ದರ್ಶನ್ ಫ್ಯಾನ್ಸ್‌ ಕಣ್ಣಲ್ಲಿ ನೀರು ತರಿಸುತ್ತೆ ಈ ವಿಡಿಯೋ... ನಡೆಯೋಕು ಆಗ್ತಿಲ್ಲ.. ನಿಲ್ಲೋಕು ಆಗ್ತಿಲ್ಲ... ಬಾಗಿ ಬೀಳುವಷ್ಟು ಕಾಡ್ತಿದೆ ಬೆನ್ನು ನೋವು

Darshan sufferign with severe back pain video: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಬಳ್ಳಾಋಿ ಜೈಲಿನಲ್ಲಿದ್ದಾರೆ. ದರ್ಶನ್ ಆರೋಗ್ಯದ ಸ್ಥಿತಿ ತೀರಾ ಹದಗೆಟ್ಟಿದೆ.

Written by - Chetana Devarmani | Last Updated : Oct 22, 2024, 05:31 PM IST
  • ದರ್ಶನ್ ಫ್ಯಾನ್ಸ್‌ ಕಣ್ಣಲ್ಲಿ ನೀರು ತರಿಸುತ್ತೆ ಈ ವಿಡಿಯೋ
  • ನಡೆಯೋಕು ಆಗ್ತಿಲ್ಲ.. ನಿಲ್ಲೋಕು ಆಗ್ತಿಲ್ಲ...
  • ಬಾಗಿ ಬೀಳುವಷ್ಟು ಕಾಡ್ತಿದೆ ಬೆನ್ನು ನೋವು!
ದರ್ಶನ್ ಫ್ಯಾನ್ಸ್‌ ಕಣ್ಣಲ್ಲಿ ನೀರು ತರಿಸುತ್ತೆ ಈ ವಿಡಿಯೋ... ನಡೆಯೋಕು ಆಗ್ತಿಲ್ಲ.. ನಿಲ್ಲೋಕು ಆಗ್ತಿಲ್ಲ... ಬಾಗಿ ಬೀಳುವಷ್ಟು ಕಾಡ್ತಿದೆ ಬೆನ್ನು ನೋವು title=

Darshan sufferign with severe back pain video: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಬಳ್ಳಾಋಿ ಜೈಲಿನಲ್ಲಿದ್ದಾರೆ. ದರ್ಶನ್ ಆರೋಗ್ಯದ ಸ್ಥಿತಿ ತೀರಾ ಹದಗೆಟ್ಟಿದೆ. ಬೆನ್ನು ನೋವು ತಾಳಲಾಗದೇ ಒದ್ದಾಡುತ್ತಿದ್ದಾರೆ. ನಟ ದರ್ಶನ್‌ ಈ ಹಿನ್ನೆಲೆ ಜಾಮೀನು ಕೋರಿ ಮನವಿ ಕೂಡ ಮಾಡಿದ್ದಾರೆ. ನಟ ದರ್ಶನ್ ತೀವ್ರವಾದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ.   

ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿವಿ ನಾಗೇಶ್ ಅವರು, ಬೆಂಗಳೂರಿನ ವಿಮ್ಸ್ ಆಸ್ಪತ್ರೆಯ ವೈದ್ಯರು ಗುರುತಿಸಿರುವಂತೆ ನಟ ಎಲ್1 ಮತ್ತು ಎಲ್5 ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ವೈದ್ಯಕೀಯ ವರದಿಗಳು ಶಸ್ತ್ರಚಿಕಿತ್ಸೆಯ ಅಗತ್ಯವಿರಬಹುದು ಎಂದು ಸೂಚಿಸುತ್ತವೆ ಎಂದಿದ್ದರು. 

ಇದನ್ನೂ ಓದಿ : Samantha: ನಡುರಸ್ತೆಯಲ್ಲಿ ಕೈ ಕೈ ಹಿಡಿದು ಓಡಾಡಿದ ಸಮಂತಾ ರುತ್‌ ಪ್ರಭು? ಇವರೇನಾ ಹೊಸ ಗೆಳೆಯ?

ದರ್ಶನ್ ಅವರ ಆರೋಗ್ಯ ಸ್ಥಿತಿಯ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ದರ್ಶನ್‌ ಅವರಿಗೆ ನಿಲ್ಲಲು ಸಹ ಆಗದಷ್ಟು ಬೆನ್ನು ನೋವು ಕಾಡುತ್ತಿದೆ. ಹೊರಗಿದ್ದಾಗ ಫಿಟ್‌ ಆಗಿದ್ದಾಗ ದಚ್ಚು ಜೈಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ದರ್ಶನ್‌ ಅವರ ಇತ್ತೀಚಿನ ವಿಡಿಯೋ ನೋಡಿದರಂತೂ ಅವರ ಅಭಿಮಾನಿಗಳ ಕಣ್ಣಲ್ಲಿ ನೀರು ಬರುವುದು ಪಕ್ಕಾ. ದರ್ಶನ್‌ ಅವರ ಅಲ್ಲಲ್ಲೇ ರೆಸ್ಟ್‌ ಮಾಡುತ್ತ ನಡೆಯುವ ವಿಡಿಯೋ ವೈರಲ್‌ ಆಗುತ್ತಿದೆ. ಒಂದು ಬ್ಯಾಗ್‌ ಎತ್ತುವಷ್ಟು ಸಹ ಶಕ್ತಿ ಇಲ್ಲದಂತಾಗಿದೆ. ದರ್ಶನ್‌ ಅವರಿಗೆ ಜೈಲಲ್ಲಿ ಮಲಗಲು ಸಹ ಆಗುತ್ತಿಲ್ಲವಂತೆ. ಆ ಮಟ್ಟಕ್ಕೆ ದರ್ಶನ್‌     ಅವರಿಗೆ ಬೆನ್ನು ನೋವು ಕಾಡುತ್ತಿದೆ. 

ಜೂನ್ 9 ರಂದು ಬೆಂಗಳೂರಿನ ಸುಮನಹಳ್ಳಿ ಸೇತುವೆ ಬಳಿ ಶವವಾಗಿ ಪತ್ತೆಯಾದ 33 ವರ್ಷದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇದಾಗಿದೆ. ದರ್ಶನ್ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿತ್ತು. 

ದರ್ಶನ್ ತೂಗುದೀಪ, ನಟಿ ಪವಿತ್ರ ಗೌಡ ಮತ್ತು ಇತರ 15 ಮಂದಿಯನ್ನು ಜೂನ್ 11 ರಂದು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿಸಲಾಗಿತ್ತು. 

ಇದನ್ನೂ ಓದಿ : "ಕನ್ನಡವೇ ಉಸಿರು... ಕನ್ನಡ ಬಿಟ್ಟು ಬೇರೆ ಸಿನಿಮಾನೇ ಮಾಡಲ್ಲ" ಅಂತಿದ್ದ ರಾಜ್‌ಕುಮಾರ್‌ ತೆಲುಗು ಸಿನಿಮಾದಲ್ಲೂ ಅಭಿನಯಿಸಿದ್ರು! ಆ ಸೂಪರ್‌ ಹಿಟ್‌ ಚಿತ್ರ ಯಾವುದು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News