ಕಾಟೇರದಲ್ಲಿ ಹಿರಣ್ಯ ಕಶಿಪು ಸೀನ್‌ಗೆ ಬಾಲಿವುಡ್‌ನ ಈ ಚಿತ್ರ ಸ್ಪೂರ್ತಿ!

Kaatera: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಚಿತ್ರದಲ್ಲಿ ನಾಟಕ ಸನ್ನಿವೇಶವೊಂದಿದ್ದು, ಅದರಲ್ಲಿ ಹಿರಣ್ಯ ಕಶಿಪು ಪಾತ್ರಕ್ಕೆ ನಿರ್ದೇಶಕ ತರುಣ್‌ ಬಾಲಿವುಡ್‌ ಸಿನಿಮಾದಿಂದ ಸ್ಪೂರ್ತಿ ಪಡೆದಿದ್ದರಂತೆ. ಹಾಗಾದ್ರೆ ಆ ಬಾಲಿವುಡ್‌ ಚಿತ್ರ ಯಾವ್ದು? ಯಾವ ಪಾತ್ರ ಸ್ಪೂರ್ತಿ ನೀಡಿದ್ದು? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Dec 31, 2023, 11:33 AM IST
  • ಕಾಟೇರ ಚಿತ್ರದಲ್ಲಿ ಭಿಕ್ಷುಕನ ಪಾತ್ರ ಮಾಡಿಯೇ ಜನರನ್ನ ರಂಜಿಸಿದ್ದ ವೈಜನಾಥ್ ಬಿರಾದಾರ್ ಇಲ್ಲಿ ಮೌನಿಯಾಗಿಯೇ ಸಾಕಷ್ಟು ಮಾತನಾಡಿದನ್ನು ನೋಡಿದಾಗ ದರ್ಶನ್ ಮಾತು ಸತ್ಯ ಅನಿಸುತ್ತದೆ.
  • ಡೈರೆಕ್ಟರ್ ತರುಣ್ ಸುಧೀರ್ ಇಲ್ಲಿ ನಾಟಕದ ದೃಶ್ಯವನ್ನೂ ಇಟ್ಟಿದ್ದು, ಅದರಲ್ಲಿ ಕುಮಾರ್ ಗೋವಿಂದ್ ಅವರಿಗೆ ಹಿರಣ್ಯ ಕಶಿಪು ಪಾತ್ರ ಮಾಡೋಕೆ ಹಂಬಲಿಸುತ್ತಾರೆ.
  • ಕಾಟೇರ ಚಿತ್ರದಲ್ಲಿ, ಹಿರಣ್ಯ ಕಶಿಪು ಪಾತ್ರದಲ್ಲಿ ವೈಜನಾಥ್ ಬಿರಾದಾರ್ ಸ್ಟೇಜ್ ಹತ್ತುತ್ತಿದ್ದಾಗ, ಎಲ್ಲರಿಗೂ ಆಶ್ವರ್ಯವೇ ಆಗುತ್ತದೆ.
ಕಾಟೇರದಲ್ಲಿ ಹಿರಣ್ಯ ಕಶಿಪು ಸೀನ್‌ಗೆ ಬಾಲಿವುಡ್‌ನ ಈ ಚಿತ್ರ ಸ್ಪೂರ್ತಿ! title=

Kaatera Scene: ಕಾಟೇರ ಸಿನಿಮಾದ ನಾಯಕ ದರ್ಶನ್ ಪ್ರಚಾರ ಟೈಮ್‌ನಲ್ಲಿ, ನಮ್ಮ ಸಿನಿಮಾದಲ್ಲಿ ಒಬ್ಬ ಸ್ಟಾರ್ ಇದ್ದಾರೆ. ಅವರು ಕನ್ನಡದ ಅದ್ಬುತ ನಟ ಅಂತ ವೈಜನಾಥ್ ಬಿರಾದಾರ್ ಬಗ್ಗೆ ಹೇಳಿಕೊಂಡಿದ್ದರು. ಕಾಟೇರ ಚಿತ್ರದಲ್ಲಿ ಭಿಕ್ಷುಕನ ಪಾತ್ರ ಮಾಡಿಯೇ ಜನರನ್ನ ರಂಜಿಸಿದ್ದ ವೈಜನಾಥ್ ಬಿರಾದಾರ್ ಇಲ್ಲಿ ಮೌನಿಯಾಗಿಯೇ ಸಾಕಷ್ಟು ಮಾತನಾಡಿದನ್ನು ನೋಡಿದಾಗ ದರ್ಶನ್ ಮಾತು ಸತ್ಯ ಅನಿಸುತ್ತದೆ. ಕಾಟೇರ ಆಪ್ತನಾಗಿಯೇ ಇರೋ ವೈಜನಾಥ್ ಬಿರಾದಾರ್ ಇಲ್ಲಿ ಎಲ್ಲರ ಮನದಲ್ಲಿಯೇ ಉಳಿದಿದ್ದು, ಹಾಸ್ಯದ ಹೊನಲನ್ನೂ ಹರಿಸುತ್ತಾರೆ. ಆದರೆ ಚಿತ್ರದ ಆ ಒಂದು ದೃಶ್ಯ ನಿಜಕ್ಕೂ ಎಲ್ಲರ ಮನದಲ್ಲ ಗಟ್ಟಿಯಾಗಿಯೇ ಉಳಿಯುತ್ತಿದ್ದು, ಅಂತಹ ಆ ಒಂದು ದೃಶ್ಯದ ಪ್ಲಾನಿಂಗ್ ಸಖತ್ ಆಗಿಯೇ ಆಗಿದೆ.

ಹೌದು.. ಕಾಟೇರ ಚಿತ್ರದಲ್ಲಿ ನಾಟಕದ ದೃಶ್ಯ ಕೂಡ ಬರುತ್ತಿದ್ದು, ಹಳ್ಳಿಯ ಸಿನಿಮಾ ಅಂದ್ಮೇಲೆ ನಾಟಕ ಇರದೇ ಇದ್ರೇ ಹೇಗೆ. ನಿಜ, ಡೈರೆಕ್ಟರ್ ತರುಣ್ ಸುಧೀರ್ ಇಲ್ಲಿ ನಾಟಕದ ದೃಶ್ಯವನ್ನೂ ಇಟ್ಟಿದ್ದು, ಅದರಲ್ಲಿ ಕುಮಾರ್ ಗೋವಿಂದ್ ಅವರಿಗೆ ಹಿರಣ್ಯ ಕಶಿಪು ಪಾತ್ರ ಮಾಡೋಕೆ ಹಂಬಲಿಸುತ್ತಾರೆ. ಇದಕ್ಕಾಗಿ ಸೂಕ್ತ ತಾಲೀಮು ಕೂಡ ನಡೆಸುತ್ತಿದ್ದು, ಆದರೆ ಕೊನೆಯಲ್ಲಿ ಈ ಒಂದು ಪಾತ್ರವನ್ನ ವೈಜನಾಥ್ ಬಿರಾದಾರ್ ಮಾಡುತ್ತಾರೆ. ಒಬ್ಬ ಮೂಗ ಈ ಒಂದು ಗಟ್ಟಿ ಪಾತ್ರವನ್ನೆ ಹೇಗೆ ಮಾಡುತ್ತಾರೆ? ಈ ಒಂದು ಪ್ರಶ್ನೆ ಪ್ರೇಕ್ಷಕರಿಗೂ ಮೂಡುತ್ತಿದ್ದು, ನಾಟಕ ನೋಡಲು ಕುಳಿತು ಚಿತ್ರದ ಪಾತ್ರಗಳಿಗೂ ಅನಿಸುತ್ತದೆ.

ಇದನ್ನೂ ಓದಿ:

ಕಾಟೇರ ಚಿತ್ರದಲ್ಲಿ, ಹಿರಣ್ಯ ಕಶಿಪು ಪಾತ್ರದಲ್ಲಿ ವೈಜನಾಥ್ ಬಿರಾದಾರ್ ಸ್ಟೇಜ್ ಹತ್ತುತ್ತಿದ್ದಾಗ, ಎಲ್ಲರಿಗೂ ಆಶ್ವರ್ಯವೇ ಆಗುತ್ತದೆ. ಅಷ್ಟರಲ್ಲಿಯೆ ಗಟ್ಟಿ ಧ್ವನಿಯಲ್ಲಿ ಡೈಲಾಗ್‌ಗಳನ್ನ ವೈಜನಾಥ್ ಬಿರಾದಾರ್ ಹೇಳಿದಾಗ, ಆಗಲೇ ಕ್ಯಾಮರಾ ಪ್ಯಾನ್ ಅಗುತ್ತದೆ. ಅದು ಬ್ಯಾಕ್ ಸೈಡ್ ಪ್ಯಾನ್ ಆಗುತ್ತಿದ್ದು, ಇದನ್ನ ನೋಡಿದಾಗ ನಿಜಕ್ಕೂ ಎಲ್ಲರಿಗೂ ಆಶ್ಚರ್ಯ ಆಗುತ್ತದೆ. ಕಾರಣ, ಮೂಗನಾರಿಗೋ ವೈಜನಾಥ್ ಪಾತ್ರಕ್ಕೆ ಕಾಟೇರ ದರ್ಶನ್ ಧ್ವನಿ ಕೊಡ್ತಾನೇ ಇದ್ದು, ಹಿರಣ್ಯ ಕಶಿಪು ಪಾತ್ರವೇ ಆಗಿ ಅಭಿನಯಿಸುತ್ತಲೇ ಇರ್ತಾರೆ. ಇದನ್ನ ಕಂಡ ಕುಮಾರ್ ಗೋವಿಂದ್ ಮಂತ್ರಮುಗ್ಧಗೊಳ್ಳುತ್ತಾರೆ ನೋಡಿ.

ಈ ಹಿಂದೆ, ಶಮಿತಾಭ್ ಚಿತ್ರದಲ್ಲಿ ಮೂಗನಾಗಿರೋ ಧನುಷ್ ಪಾತ್ರಕ್ಕೆ ಅಮಿತಾಭ್ ಧ್ವನಿ ಆಗಿದ್ದು, ಆ ಧ್ವನಿಗೆ ಎಲ್ಲರೂ ಮನಸೋತ್ತಿರುತ್ತಾರೆ. ವಿಶೇಷವಾಗಿ ಧನುಷ್ ನಿಜವಾದ ಧ್ವನಿ ಇದು ಅಂತಲೇ ತಿಳಿದಿರುತ್ತಿದ್ದು, ಈ ಒಂದು ಧ್ವನಿಯಿಂದಲೇ ಧನುಷ್ ಇಲ್ಲಿ ಸೂಪರ್ ಸ್ಟಾರ್ ಕೂಡ ಆಗಿರುತ್ತಾರೆ. ಅದೇ ರೀತಿ ಕಾಟೇರ ಚಿತ್ರದಲ್ಲೂ ಹಿರಣ್ಯ ಕಶಿಪು ದೃಶ್ಯ ಈ ಒಂದು ಫೀಲ್ ಕೊಡುತ್ತಿದ್ದು, ಊರ ಜನರ ಮುಂದೆ ಮೂಗನಾಗಿಯೇ ತಮಾಷೆಯ ವಸ್ತು ಆಗಿದ್ದ ವೈಜನಾಥ್ ಪಾತ್ರ ಈ ದೃಶ್ಯದ ಬಳಿಕ ಎಲ್ಲರಿಗೂ ಹೀರೋ ರೀತಿಯಲ್ಲಿಯೇ ಕಾಣಿಸುತ್ತಾರೆ. ಸಿನಿಮಾದ ಎಲ್ಲ ದೃಶ್ಯಗಳಲ್ಲಿ ಈ ಒಂದು ದೃಶ್ಯ ವಿಶೇಷವಾಗಿಯೇ ಕಾಣಿಸುತ್ತದೆ ಅಂತಲೂ ಹೇಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News