Renuka Swamy Murder Case: ಇನ್ಮೆಲೆ ನಾನು ಹೇಗೆ ಮುಖ ತೋರಿಸಲಿ ಎನ್ನುತ್ತಿರುವ ನಟ ದರ್ಶನ್!

Renukaswamy Murder Case: ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿರುವ ದರ್ಶನ್‌, ʼಇಂಡಸ್ಟ್ರಿಯಲ್ಲಿ ಇನ್ಮುಂದೆ ಎಲ್ಲರನ್ನೂ ಹೇಗೆ ಫೇಸ್ ಮಾಡಲಿ? ಅಭಿಮಾನಿಗಳನ್ನು ಹೇಗೆ ಎದುರಿಸಲಿ? ನನ್ನಿಂದ ಇಷ್ಟು ಜನರ ಜೀವನ ಹಾಳಾಯ್ತು. ಒಬ್ಬ ಅಭಿಮಾನಿಯ ಸಾವಿಗೆ ನಾನೇ ಕಾರಣನಾದೆ ಅಂತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರಂತೆ.

Written by - Puttaraj K Alur | Last Updated : Jun 16, 2024, 02:53 PM IST
  • ಕಂಬಿ ಹಿಂದೆ ಪಶ್ಚಾತ್ತಾಪ ಪಡುತ್ತಿದೆ ನಟ ದರ್ಶನ್ ಅಂಡ್‌ ಗ್ಯಾಂಗ್‌
  • ನೆಗೆಟಿವ್ ಕಾಮೆಂಟ್ ಕೇಳಿಬರುತ್ತಿರುವುದರಿಂದ ಕುಗ್ಗಿಹೋಗಿರುವ ದರ್ಶನ್
  • ಇಂಡಸ್ಟ್ರಿಯಲ್ಲಿ ಎಲ್ಲರನ್ನೂ ಹೇಗೆ ಫೇಸ್ ಮಾಡಲಿ ಎನ್ನುತ್ತಿರುವ ʼಡಿʼ‌ ಬಾಸ್
Renuka Swamy Murder Case: ಇನ್ಮೆಲೆ ನಾನು ಹೇಗೆ ಮುಖ ತೋರಿಸಲಿ ಎನ್ನುತ್ತಿರುವ ನಟ ದರ್ಶನ್! title=
ʼಡಿʼ‌ ಬಾಸ್ ಪಶ್ಚಾತ್ತಾಪ!

Renuka Swamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಆತನ ಗೆಳತಿ ಪವಿತ್ರ ಗೌಡ ಸೇರಿದಂತೆ ಇದುವರೆಗೆ ೧೮ ಜನರನ್ನು ಬಂಧಿಸಲಾಗಿದೆ. ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಹಲವಾರು ಪ್ರಬಲ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಆದರೆ ನಟ ದರ್ಶನ್ ಅಂಡ್‌ ಗ್ಯಾಂಗ್‌ ಇದೀಗ ಕಂಬಿ ಹಿಂದೆ ಪಶ್ಚಾತ್ತಾಪ ಪಡುತ್ತಿದೆ ಅಂತಾ ತಿಳಿದುಬಂದಿದೆ.  

ತಮ್ಮಿಂದಾಗಿಯೇ ಅಭಿಮಾನಿಯ ಸಾವಾಯಿತಲ್ಲ ಅಂತಾ ಪೊಲೀಸರ ಮುಂದೆಯೇ ನಟ ದರ್ಶನ್ ಪಶ್ಚಾತ್ತಾಪ ಪಡುತ್ತಿದ್ದಾರಂತೆ. ಎಲ್ಲಾ ಕಡೆ ನೆಗೆಟಿವ್ ಕಾಮೆಂಟ್ ಕೇಳಿಬರುತ್ತಿರುವುದರಿಂದ ದರ್ಶನ್ ಕುಗ್ಗಿಹೋಗಿದ್ದಾರೆ. ಪ್ರಕರಣದ A7 ಆರೋಪಿ ಅನುಕುಮಾರ್ ಅಲಿಯಾಸ್ ಅನು ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ತಿಳಿದು ದರ್ಶನ್ ಅಂಡ್‌ ಗ್ಯಾಂಗ್‌ ಧೃತಿಗೆಟ್ಟಿದೆಯಂತೆ.

ಇದನ್ನೂ ಓದಿ: ದರ್ಶನ್ ಬಗ್ಗೆ ಸಹೋದರ ದಿನಕರ್ ತೂಗುದೀಪ ಮೊದಲ ರಿಯಾಕ್ಷನ್

ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿರುವ ದರ್ಶನ್‌, ʼಇಂಡಸ್ಟ್ರಿಯಲ್ಲಿ ಇನ್ಮುಂದೆ ಎಲ್ಲರನ್ನೂ ಹೇಗೆ ಫೇಸ್ ಮಾಡಲಿ? ಅಭಿಮಾನಿಗಳನ್ನು ಹೇಗೆ ಎದುರಿಸಲಿ? ನನ್ನಿಂದ ಇಷ್ಟು ಜನರ ಜೀವನ ಹಾಳಾಯ್ತು. ಒಬ್ಬ ಅಭಿಮಾನಿಯ ಸಾವಿಗೆ ನಾನೇ ಕಾರಣನಾದೆ ಅಂತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರಂತೆ.

ನಟ ದರ್ಶನ್ ಜೊತೆಗೆ ಅರೆಸ್ಟ್ ಆಗಿರುವ ಆರೋಪಿಗಳು ಸಹ ಬೇಸರ ವ್ಯಕ್ತಪಡಿಸಿದ್ದಾರಂತೆ. ಬಾಸ್ ಬಾಸ್ ಅಂತಾ ಅವರಿಗಾಗಿ ಇಂತಹ ಕೆಲಸ ಮಾಡಿ ನಮ್ಮ ಜೀವನವೇ ಹಾಳಾಯ್ತು, ನಮ್ಮ ಕುಟುಂಬದವರೂ ನಮ್ಮನ್ನು ನಂಬುತ್ತಿಲ್ಲ, ಸಹಾಯಕ್ಕೆ ಬರುತ್ತಿಲ್ಲವೆಂದು ಅಳಲು ತೋಡಿಕೊಳ್ಳುತ್ತಿದ್ದಾರಂತೆ. ಇನ್ನು ಪ್ರಕರಣದಲ್ಲಿ A೧ ಆರೋಪಿಯಾಗಿರುವ ಪವಿತ್ರಾಗೌಡ ಸಹ ಪಶ್ಚಾತ್ತಾಪ ಪಡುತ್ತಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ರೇಣುಕಸ್ವಾಮಿ ಏನ್‌ ಸತ್ಯ ಹರಿಶ್ಚದ್ರನಾ..? ಬುದ್ದಿ ಕಲಿಸಲು ಹೊಡೆದಿರಬೇಕು, ಅವನು ಸತ್ತ : ನಟಿ ಕಸ್ತೂರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News