'ಮಾರ್ಕ್‌ ಅಂಥೋನಿ' ಪ್ರತಿ ಟಿಕೇಟ್ ನಿಂದ ರೈತನಿಗೆ ಒಂದು ರೂ...! ʼವಿಶಾಲʼ ಹೃದಯವಂತಿಕೆ

Mark Antony : ʼಮಾರ್ಕ್ ಆಂಥೋನಿʼ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಟೈಮ್ ಟ್ರಾವೆಲ್ ಕಾನ್ಸೆಪ್ಟ್ ನಲ್ಲಿ ಬಂದಿರುವ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ವಿಶಾಲ್, ಚಿತ್ರದ ಪ್ರತಿ ಟಿಕೆಟ್ ನಿಂದ ರೈತರಿಗೆ ಒಂದು ರೂಪಾಯಿ ನೀಡುವುದಾಗಿ ಹೇಳಿದ್ದಾರೆ.  

Written by - Krishna N K | Last Updated : Sep 23, 2023, 04:58 PM IST
  • ʼಮಾರ್ಕ್ ಆಂಥೋನಿʼ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ.
  • ಈ ಚಿತ್ರವನ್ನು ಅಧಿಕ್ ರವಿಚಂದ್ರನ್ ನಿರ್ದೇಶಿಸಿದ್ದು, ಎಸ್. ವಿನೋದ್ ಕುಮಾರ್ ನಿರ್ಮಿಸಿದ್ದಾರೆ.
  • ಆ್ಯಕ್ಷನ್ ಹೀರೋ ವಿಶಾಲ್ ಮತ್ತು ಎಸ್.ಜೆ.ಸೂರ್ಯ ಅಭಿನಯದ ಮಾರ್ಕ್‌ ಆಂಥೋನಿ ಚಿತ್ರ.
'ಮಾರ್ಕ್‌ ಅಂಥೋನಿ' ಪ್ರತಿ ಟಿಕೇಟ್ ನಿಂದ ರೈತನಿಗೆ ಒಂದು ರೂ...! ʼವಿಶಾಲʼ ಹೃದಯವಂತಿಕೆ title=

Vishan Mark antony : ಆ್ಯಕ್ಷನ್ ಹೀರೋ ವಿಶಾಲ್ ಮತ್ತು ಎಸ್.ಜೆ.ಸೂರ್ಯ ಅಭಿನಯದ ಇತ್ತೀಚೆಗಷ್ಟೇ ಬಿಡುಗಡೆಯಾದ ‘ಮಾರ್ಕ್ ಆಂಟನಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಸ್ಟರ್ ಆಗಿದೆ. ಈ ಚಿತ್ರವನ್ನು ಅಧಿಕ್ ರವಿಚಂದ್ರನ್ ನಿರ್ದೇಶಿಸಿದ್ದು, ಎಸ್. ವಿನೋದ್ ಕುಮಾರ್ ನಿರ್ಮಿಸಿದ್ದಾರೆ. ರಿತು ವರ್ಮಾ ನಾಯಕಿಯಾಗಿ ನಟಿಸಿದ್ದು, ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶಾಲ್ ಮತ್ತು ಎಸ್.ಜೆ.ಸೂರ್ಯ ಕಾಂಬಿನೇಷನ್‌ ಪ್ರೇಕ್ಷಕರ ಮನಗೆದ್ದಿದ್ದು, ಈ ಹಿನ್ನೆಲೆಯಲ್ಲಿ ಈ ಸಿನಿಮಾದ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. 

ಈ ಸಂದರ್ಭದಲ್ಲಿ ಮಾತನಾಡಿದ ನಟ ವಿಶಾಲ್, ಮಾರ್ಕ್ ಆಂಟೋನಿ ಸಿನಿಮಾವನ್ನು ಯಶಸ್ವಿಗೊಳಿಸಿದ ಪ್ರೇಕ್ಷಕರಿಗೆ ಧನ್ಯವಾದ ಹೇಳಿದರು. ಪ್ರೇಕ್ಷಕರು ಟಿಕೆಟ್ ಕೊಟ್ಟ ಹಣಕ್ಕೆ ತಕ್ಕಷ್ಟು ಮನರಂಜನೆ ನೀಡಿರುವುದು ತುಂಬಾ ಖುಷಿ ತಂದಿದೆ. ಈ ಚಿತ್ರದ ಪ್ರತಿ ಟಿಕೆಟ್‌ನಿಂದ ರೈತರಿಗೆ ಒಂದು ರೂಪಾಯಿ ದೇಣಿಗೆ ನೀಡಲಾಗುತ್ತದೆ ಎಂದು ವಿಶಾಲ್ ಹೇಳಿದ್ದಾರೆ.  

ಇದನ್ನೂ ಓದಿ: ಕೋಟಿ ಕೋಟಿ ಬಾಚಿದ ಜವಾನ್ ನಿರ್ದೇಶಕ ಅಟ್ಲಿ ಎಷ್ಟು ಆಸ್ತಿಯ ಒಡೆಯ ಗೊತ್ತೇ!?

ಬಳಿಕ ಎಸ್.ಜೆ.ಸೂರ್ಯ ಮಾತನಾಡಿ, ಮಾರ್ಕ್ ಆಂಟನಿ ಸಿನಿಮಾ ದಕ್ಷಿಣ ಭಾರತದಲ್ಲಿ ಧೂಳೆಬ್ಬಿಸುತ್ತಿದೆ. ಹೊಸ ಪರಿಕಲ್ಪನೆಯಲ್ಲಿ ಸಿನಿಮಾ ಮಾಡಿದ್ದೇನೆ. ಇನ್ನೂ ಸಿನಿಮಾ ನೋಡದ ಆಡಿನ್ಸ್ ಸಿನಿಮಾ ನೋಡುವಂತೆ ಕೇಳಿಕೊಂಡರು. ಚಿತ್ರದ ಎಡಿಟಿಂಗ್ ತುಂಬಾ ಚೆನ್ನಾಗಿದೆ.. ಯಾವುದೇ ಗೊಂದಲವಿಲ್ಲದೆ ಎಡಿಟ್ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಮಾರ್ಕೊ ಅಂಟೋನಿ ವಿಶಾಲ್ ಅವರ ವೃತ್ತಿಜೀವನದಲ್ಲಿ ದೊಡ್ಡ ಹಿಟ್ ಆಗಲಿದೆ. ತೆರೆಯ ಮೇಲೆ ಮಾತ್ರವಲ್ಲದೆ ಆಫ್ ಸ್ಕ್ರೀನ್ ನಲ್ಲೂ ವಿಶಾಲ್ ಹೀರೋ ಆಗಿದ್ದಾರೆ. ಅವರ ಡಬ್ಬಿಂಗ್ ಚೆನ್ನಾಗಿದೆ ಎಂದು ಎಲ್ಲರೂ ಹೇಳಿದಾಗ ಖುಷಿಯಾಗುತ್ತದೆ. ಸುನಿಲ್ ಈಗ ತೆಲುಗಿಗಷ್ಟೇ ಸೀಮಿತವಾಗಿಲ್ಲ.. ತಮಿಳು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ ಎಂದು ಸೂರ್ಯ ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News