Kichcha Sudeep: "ಎಲೆಕ್ಷನ್‌ಗೆ ನಿಲ್ಲಲ್ಲ.. ಮಾಮ ಬೊಮ್ಮಾಯಿಗೆ ನನ್ನ ಬೆಂಬಲ"

Kichcha Sudeep Press confrence : ಕಿಚ್ಚ ಸುದೀಪ್ ಕರುನಾಡಿನ ಬಾದ್ ಶಾ.. BJP ಗೆ ಸೇರುತ್ತಾರೆ ಅಂತೆ.. ಅಲ್ಲಿಂದ ನಿಲ್ಲುತ್ತಾರೆ,ಇಲ್ಲಿಂದ ನಿಲ್ಲುತ್ತಾರೆ.. ಹಂಗಂತೆ - ಹಿಂಗಂತೆ ಅನ್ನೋ ಎಲ್ಲಾ ಸುದ್ದಿಗಳಿಗೆ ಕೊನೆಗೂ ತೆರೆ ಬಿದ್ದಿದೆ. ನಾನು ಎಲೆಕ್ಷನ್ ನಿಲ್ಲೋಲ್ಲ ಬದಲಾಗಿ ಸಿಎಂ ಗೆ ಬೆಂಬಲವಾಗಿ ನಿಲ್ಲುತ್ತೀನಿ ಅನ್ನೋದನ್ನ ಕೊನೆಗೂ ಸುದ್ದಿಗೋಷ್ಠಿಯಲ್ಲಿ ಹೇಳೋ ಮೂಲಕ ವಿವಾದಗಳಿಗೆ ತೆರೆ ಎಳೆದಿದ್ದಾರೆ ಕಿಚ್ಚ.  

Written by - YASHODHA POOJARI | Last Updated : Apr 5, 2023, 05:44 PM IST
  • ನಾನು ಎಲೆಕ್ಷನ್‌ಗೆ ನಿಲ್ಲಲ್ಲ
  • ಮಾಮ ಬೊಮ್ಮಾಯಿಗೆ ನನ್ನ ಬೆಂಬಲ
  • ನಟ ಕಿಚ್ಚ ಸುದೀಪ್‌ ಸ್ಪಷ್ಟನೆ
Kichcha Sudeep: "ಎಲೆಕ್ಷನ್‌ಗೆ ನಿಲ್ಲಲ್ಲ.. ಮಾಮ ಬೊಮ್ಮಾಯಿಗೆ ನನ್ನ ಬೆಂಬಲ" title=

Kichcha Sudeep Press confrence : ಕಿಚ್ಚ ಸುದೀಪ್ ನಾನು BJP  ಗೆ ಸೇರಲ್ಲ. ಬದಲಾಗಿ ಸಿಎಂಗೆ ಬೆಂಬಲವಾಗಿ ನಿಲ್ಲುತ್ತೀನಿ ಅನ್ನೋದನ್ನ ಇವತ್ತು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಕನ್ಫರ್ಮ್ ಮಾಡಿದ್ರು. ನನ್ನ ಲೈಫ್ ನಲ್ಲಿ ಒಳ್ಳೆಯ ಜಾಗದಲ್ಲಿ ಅವ್ರು ಇದ್ದಾರೆ ಅಂದರೆ, ಅವರು ಎಲ್ಲಿ ಹೇಳ್ತಾರೆ ಅಲ್ಲಿ ಕೆಲಸ ಮಾಡೋಕೆ ನಾನು ರೆಡಿ ಇದ್ದೇನೆ ಅಂತ ಬೊಮ್ಮಾಯಿ ಪರವಾಗಿ ಬ್ಯಾಟ್ ಬೀಸಿದ್ದಾರೆ.

ಇದನ್ನೂ ಓದಿ : Kichcha Sudeep : ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ - ನಟ ಸುದೀಪ್‌

ಬೇರೆ ಪಕ್ಷದ ನಾಯಕರು ಯಾರಾದರೂ ಹಿಂದೆ ನನ್ನ ಕಷ್ಟಕ್ಕೆ ಆಗಿದ್ರೆ, ಖಂಡಿತವಾಗಿಯೂ ಅವರ ಪರವಾಗಿ ನಾನು ಪ್ರಚಾರ ಮಾಡ್ತೀನಿ ಅಂತ ಸ್ಪಷ್ಟಪಡಿಸಿದ್ದಾರೆ. ಸುದೀಪ್ ಅವರ ನನ್ನ ಸಂಬಂಧವನ್ನು ದಯವಿಟ್ಟು ರೆಸ್ಪೆಕ್ಟ್ಟ ಮಾಡಿ ನಾನು ಅವರ ಜೊತೆ ಮಾತಾಡಿದ್ದೇನೆ. ನೀನು ನನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಆಗದೆ ಇದ್ದರೂ  ನನ್ನ ಪರವಾಗಿ ಕೆಲಸ ಮಾಡು ಎಂದಿದ್ದೇನೆ ಈ ಅರ್ಥ ಅಂದರೆ ನನ್ನ ಪಕ್ಷದ ಅಭ್ಯರ್ಥಿ ಗಳ ಪರ ಅವ್ರು ಪ್ರಚಾರ ಮಾಡ್ತಾರೆ ಅಂತಾ ಎಂದು ಬೊಮ್ಮಾಯಿ ಕೂಡ ಸುದ್ದಿಗೋಷ್ಠಿಯಲ್ಲಿ ಕಿಚ್ಚನ ನಡೆ ಏನು ಅನ್ನೋದನ್ನ ತಿಳಿಸಿದ್ರು.

ಇನ್ನೂ ಮಾತು ಮುಂದುವರೆಸಿದ ಕಿಚ್ಚ, ಪ್ರಕಾಶ್ ರಾಜ್ ಟ್ವೀಟ್ ವಿಚಾರಕ್ಕೆ ಸಂಬಂಧಪಟ್ಟಂತೆ, ಪ್ರಕಾಶ್ ರಾಜ್ ಮತ್ತು ನಾನು ರನ್ನ ಸಿನಿಮಾ ಮಾದಿದ್ದೇವೆ. ಅವರ ಜೊತೆ ಮುಂದೆ ಯಾವ ಸಿನಿಮಾ ಮಾಡಬೇಕು ಅಂತ ಕಾಯ್ತಿದ್ದೇನೆ.ಪ್ರಕಾಶ್ ರಾಜ್ ಟ್ವೀಟಿಗೆ ಸಿನಿಮಾ ಶೈಲಿಯಲ್ಲೇ ಉತ್ತರಿಸಿದ್ದಾರೆ ಸುದೀಪ್.ಬೇರೆ ಪಕ್ಷದಲ್ಲಿ ನನಗೆ ವಯಕ್ತಿಕವಾಗಿ ಸಹಾಯ ಮಾಡಿದವರ ಪರ ನಿಲ್ತೀನಿ.ನನ್ನ ಲೈಫಲ್ಲಿ ಯಾರೆಲ್ಲಾ ಇದ್ರು, ಸಹಾಯ ಮಾಡಿದ್ರು ಅಂತ ನನಗೆ ಮಾತ್ರ ಗೊತ್ತು.ಪಕ್ಷ ಅಂತ ಬರಲ್ಲ, ವ್ಯಕ್ತಿಗೆ ಮಾತ್ರ ಬಂದೆ.ಅಂಬಿ ಮಾಮ ಇದ್ದಾಗ ಅವರ ಪರ ನಿಂತೆ ಅನ್ನೋದನ್ನ ಕೂಡ ನೆನಪು ಮಾಡಿಕೊಂಡರು ಕಿಚ್ಚ ಸುದೀಪ್.

ಇದನ್ನೂ ಓದಿ : ಸುದೀಪ್‌ ಪ್ರಚಾರಕ್ಕಾಗಿ​ ಹಣ ತಗೊಂಡ್ರಾ? ಕಿಚ್ಚನ ಖಡಕ್‌ ಉತ್ತರ ಇದು..

ಮಾತು ಮುಂದುವರೆಸಿದ ಬೊಮ್ಮಾಯಿ ಸುದೀಪ್ ಅವರಿಗೆ ಧನ್ಯವಾದ ಅರ್ಪಿಸ್ತೇನೆ ಸುದೀಪ್ ಜನಪ್ರಿಯ ನಟ ಇದ್ದಾರೆ.ಅವರ ಕ್ಯಾಪೇನ್‌ಗೆ ತೀರ್ಮಾನ ಮಾಡ್ತೇವೆ.ಅವರಿಗೂ ಅನುಕೂಲ ಆಗಬೇಕು.ಅವರ ಫ್ಯಾನ್ಸ್ ಗಮನದಲ್ಲಿ ಇಟ್ಟುಕೊಂಡು ಪ್ರಚಾರ ಮಾಡ್ತೀವಿ.ಸುದೀಪ್ ಆಗಮನ ನಮಗೆ ದೊಡ್ಡ ಶಕ್ತಿ ಬಂದಿದೆ.ಸುದೀಪ್ ತಂದೆ ತಾಯಿ ಸಂಜೀವಣ್ಣ, ಸರೋವರಕ್ಕಗೆ ಧನ್ಯವಾದ ಹೇಳ್ತೀನಿ. ಕಿಚ್ಚನ  ಸಮಯ, ಗೌರವ ಎರಡೂ ಗಮನದಲ್ಲಿಟ್ಟುಕೊಂಡು ಪ್ರಚಾರ ನಿರ್ಧಾರ ಮಾಡ್ತೀವಿ.ಯುವಕರು ಬಹಳ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡ್ತಿದ್ದಾರೆ.ಸುದೀಪ್ ಅವರಿಗೆ ಧನ್ಯವಾದ ಅರ್ಪಿಸ್ತೇನೆ ಅಂತ ಹೇಳಿದ್ರು ಬೊಮ್ಮಾಯಿ ಸಾಹೇಬ್ರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News