ಮೋದಿ ಪ್ರಧಾನಿಯಾಗಿರುವವರೆಗೆ ʼಭಾರತʼಕ್ಕೆ ತಲೆಬಾಗುವ ಸಂದರ್ಭ ಬರಲ್ಲ : ಪವನ್‌ ಕಲ್ಯಾಣ್‌

Pawan Kalyan about Modi : ಆಂಧ್ರಪ್ರದೇಶ ಚುನಾವಣೆಯಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆಲುವಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಫಲಿತಾಂಶ ಬಂದ ನಂತರ ಪವನ್ ಕಲ್ಯಾಣ್ ಅವರ ವಿಡಿಯೋಗಳು ಸದ್ದು ಮಾಡುತ್ತಿವೆ. 

Written by - Krishna N K | Last Updated : Jun 7, 2024, 05:22 PM IST
    • ಪವರ್ ಸ್ಟಾರ್ ಪವನ್ ಕಲ್ಯಾಣ್ ಗೆಲುವಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
    • ಎಪಿ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಪ್ರಚಂಡ ಬಹುಮತದಿಂದ ಗೆದ್ದಿದ್ದಾರೆ.
    • ಚಂದ್ರಬಾಬು ಮತ್ತು ಪವನ್ ಕಲ್ಯಾಣ್ ಕೂಟ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ
ಮೋದಿ ಪ್ರಧಾನಿಯಾಗಿರುವವರೆಗೆ ʼಭಾರತʼಕ್ಕೆ ತಲೆಬಾಗುವ ಸಂದರ್ಭ ಬರಲ್ಲ : ಪವನ್‌ ಕಲ್ಯಾಣ್‌ title=

Pawan Kalyan: ಎಪಿ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಪ್ರಚಂಡ ಬಹುಮತದಿಂದ ಗೆದ್ದಿದ್ದಾರೆ. ಮೈತ್ರಿಯೊಂದಿಗೆ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 21 ಸ್ಥಾನಗಳನ್ನೂ ಸಹ ಗೆದ್ದಿದ್ದಾರೆ. ಜನಸೇನಾ ಪಕ್ಷ ಇಂಥದ್ದೊಂದು ಸಂಚಲನ ಮೂಡಿಸಿದ್ದರಿಂದ ಪವರ್‌ ಸ್ಟಾರ್‌ ಅಭಿಮಾನಿಗಳು, ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. 

ಈ ಚುನಾವಣೆಯಲ್ಲಿ ಬಿಜೆಪಿ, ಟಿಡಿಪಿ ಮತ್ತು ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷ ಒಟ್ಟಾಗಿ ಭಾಗವಹಿಸಿದ್ದು ಗೊತ್ತೇ ಇದೆ. ಮೋದಿಯವರ ಬಿಜೆಪಿ ಪಕ್ಷ ಆಂಧ್ರಪ್ರದೇಶದಿಂದ ಹೆಚ್ಚು ಎಂಪಿ ಸ್ಥಾನಗಳನ್ನು ಪಡೆದಿದ್ದು ಗಮನಾರ್ಹ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮೋದಿ, ಚಂದ್ರಬಾಬು ಮತ್ತು ಪವನ್ ಕಲ್ಯಾಣ್ ಕೂಟ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ ಎಂದು ಹಾಡಿ ಹೊಗಳಿದರು. ಅಲ್ಲದೆ, ಪವನ್ ಕಲ್ಯಾಣ್ ಹೆಸರನ್ನು ನಿರ್ದಿಷ್ಟವಾಗಿ ಪ್ರಸ್ತಾಪಿಸಿದ ಮೋದಿ, ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಪವನ್ ಒಂದು ತುಫಾನ್ ಎಂದರು.

ಇದನ್ನೂ ಓದಿ:ಮೊಟ್ಟೆಯ ಈ ಫೇಸ್‌ ಪ್ಯಾಕ್‌ ನಿಮ್ಮ ತ್ವಚೆಗೆ ನೀಡುತ್ತೆ ಕಾಂತಿ..! ತಪ್ಪದೇ ಟ್ರೈ ಮಾಡಿ..

ಈ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಮೋದಿ ಬಗ್ಗೆ ಮಾತನಾಡಿದ್ದು, ಮೋದಿಜೀ, ನೀವು ನಿಜವಾಗಿಯೂ ನಮ್ಮ ದೇಶದ ಸ್ಫೂರ್ತಿ, ನೀವು ಈ ದೇಶದ ಪ್ರಧಾನಿಯಾಗಿರುವವರೆಗೆ ನಮ್ಮ ದೇಶಕ್ಕೆ ತಲೆಬಾಗುವ ಸಂದರ್ಭ ಬರುವುದಿಲ್ಲ ಎಂದರು. ಅಲ್ಲದೆ, ಮೋದಿಯವರ ನಿರ್ದೇಶನದಿಂದ ನಾವು ಆಂಧ್ರಪ್ರದೇಶದಲ್ಲಿ ಶೇಕಡಾ 91 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ ಎಂದು ಪವನ್ ಕಲ್ಯಾಣ್ ಹೇಳಿದರು. ಬಳಿಕ ಮಾತನಾಡಿದ ಚಂದ್ರಬಾಬು ನಾಯ್ಡು, ‘ನರೇಂದ್ರ ಮೋದಿಯವರು ಸರಿಯಾದ ಸಮಯದಲ್ಲಿ ಭಾರತಕ್ಕೆ ಸೂಕ್ತ ನಾಯಕರಾಗಿ ಬಂದಿದ್ದಾರೆ’ ಎಂದರು.

ಸದ್ಯ ಪವನ್ ಕಲ್ಯಾಣ್ ಕೈಯಲ್ಲಿ ಹಲವು ಸಿನಿಮಾಗಳಿವೆ. ಈ ಪೈಕಿ ಸುಜಿತ್ ನಿರ್ದೇಶನದ ಓಜಿ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಸಿನಿಮಾದ ಶೂಟಿಂಗ್ ನಲ್ಲಿ ಪವನ್ ಕಲ್ಯಾಣ್ ಭಾಗವಹಿಸಲಿದ್ದಾರೆ.. ಸಿನಿಮಾ ಅಂದುಕೊಂಡ ದಿನಾಂಕಕ್ಕೆ ಬಿಡುಗಡೆಯಾಗುತ್ತದೋ ಇಲ್ಲವೋ ಕಾದು ನೋಡಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News