Rhea Chakraborty ಜೊತೆಗಿನ ಚ್ಯಾಟ್ ಬಳಿಕ, ಇದೀಗ Jiah Khan-Mahesh Bhatt ವಿಡಿಯೋ ವೈರಲ್

ಇತ್ತೀಚೆಗೆ ರಿಯಾ ಚಕ್ರವರ್ತಿ ಮತ್ತು ಮಹೇಶ್ ಭಟ್ ಅವರ ವಾಟ್ಸಾಪ್ ಚಾಟ್ ವೈರಲ್ ಆದ ಬಳಿಕ, ಸ್ವತಃ ರಿಯಾ  ಸುಶಾಂತ್ ಅವರಿಂದ ಬೇರ್ಪಟ್ಟಿದ್ದಾರೆ ಎಂಬ ವರದಿಗಳು ಪ್ರಕಟಗೊಂಡಿದ್ದವು.

Last Updated : Aug 23, 2020, 12:15 PM IST
Rhea Chakraborty ಜೊತೆಗಿನ ಚ್ಯಾಟ್ ಬಳಿಕ, ಇದೀಗ Jiah Khan-Mahesh Bhatt ವಿಡಿಯೋ ವೈರಲ್  title=

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ ಕಳೆದ ಜೂನ್ 14ರಂದು ಮುಂಬೈನ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇದಕ್ಕೂ ಮೊದಲು ಜೂನ್ 8 ರಂದು ರಿಯಾ ಸುಶಾಂತ್ ಅವರ ಮನೆಯನ್ನು ತೊರೆದಿದ್ದಾರೆ. ಸುಶಾಂತ್ ಹೇಳಿಕೆಯ ಮೇರೆಗೆ ರಿಯಾ ಹೀಗೆ ಮಾಡಿದ್ದಾರೆ ಎಂದು ಇದುವರೆಗೆ ಹೇಳಲಾಗುತ್ತಿತ್ತು ಹಾಗೂ ಈ ಸಂಬಂಧದಿಂದ ಅವರು ಸುಖವಾಗಿರಲಿಲ್ಲ ಎನ್ನಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಬಹಿರಂಗವಾದ ರಿಯಾ ಚಕ್ರವರ್ತಿ ಹಾಗೂ ಮಹೇಶ್ ಭಟ್ ಅವರ ವಾಟ್ಸ್ ಆಪ್ ಚಾಟ್ ಬಳಿಕ ರಿಯಾ ಖುದ್ದಾಗಿ ಸುಶಾಂತ್ ಅವರಿಂದ ಬೇರ್ಪಟ್ಟಿದ್ದಾರೆ ಎಂಬ ವರದಿಗಳು ಬಹಿರಂಗಗೊಂಡಿವೆ.

 
 
 
 

 
 
 
 
 
 
 
 
 

You're view on this? #follow @bollywoodmedialove #ranbiralia #neetukapoor #aliabhatt #katrinakaif #riddhimakapoorsahni #anushkasharma #deepikapadukone #shraddhakapoor #ranbirkapoor #salmankhan #malaikaarorakhan #sunnyleone #amirkhan #shahrukhkhan #varundhawan #parineetichopra #ranveersingh #dishapatani #akshaykumar #urvashirautela #viratkohli #jacquelinefernandez #kapilsharma #priyankachopra #shahidkapoor

A post shared by Bollywood media love ❤ (@bollywoodmedialove) on

ಆದರೆ, ಇದೀಗ ಮಹೇಶ್ ಭಟ್ ಕುರಿತಾದ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಲಾರಂಭಿಸಿದೆ. ಇದರಲ್ಲಿ ಅವರು ದಿವಂಗತ ಬಾಲಿವುಡ್ ನಟಿ ಜಿಯಾ ಖಾನ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಖ್ಯಾತ ಬಾಲಿವುಡ್ ನಟಿ ಜಿಯಾ ಖಾನ್ ಜೂನ್ 3, 2013ರಲ್ಲಿ ಮುಂಬೈನ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದರು. ಮಹೇಶ್ ಭಟ್ ಈ ವೈರಲ್ ವಿಡಿಯೋದಲ್ಲಿ ಜಿಯಾ ಖಾನ್ ಜೊತೆಗೆ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಇದರಲಿ ಮಹೇಶ ಭಟ್ ಜಿಯಾ ಅವರನ್ನು ತಬ್ಬಿಕೊಳ್ಳುತ್ತಿರುವುದು, ಕೈಹಿಡಿಯುತ್ತಿರುವುದು ಕಂಡು ಬರುತ್ತಿದೆ. ಈ ವಿಡಿಯೋ ಅನ್ನು ವಿಕ್ಷೀಸಿರುವ ನೆಟ್ಟಿಗರು ಮಹೇಶ್ ಭಟ್ ಅವರನ್ನು ಭಾರಿ ಟ್ರೊಲ್ ಮಾಡುತ್ತಿದ್ದಾರೆ. 

ಸುಶಾಂತ್ ಆತ್ಮಹತ್ಯೆ ಪ್ರಕರಣವು ಸಿಬಿಐಗೆ ಹೋಗುವ ಕೆಲವೇ ದಿನಗಳ ಮೊದಲು, ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದ ಜಿಯಾಖಾ ತಾಯಿ ರಬಿಯಾ,  "ಜಿಯಾ ಖಾನ್ ಮತ್ತು ಸುಶಾಂತ್ ಅವರ ನಾರ್ಸಿಸಿಸ್ಟಿಕ್ ಕ್ರಿಮಿನಲ್ ಪಾರ್ಟ್ನರ್ ಗಳು ಪ್ರಬಲ ಬಾಲಿವುಡ್ ಮಾಫಿಯಾ ಮತ್ತು ರಾಜಕಾರಣಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ರಾಜಕೀಯ ಒತ್ತಡದಿಂದಾಗಿ ಪೊಲೀಸರಿಗೆ ಸತ್ಯವನ್ನು ಬಹಿರಂಗಪಡಿಸಲು ಸಾಧ್ಯವಾಗುತ್ತಿಲ್ಲ. ಅವರು ತಮ್ಮ ಸಮಯವನ್ನು ಪುರಾವೆಗಳನ್ನು ಅಳಿಸಿಹಾಕುವಲ್ಲಿ ಹಾಗೂ ಈ ಹಿಂಸಾತ್ಮಕ ಸಾವನ್ನು ಆತ್ಮಹತ್ಯೆ ಎಂದು ಸಾಬೀತುಪಡಿಸುವಲ್ಲಿ ತೊಡಗಿದ್ದಾರೆ. ಅವರು ತಮ್ಮ ಸುಳ್ಳು  ಕಥೆಗೆ ಬೆಂಬಲ ಪಡೆಯಲು ಅವರು ಬಾಲಿವುಡ್ ಮಾಫಿಯಾ ಹಾಗೂ ಸಿಂಡಿಕೇಟ್ ಮೀಡಿಯಾ ಸಹಾಯ ಪಡೆಯುತ್ತಾರೆ. ಡಿಪ್ರೆಶನ್ ಕಥೆಯಾ ಪ್ರಚಾರಕ್ಕಾಗಿ ಈ ಜನರು ಮಹೇಶ್ ಭಟ್ ಅವರನ್ನು ಓರ್ವ ನಿರೂಪಕನಾಗಿ ಬಳಕೆ ಮಾಡುತ್ತಾರೆ.

Trending News