಿಕ್ಷೆಗಾಗಿ ಸಂಗೀತಾ ಅವರನ್ನು ಆಯ್ಕೆ ಮಾಡಿತು. ಸಗಣಿ ನೀರಲ್ಲಿ ಸ್ನಾನ ಮಾಡಿಸುವ ಶಿಕ್ಷೆಯನ್ನು ನೀಡಲಾಗಿತ್ತು. ಇದು ಸಂಗೀತಾ ಅವರ ಬೇಸರಕ್ಕೆ ಕಾರಣವಾಗಿದೆ. 

ಮಧ್ಯರಾತ್ರಿ ಕಾರ್ತಿಕ್ ಬಳಿ ಸಂಗೀತಾ ಮಾತನಾಡುವ ವೇಳೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಾನು ಇಲ್ಲಿ ಬಂದು ತಪ್ಪು ಮಾಡಿದೆ ಅನಿಸ್ತಿದೆ. ಇದು ನನ್ನ ತಪ್ಪು ನಿರ್ಧಾರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಬಳಿ ಉಗಿಸಿಕೊಳ್ಳೋದು, ಈ ರೀತಿ ಶಿಕ್ಷೆ ಯಾರಿಗೆ ಬೇಕು? ನಮ್ಮ ತಂಡ ನಾಳೆಯೂ ಗೆಲ್ಲಲ್ಲ ಎನ್ನುತ್ತ ಸಂಗೀತಾ ಕಣ್ಣೀರು ಇಟ್ಟಿದ್ದಾರೆ. 

ಇದನ್ನೂ ಓದಿ: ಮಂಜುನಾಥ್ ಆಗಿದ್ದಾಗ ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ಹೇಗಿದ್ರು ಗೊತ್ತಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News