BIGG BOSSನಲ್ಲಿ ಮೋಹನ್ ಲಾಲ್’ಗೆ ಅಗೌರವ! ಕಾರ್ಯಕ್ರಮ ಅರ್ಧಕ್ಕೇ ಬಿಟ್ಟು ಹೊರನಡೆದ ಖ್ಯಾತ ನಟ

Mohan Lal disrespected in BIGG BOSS: ಬಿಗ್ ಬಾಸ್ ಯಾಲಿಟಿ ಶೋ ಇತಿಹಾಸದಲ್ಲಿ ಮೊದಲ ಬಾರಿಗೆ ನಿರೂಪಕ ಮೋಹನ್ ಲಾಲ್ ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ಬಿಟ್ಟು ಹೊರನಡೆದಿದ್ದಾರೆ. ಸ್ಪರ್ಧಿ ಅಖಿಲ್ ಮಾರಾರ್ ಅವರು ಅಗೌರವ ತೋರಿದ್ದು, ಪರಿಣಾಮ ಅಸಮಾಧಾನಗೊಂಡ ನಟ, ಕಾರ್ಯಕ್ರಮವನ್ನು ಮಧ್ಯದಲ್ಲಿ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದರು

Written by - Bhavishya Shetty | Last Updated : Apr 11, 2023, 11:08 PM IST
    • ಭಾರತೀಯ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ಅವರಿಗೆ ಅವಮಾನವಾಗಿದೆ
    • ಈಸ್ಟರ್ ವಿಶೇಷ ಸಂಚಿಕೆಯಲ್ಲಿ ಸ್ಪರ್ಧಿಗಳು ‘ಎಗ್ ಕ್ಸಿಟಿಂಗ್’ ಎಂಬ ಗೇಮ್ ಆಡಿದ್ದರು.
    • ಆದರೆ ಈ ಆಟ ತಮಾಷೆಯಾಗಿ ಹೋಗಬೇಕಿತ್ತೇ ವಿನಃ, ಗಲಾಟೆಯಲ್ಲಿ ಕೊನೆಗೊಂಡಿತು
BIGG BOSSನಲ್ಲಿ ಮೋಹನ್ ಲಾಲ್’ಗೆ ಅಗೌರವ! ಕಾರ್ಯಕ್ರಮ ಅರ್ಧಕ್ಕೇ ಬಿಟ್ಟು ಹೊರನಡೆದ ಖ್ಯಾತ ನಟ title=
Mohanlal

Mohan Lal disrespected in BIGG BOSS: ಬಿಗ್ ಬಾಸ್ ಮಲಯಾಳಂ 5 ಶೋನಲ್ಲಿ  ಘಟನೆಯೊಂದು ನಡೆದಿದ್ದು, ಭಾರತೀಯ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ಅವರಿಗೆ ಅವಮಾನವಾಗಿದೆ. ಬಿಗ್ ಬಾಸ್ ಯಾಲಿಟಿ ಶೋ ಇತಿಹಾಸದಲ್ಲಿ ಮೊದಲ ಬಾರಿಗೆ ನಿರೂಪಕ ಮೋಹನ್ ಲಾಲ್ ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ಬಿಟ್ಟು ಹೊರನಡೆದಿದ್ದಾರೆ. ಸ್ಪರ್ಧಿ ಅಖಿಲ್ ಮಾರಾರ್ ಅವರು ಅಗೌರವ ತೋರಿದ್ದು, ಪರಿಣಾಮ ಅಸಮಾಧಾನಗೊಂಡ ನಟ, ಕಾರ್ಯಕ್ರಮವನ್ನು ಮಧ್ಯದಲ್ಲಿ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದರು.

ಇದನ್ನೂ ಓದಿ: IPLನಲ್ಲಿ ಒಂದೇ ಒಂದು ಪಂದ್ಯವನ್ನಾಡದೆ 2 ಬಾರಿ ಚಾಂಪಿಯನ್ ಆದ ಆಟಗಾರನೀತ! ಹೆಸರು ಕೇಳಿದ್ರೆ ಶಾಕ್ ಆಗ್ತೀರ

ಈಸ್ಟರ್ ವಿಶೇಷ ಸಂಚಿಕೆಯಲ್ಲಿ ಸ್ಪರ್ಧಿಗಳು ‘ಎಗ್ ಕ್ಸಿಟಿಂಗ್’ ಎಂಬ ಗೇಮ್ ಆಡಿದ್ದರು. ಆದರೆ ಈ ಆಟ ತಮಾಷೆಯಾಗಿ ಹೋಗಬೇಕಿತ್ತೇ ವಿನಃ, ಗಲಾಟೆಯಲ್ಲಿ ಕೊನೆಗೊಂಡಿತು. ಸ್ಪರ್ಧಿ ಅಖಿಲ್ ಮಾರಾರ್ ಟಾಸ್ಕ್ ಸಮಯದಲ್ಲಿ ತಾಳ್ಮೆ ಕಳೆದುಕೊಂಡು ಸಹಸ್ಪರ್ಧಿಗಳಾದ ಏಂಜಲಿನ್, ಸಾಗರ್ ಮತ್ತು ಜುನೈಜ್ ಅವರ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿದ್ದರು. ಈ ವಿಚಾರವನ್ನು ಮೋಹನ್ ಲಾಲ್ ಅವರ ಮುಂದೆ ಪ್ರಸ್ತಾಪಿಸಲಾಯಿತು.

ಆದರೆ ಅಖಿಲ್ ಏಂಜಲಿನ್ ಮತ್ತು ಜುನೈಜ್ ಬಳಿ ಕ್ಷಮೆ ಕೇಳಿದ್ದರೂ ಸಹ ಸಾಗರ್ ಜೊತೆ ಮಾತನಾಡಲು ಸಿದ್ಧವಿರಲಿಲ್ಲ. ಅದೇ ಸಂದರ್ಭದಲ್ಲಿ ಮೋಹನ್‌ಲಾಲ್ ಅವರು ಅಖಿಲ್‌’ಗೆ ಕ್ಯಾಪ್ಟನ್ ಬ್ಯಾಂಡ್ ಅನ್ನು ಸಾಗರ್‌’ಗೆ ಹಸ್ತಾಂತರಿಸಿ, ಅಖಿಲ್ ಬಳಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಆದರೆ, ಅಖಿಲ್ ಅದಕ್ಕೆ ಸಿದ್ಧನಿರಲಿಲ್ಲ. ತಾನು ಕ್ಷಮೆ ಕೇಳುವುದಿಲ್ಲ ಎಂದು ಹಠ ಹಿಡಿದು ಕ್ಯಾಪ್ಟನ್ ಬ್ಯಾಂಡ್ ಎಸೆದಿದ್ದಾರೆ.

ನಂತರ, ಬಿಗ್ ಬಾಸ್ ಇಬ್ಬರು ಸ್ಪರ್ಧಿಗಳನ್ನು ಕನ್ಫೆಷನ್ ರೂಂಗೆ ಕರೆದು ಸಮಸ್ಯೆಯ ಬಗ್ಗೆ ಚರ್ಚಿಸಿದರು. ಸಂವಾದದ ವೇಳೆ, ಅಖಿಲ್ ಮಾರಾರ್ ಅವರು ಸಾಗರ್ ಬಳಿ ಕ್ಷಮೆ ಕೇಳಲು ಸಿದ್ಧವಿಲ್ಲ ಎಂದು ಹೇಳಿದರು, ಮತ್ತೊಂದೆಡೆ ಸಾಗರ್, ಅಖಿಲ್ ನನ್ನಲ್ಲಿ ಕ್ಷಮೆಯಾಚಿಸಬೇಕು ಎಂದು ಹಠ ಹಿಡಿದರು. ಆದರೆ, ನಿರೂಪಕ ಮೋಹನ್ ಲಾಲ್ ಅವರ ಉಪಸ್ಥಿತಿಯಲ್ಲಿ ಸಾಗರ್ ಸಮಸ್ಯೆಯನ್ನು ಉಲ್ಬಣಗೊಳಿಸುವುದು ಸೂಕ್ತವಲ್ಲ ಎಂದು ಬಿಗ್ ಬಾಸ್ ಹೇಳಿದರು.

ಈ ಸಂದರ್ಭದಲ್ಲಿ ಅಸಮಾಧಾನಗೊಂಡ ನಟ, ನಿರೂಪಕ ಮೋಹನ್ ಲಾಲ್, “ಸಾಗರ್‌’ಗೆ ಕ್ಯಾಪ್ಟನ್ ಬ್ಯಾಂಡ್ ಕೊಡಲು ಹೇಳಿದೆ. ಆದರೆ ನೀವು ಅದನ್ನು ಎಸೆದಿದ್ದೀರಿ. ನನಗೆ ಇದು ಅಗೌರವ ಎಂದು ಭಾವಿಸಿದೆ. ನಾನು ನಿಮ್ಮೆಲ್ಲರೊಂದಿಗೆ ಈಸ್ಟರ್ ಆಚರಿಸಲು ಸಂತೋಷದಿಂದ ಇಲ್ಲಿಗೆ ಬಂದಿದ್ದೇನೆ. ನಿಮಗೆ ಗೊತ್ತಾ? ನಾನು ಜೈಸಲ್ಮೇರ್‌ನಿಂದ ಇಲ್ಲಿಗೆ ಪ್ರಯಾಣಿಸಲು 4 ರಿಂದ 5 ಗಂಟೆ ತೆಗೆದುಕೊಂಡೆ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಬರಲು ಗಂಟೆಗಟ್ಟಲೆ ಕಾದು ಕೊನೆಗೆ ಫ್ಲೈಟ್ ಸಿಕ್ಕಿತು. ಆದರೆ ಇಂದು ನನಗೆ ಅಗೌರವ ತಂದಂತಾಗಿದೆ. ನನಗೆ ಬೇಸರದ ಅನುಭವವಾಗಿ ಪರಿಣಮಿಸಿದೆ. ಹಾಗಾಗಿ, ನಾನು ಕಾರ್ಯಕ್ರಮವನ್ನು ಅರ್ಧಕ್ಕೆ ಮುಗಿಸುತ್ತಿದ್ದೇನೆ" ಹೇಳಿದರು.

ಇದನ್ನೂ ಓದಿ: ವಿಶ್ವಕಪ್ ಗೆದ್ದುಕೊಟ್ಟ 20 ವರ್ಷದ ಈ ಕ್ರಿಕೆಟಿಗ IPLಗೆ ಎಂಟ್ರಿ: ಈ ತಂಡ ಚಾಂಪಿಯನ್ ಆಗೋದು ಪಕ್ಕಾ!

ಗಮನಾರ್ಹವೆಂದರೆ, ಹಿರಿಯ ನಟ ಮೋಹನ್ ಲಾಲ್ ಅವರು ಮೊದಲ ಬಾರಿಗೆ ಇಷ್ಟೊಂದು ಕೋಪಗೊಂಡಂತೆ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬಿಗ್ ಬಾಸ್ ಸ್ಪರ್ಧಿ ಅಖಿಲ್ ಈ ಘಟನೆ ಸಂಬಂಧ ಕ್ಷಮೆಯಾಚಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News