ಕಿಚ್ಚನ 27 ವರ್ಷದ ಸಿನಿ ಜರ್ನಿಗೆ ಕೆಕ್‌ ಕಟ್‌ ಮಾಡಿಸಿ ಶುಭ ಕೋರಿದ ಶಿವಣ್ಣ ಮತ್ತು ಗೀತಕ್ಕ..!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 27 ವರ್ಷಗಳ ಸಿನಿ ಜರ್ನಿ ಪೂರೈಸಿದ್ದಾರೆ. ಯಲಹಂಕದ ಹತ್ತಿರ ರಾಜನಕುಂಟೆಯಲ್ಲಿ ಕಿಚ್ಚ ಕ್ರಿಕೆಟ್‌ ಆಡುತ್ತಿದ್ದ ಸ್ಥಳಕ್ಕೆ ಸರ್ಪ್ರೈಸ್‌ ವಿಸಿಟ್‌ ಕೊಟ್ಟ ಕರುನಾಡ ಚರ್ಕವರ್ತಿ ಡಾ. ಶಿವರಾಜಕುಮಾರ್‌ ಹಾಗೂ ಗೀತಾ ಶಿವರಾಜ್‌ಕುಮಾರ್‌ ಅವರು ಕೆಕ್‌ ಕಟ್‌ ಮಾಡಿಸುವ ಮೂಲಕ ಸಂಭ್ರಮಿಸಿದರು. 

Written by - Krishna N K | Last Updated : Feb 2, 2023, 06:15 PM IST
  • ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 27 ವರ್ಷಗಳ ಸಿನಿ ಜರ್ನಿ ಪೂರೈಸಿದ್ದಾರೆ.
  • ಕಿಚ್ಚ ಕ್ರಿಕೆಟ್‌ ಆಡುತ್ತಿದ್ದ ಸ್ಥಳಕ್ಕೆ ಸರ್ಪ್ರೈಸ್‌ ವಿಸಿಟ್‌ ಕೊಟ್ಟ ಕರುನಾಡ ಚರ್ಕವರ್ತಿ ಡಾ. ಶಿವರಾಜಕುಮಾರ್‌.
  • ಕಿಚ್ಚನ ಸಿನಿ ಜರ್ನಿಯನ್ನು ಕೆಕ್‌ ಕಟ್‌ ಮಾಡುವ ಮೂಲಕ ಸಂಭ್ರಮಿಸಿದ ಶಿವಣ್ಣ ಗೀತಕ್ಕ.
ಕಿಚ್ಚನ 27 ವರ್ಷದ ಸಿನಿ ಜರ್ನಿಗೆ ಕೆಕ್‌ ಕಟ್‌ ಮಾಡಿಸಿ ಶುಭ ಕೋರಿದ ಶಿವಣ್ಣ ಮತ್ತು ಗೀತಕ್ಕ..! title=

Shivanna Kichcha Sudeep : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 27 ವರ್ಷಗಳ ಸಿನಿ ಜರ್ನಿ ಪೂರೈಸಿದ್ದಾರೆ. ಯಲಹಂಕದ ಹತ್ತಿರ ರಾಜನಕುಂಟೆಯಲ್ಲಿ ಕಿಚ್ಚ ಕ್ರಿಕೆಟ್‌ ಆಡುತ್ತಿದ್ದ ಸ್ಥಳಕ್ಕೆ ಸರ್ಪ್ರೈಸ್‌ ವಿಸಿಟ್‌ ಕೊಟ್ಟ ಕರುನಾಡ ಚರ್ಕವರ್ತಿ ಡಾ. ಶಿವರಾಜಕುಮಾರ್‌ ಹಾಗೂ ಗೀತಾ ಶಿವರಾಜ್‌ಕುಮಾರ್‌ ಅವರು ಕೆಕ್‌ ಕಟ್‌ ಮಾಡಿಸುವ ಮೂಲಕ ಸಂಭ್ರಮಿಸಿದರು. 

ಸುದೀಪ್ ಅವರಿಗೆ ಜನವರಿ 31 ಬಹಳ ವಿಶೇಷವಾದ ದಿನ. ಏಕೆಂದ್ರೆ, ಸುದೀಪ್ ಚಿತ್ರರಂಗಕ್ಕೆ ಸುದೀಪ್‌ ಕಾಲಿಟ್ಟು ಜ.31ಕ್ಕೆ ಸರಿಯಾಗಿ 27 ವರ್ಷಗಳಾಗುತ್ತವೆ. 27 ವರ್ಷಗಳ ಹಿಂದೆ ಜನವರಿ 31 ರಂದು ಸುದೀಪ್ ತಮ್ಮ ಮೊದಲ ಚಿತ್ರಕ್ಕೆ ಬಣ್ಣ ಹಚ್ಚಿ, ಸಿನಿಲೋಕಕ್ಕೆ ಕಾಲಿಟ್ಟಿದ್ದರು. ಇನ್ನು ಕಿಚ್ಚನ ಸಿನಿ ಜರ್ನಿಯನ್ನು ಕೆಕ್‌ ಕಟ್‌ ಮಾಡಿಸುವ ಮೂಲಕ ಶಿವಣ್ಣ ಹಾಗು ಗೀತಾ ಅವರು ಸಂಭ್ರಮಿಸಿದ್ದಾರೆ. ಈ ವೇಳೆ ಗೋಲ್ಡನ್‌ ಸ್ಟಾರ್‌ ಗಣೇಶ್‌, ಚಂದನ್‌ ಸೇರಿದಂತೆ ಹಲವಾರು ನಟರಿದ್ದರು.

ಇದನ್ನೂ ಓದಿ: ಶ್ರಿನಗರ ಕಿಟ್ಟಿ ʼಗೌಳಿʼ ಸಿನಿಮಾದ ತೆಲುಗು ರೈಟ್ಸ್ ಸೋಲ್ಡ್ ಔಟ್..!

ಮೊನ್ನೆ ಅಂದ್ರೆ, ಜ.31 ರಂದು ನಟ ಕಿಚ್ಚ ಸುದೀಪ್ ಕೂಡ ತಮ್ಮ ವಿಶೇಷ ದಿನವನ್ನು ಸಂತಸದಿಂದ ಸೆಲಿಬ್ರೆಟ್‌ ಮಾಡಿದ್ದರು. ಟ್ವಿಟ್ಟರ್‌ನಲ್ಲಿ ಸುದೀರ್ಘ ಬರಹ ಬರೆದುಕೊಂಡು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದರು. "ಪ್ರತಿ ಬಾರಿಯೂ ನನ್ನ ಜೊತೆಗೆ ನಿಂತಿದ್ದಕ್ಕೆ ನನ್ನ ಗೆಳೆಯರಿಗೆ ಧನ್ಯವಾದ ತಿಳಿಸುತ್ತೇನೆ. ನನ್ನನ್ನು ನೀವೆಲ್ಲ ಆಶೀರ್ವದಿಸಿರುವಿರಿ ಮತ್ತು ತುಂಬಾ ಪ್ರೀತಿ ನಿಮ್ಮಿಂದ ಸಿಕ್ಕಿದೆ. ನನಗೆ ಅವಕಾಶಗಳನ್ನು ನೀಡಿದ್ದಕ್ಕಾಗಿ ಕೆಎಫ್‌ಐಗೆ ಧನ್ಯವಾದಗಳು. ನನ್ನನ್ನು ನಂಬಿದ್ದಕ್ಕಾಗಿ ಹಿಂದಿ, ತಮಿಳು ಮತ್ತು ತೆಲುಗು ಭ್ರಾತೃತ್ವಕ್ಕೆ ನಾನು ಧನ್ಯವಾದ ಹೇಳದಿದ್ದರೆ ಅದು ಅಪೂರ್ಣವಾಗಿರುತ್ತದೆ" ಎಂದು ಕಿಚ್ಚ ಬರೆದುಕೊಂಡಿದ್ದರು. 

ಸದ್ಯ ವಿಕ್ರಾಂತ್‌ ರೋಣ ಬಳಿಕ ಸುದೀಪ್‌ ಯಾವುದೇ ಸಿನಿಮಾ ಅನೌನ್ಸ್‌ ಮಾಡಿಲ್ಲ. ಕಬ್ಜ ಸಿನಿಮಾ ಮತ್ತು ಕನ್ನಡ ಚಲನಚಿತ್ರ ಲೀಗ್‌ (CCL) ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರ ಮುಂದಿನ ಚಿತ್ರ ಯಾವುದೆಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇದೀಗ ಶಿವಣ್ಣ ಮತ್ತು ಕಿಚ್ಚನ ಬಾಂಧ್ಯವ ನೋಡಿದ ಇಬ್ಬರು ಸ್ಟಾರ್‌ಗಳ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News