‘ಕ್ರೇಜಿಸ್ಟಾರ್’ ರವಿಚಂದ್ರನ್ ಜೊತೆ ಮತ್ತೆ ನಟಿಸಲು ಇಷ್ಟಪಡುತ್ತೇನೆಂದ ನಟಿ ಯಾರು ಗೊತ್ತಾ..?

ಸೂಪರ್ ಹಿಟ್ ‘ರಣಧೀರ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ನಟಿ ಖುಷ್ಬೂ, ಕನ್ನಡದಲ್ಲಿ ನನ್ನ ಮೊದಲ ಚಿತ್ರಕ್ಕೆ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ ಎಂದಿದ್ದಾರೆ.

Last Updated : Sep 15, 2021, 09:46 AM IST
  • ಕನ್ನಡ ಚಿತ್ರರಂಗ ಮತ್ತು ಬೆಂಗಳೂರಿನಲ್ಲಿ ಕಳೆದ ಕ್ಷಣಗಳನ್ನು ಮತ್ತೆ ನೆನಪಿಸಿಕೊಂಡ ಹಿರಿಯ ನಟಿ ಖುಷ್ಬೂ
  • ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರೊಂದಿಗೆ ಮತ್ತೆ ತೆರೆಹಂಚಿಕೊಳ್ಳಲು ಇಷ್ಟಪಡುತ್ತೇನೆಂದ ನಟಿ
  • ಒಳ್ಳೆಯ ಕಥೆ ಬಂದರೆ ಮತ್ತೆ ನಾನು ರವಿಚಂದ್ರನ್ ಅವರೊಂದಿಗೆ ನಟಿಸುತ್ತೇನೆಂದ ಖುಷ್ಬೂ
‘ಕ್ರೇಜಿಸ್ಟಾರ್’ ರವಿಚಂದ್ರನ್ ಜೊತೆ ಮತ್ತೆ ನಟಿಸಲು ಇಷ್ಟಪಡುತ್ತೇನೆಂದ ನಟಿ ಯಾರು ಗೊತ್ತಾ..? title=
ಒಳ್ಳೆಯ ಕಥೆಗಾಗಿ ಕಾಯುತ್ತಿರುವೆ ಎಂದಿರುವ ಖುಷ್ಬೂ

ಬೆಂಗಳೂರು: ಬಾಲಿವುಡ್‌ಗೆ ಪಾದಾರ್ಪಣೆ ಮಾಡುವುದರಿಂದ ಹಿಡಿದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕ್ವೀನ್ ಆಗಿ ಆಳ್ವಿಕೆ ನಡೆಸುವವರೆಗೆ ಖ್ಯಾತ ನಟಿ ಖುಷ್ಬೂ ಸುಂದರ್(Kushboo) ವೃತ್ತಿಜೀವನ ಸ್ಮರಣೀಯವಾಗಿದೆ. ಈ ನಟಿ ಹತ್ತಾರು ಕನ್ನಡ ಚಿತ್ರಗಳಲ್ಲಿ ದಿಗ್ಗಜ ನಟರೊಂದಿಗೆ ನಟಿಸಿದ್ದಾರೆ. ತಮ್ಮ ಹಳೆಯ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದ(Kannada Film Industry) ಮೇಲಿನ ಪ್ರೀತಿಯನ್ನು ಅವರು ವ್ಯಕ್ತಪಡಿಸಿದ್ದಾರೆ.    

ಸೂಪರ್ ಹಿಟ್ ‘ರಣಧೀರ’ ಚಿತ್ರದ ಮೂಲಕ ಸ್ಯಾಂಡಲ್ ವುಡ್(Sandalwood)ಗೆ ಪಾದಾರ್ಪಣೆ ಮಾಡಿದ ನಟಿ ಖುಷ್ಬೂ, ‘ಕನ್ನಡದಲ್ಲಿ ನನ್ನ ಮೊದಲ ಚಿತ್ರಕ್ಕೆ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ನಾನು ಭಾವಿಸಿರಲಿಲ್ಲ. ನಾನು ತಮಿಳಿನಲ್ಲಿ ಸಿನಿಮಾ ಮಾಡುವ ಮುನ್ನವೇ ಇಲ್ಲಿ ಸಿನಿಮಾ ಮಾಡಿದ್ದೆ’ ಎಂದು ಹೇಳಿಕೊಂಡಿದ್ದಾರೆ. ‘ನನ್ನ ಬೆಂಗಳೂರಿನ ನೆನಪುಗಳು ಇಂದಿಗೂ ಹಚ್ಚಹಸಿರಾಗಿವೆ. ಸುಂದರ ಉದ್ಯಾನ ನಗರಿಯಲ್ಲಿ ಕಳೆದ ಕ್ಷಣಗಳು ಅದ್ಭುತವಾಗಿದ್ದವು. ಎಂ.ಜಿ.ರಸ್ತೆಯಲ್ಲಿ ಐಸ್ ಕ್ರೀಮ್‌, ಕಾಫಿ ಕುಡಿಯುವುದು ನನಗೆ ಅತ್ಯಂತ ಖುಷಿ ನೀಡುತ್ತಿದ್ದವು. ಬೆಂಗಳೂರಿನಲ್ಲಿ ನನ್ನ ಸುಂದರ ನೆನಪುಗಳನ್ನು ಆಗಾಗ ಮೆಲಕು ಹಾಕುತ್ತಿರುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Spook fest: 13 ಹಾರರ್ ಸಿನಿಮಾ ನೋಡಿ 95 ಸಾವಿರ ರೂ. ಜೇಬಿಗಿಳಿಸಿಕೊಳ್ಳಿ..!

50 ವರ್ಷದ ಹಿರಿಯ ನಟಿ ಖುಷ್ಬೂ ಅನೇಕ ವರ್ಷಗಳಿಂದ ಕ್ರೇಜಿಸ್ಟಾರ್ ರವಿಚಂದ್ರನ್(V.Ravichandran) ಮತ್ತು ಅವರ ಕುಟುಂಬದೊಂದಿಗೆ ಆತ್ಮೀಯ ಸ್ನೇಹವನ್ನು ಹೊಂದಿದ್ದಾರೆ. ರವಿಚಂದ್ರನ್ ಜೊತೆಗೆ ನಟಿಸಿದ ದಿನಗಳನ್ನು ನೆನಪಿಸಿಕೊಂಡು ಖುಷಿ ಪಡುತ್ತಾರೆ. ಈ ಜೋಡಿಯನ್ನು ಮತ್ತೆ ತೆರೆಮೇಲೆ ಕಾಣಲು ಲಕ್ಷಾಂತರ ಅಭಿಮಾನಿಗಳು ಕಾತುರರಾಗಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ನಟಿ ಖುಷ್ಬು ಕೇಜ್ರಿಸ್ಟಾರ್ ರವಿಚಂದ್ರನ್ ಜೊತೆ ನನಗೆ ಮತ್ತೆ ನಟಿಸಬೇಕೆಂಬ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ.

‘ರವಿ(Ravichandran) ಸರ್ ಮತ್ತು ನನಗೆ ಈಗ ಸರಿಹೊಂದುವಂತಹ ಆಸಕ್ತಿದಾಯಕ ಕಥೆಯನ್ನು ಯಾರಾದರೂ ತರಬೇಕು. ನಾನು ಅವರೊಂದಿಗೆ ಮತ್ತೆ ಅಭಿನಯಿಸಲು ಇಷ್ಟಪಡುತ್ತೇನೆ. ಜನರು ನಮ್ಮನ್ನು ಅದ್ಭುತ ಜೋಡಿಯಾಗಿ ನೆನಪಿಸಿಕೊಳ್ಳುತ್ತಾರೆ. ಪ್ರೇಕ್ಷಕರಿಗೆ ಇಷ್ಟವಾಗುವಂತಹ ಕಥೆ ಇದ್ದರೆ ನಾನು ರವಿ ಸರ್ ಜೊತೆಗೆ ನಟಿಸುತ್ತೇನೆ. ನಾವಿಬ್ಬರೂ ಮತ್ತೆ ತೆರೆಮೇಲೆ ಬರಲು ಖುಷಿಯಾಗುತ್ತದೆ. ಒಳ್ಳೆಯ ಚಿತ್ರಕಥೆ ಬರುವವರೆಗೂ ನಾನು ಕಾಯುತ್ತೇನೆ’ ಅಂತಾ ನಟಿ ಹೇಳಿದ್ದಾರೆ.  

ಇದನ್ನೂ ಓದಿ: 'ಉದಯ್ ಚೋಪ್ರಾ ಮತ್ತು ನಾನು 5 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದೇವೆ'

‘ರಣಧೀರ’ ಸಿನಿಮಾ(Ranadheera Movie)ದ 30ರ ಸಂಭ್ರಮದಲ್ಲಿದ್ದಾಗ ನಾನು ರವಿ ಸರ್ ಜೊತೆ ದೂರದರ್ಶನದಲ್ಲಿ ಕಾಣಿಸಿಕೊಂಡಿದ್ದೆ. 3 ದಶಕಗಳ ಹಿಂದಿನ ನಮ್ಮಿಬ್ಬರ ಅಭಿನಯವನ್ನು ಜನರು ಇಂದಿಗೂ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಿದ್ದಾರೆ ಎಂಬುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಇದು ನನಗೆ ತುಂಬಾ ವಿಶೇಷ ಮತ್ತು ಸಂತೋಷವನ್ನು ನೀಡಿದೆ’ ಅಂತಾ ಖುಷ್ಬೂ ಹೇಳಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News