Puneetha Parva: ‘ಗಂಧದ ಗುಡಿ’ ಪಿಕ್ಚರ್ ಕೆಜಿಎಫ್ ರೆಕಾರ್ಡ್ ಧೂಳ್ ಮಾಡ್ಬೇಕು- ಯಶ್

ಅಪ್ಪು ಸರ್ ಕನಸಿನ ಪಿಕ್ಚರ್ ‘ಗಂಧದಗುಡಿ’ ಕೆಜಿಎಫ್‍ನ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಬೇಕು ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದರು.

Written by - YASHODHA POOJARI | Edited by - Puttaraj K Alur | Last Updated : Oct 22, 2022, 11:40 AM IST
  • ಗಂಧದ ಗುಡಿಯ ‘ಪುನೀತ ಪರ್ವ’ದಲ್ಲಿ ಅಪ್ಪು ನೆನೆದ ರಾಕಿಂಗ್ ಸ್ಟಾರ್ ಯಶ್
  • ನನ್ನ ಜೀವನದಲ್ಲಿಯೂ ಅಪ್ಪು ಸರ್ ಘಟನೆ ದೊಡ್ಡ ಪರಿಣಾಮ ಬೀರಿದೆ
  • ‘ಗಂಧದ ಗುಡಿ’ ಕೆಜಿಫ್ ಸಿನಿಮಾದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಲಿ ಎಂದ ಯಶ್
Puneetha Parva: ‘ಗಂಧದ ಗುಡಿ’ ಪಿಕ್ಚರ್ ಕೆಜಿಎಫ್ ರೆಕಾರ್ಡ್ ಧೂಳ್ ಮಾಡ್ಬೇಕು- ಯಶ್ title=
'ಅಪ್ಪು' ನೆನೆದ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ‘ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕ್ರೇಜಿ ಸ್ಟಾರ್ ರವಿಚಂದ್ರನ್, 'ಇದು ಸಂಭ್ರಮ ಅಲ್ಲ, ಸಂಗಮ’ ಅಂತಾ ಹೇಳಿದರು. ‘ನಾವು ಸಂಪಾದನೆ ಮಾಡಬೇಕಾಗಿದ್ದು ಇದೇ ನೋಡಿ’ ಅಂತಾ ಜನಸಾಗರ ನೋಡಿ ರವಿಮಾಮ ಹೇಳಿದರು. ‘ಅಪ್ಪು’ ಅಪ್ಪುಗೆಯಿಂದ ನಾನು ಅದೃಷ್ಟವಂತನಾದೆ. ಅಣ್ಣಾವ್ರ ಅಪ್ಪುಗೆಯಿಂದ ನಟನಾದೆ, ವೀರಸ್ವಾಮಿಯವರ ಅಪ್ಪುಗೆಯಿಂದ ಡೈರೆಕ್ಟರ್ ಆದೆ. ಪುನೀತ್ ರಾಜ್‍ಕುಮಾರ್ ಬದುಕಿದ ರೀತಿ ನೋಡಿ ನಾವು ಬದುಕೋಣ ಅಂತಾ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಳಿದರು.

‘ಅಪ್ಪು’ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ ಮಾತುಗಳನ್ನು ಕೇಳಿ ಪುನೀತ್ ಪುತ್ರಿಯಿಂದ ಹಿಡಿದು ಪ್ರತಿಯೊಬ್ಬರೂ ಭಾವುಕರಾದ್ರು. ‘1 ವರ್ಷದ ಕೆಳಗೆ ಇದೇ ದಿನ ಇರಬಹುದು. ನಾನು. ಶಿವಣ್ಣ ಮತ್ತು ಅಪ್ಪು ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದೆವು. ಅದಿನ್ನೂ ನನ್ನ ತಲೆಯಲ್ಲಿಯೇ ಇದೆ. ಎಷ್ಟೋ ದಿನ ಆಗಿತ್ತು ನಾನು ಅವರು ಮಾತಾಡಿ, ಅವತ್ತು ಸಿಕ್ಕಿದ್ವಿ. ತುಂಬಾ ಮಾತಾಡಿದ್ವಿ. ಅವತ್ತು ಅವರು ಮಾತಾಡುತ್ತಿದ್ದ ವಿಷಯಗಳು, ಅವತ್ತು ಅವರಲ್ಲಿದ್ದ ಹುಮ್ಮಸ್ಸು-ಉತ್ಸಾಹ. ಅವರನ್ನು ನೋಡಿದಾಗಲೆಲ್ಲಾ ಒಂದು ನಮಗೆ ಹುಮ್ಮಸ್ಸು ಬರುತ್ತೆ ಅಂತಾ ಹೇಳಿದರು.

ಇದನ್ನೂ ಓದಿ: Puneeth Parva: ‘ಪುನೀತ ಪರ್ವ’ದಲ್ಲಿ ಅಪ್ಪು ಡೈಲಾಗ್ ಹೊಡೆದ ನಟ ದೃವ ಸರ್ಜಾ ಹೇಳಿದ್ದೇನು?

‘2002ರಲ್ಲಿ ಬ್ಯಾಕ್ ಫ್ಲಿಪ್‌ ಹೊಡ್ಕೊಂಡು, ಅವರಿವರನ್ನು ಗೆದ್ದ ಮಾತ್ರಕ್ಕೆ ನೀನು ಅಜೇಯನಲ್ಲ. ತಾಕತ್ತಿದ್ದರೆ ನನ್ನ ಮೇಲೆ ಗೆಲ್ಲಲೇ ಅಂತಾ ಅಪ್ಪು ಎಂಟ್ರಿಯಾಗಿದ್ದರು. ಅವರು ಮಾಡುತ್ತಿದ್ದ ಫೈಟು, ಅವರು ಮಾಡುತ್ತಿದ್ದ ಡ್ಯಾನ್ಸ್. ಅದನ್ನು ನೋಡಿ ಪ್ರೇರಣೆ ಹೊಂದಿ, ಈತರ ಮಾಡಬೇಕು ಅಂತಾ ಎಷ್ಟೋ ಜನ ಈ ಫೀಲ್ಡ್‌ಗೆ ಬಂದಿದ್ದಾರೆ. ನನಗೆ ಗೊತ್ತಿಲ್ಲ ಅವರ ಬಗ್ಗೆ ಮಾತಾಡಬೇಕಾದರೆ ಮಾತುಗಳೇ ಬರುವುದಿಲ್ಲ. ಲಾಸ್ಟ್ ಟೈಮ್ ಕೂಡ ಅಷ್ಟೇ ಒಂದು ಕಾರ್ಯಕ್ರಮದಲ್ಲಿ ನನಗೆ ಏನು ಮಾತನಾಡಬೇಕು ಅಂತಾ ಗೊತ್ತಾಗ್ಲಿಲ್ಲ. ಜೀವನದಲ್ಲಿ ಕೆಲವರಿಗೆ ಅನುಭವಗಳು ಆಗುತ್ತೆ ಅಂತಾರಲ್ಲ, ನನ್ನ ಜೀವನದಲ್ಲಿಯೂ ಅಪ್ಪು ಸರ್ ಘಟನೆ ಇದೆಯಲ್ಲ ಅದು ದೊಡ್ಡ ಪರಿಣಾಮ ಬೀರಿದೆ. ಜೀವನ ಅಂದರೆ ಏನು ಅನ್ನೋ ಪ್ರಶ್ನೆ ಹುಟ್ಟಿಬಿಡ್ತು ನಮಗೆ’ ಅಂತಾ ಯಶ್ ಸ್ಮರಿಸಿದರು.

‘ಒಂದು ಕಡೆ ಏನೋ ಸಾಧಿಸಬೇಕು ಅಂತಾ. ಓಡುತ್ತಿರುತ್ತೇವೆ. ಏನೋ ಮಾಡಬೇಕು, ಈ ಗುರಿ, ಈ ಸಾಧನೆ, ಅದರ ಮೇಲೆ ಬದುಕು. ಬದುಕಿಗೆ ಹೋಪ್ ಇಲ್ಲಾ ಅಂದರೆ ಬದುಕೋಕೆ ಆಗಲ್ಲ ಅಂತಾರೆ. ಏನ್ ಹೋಪ್ ಇಟ್ಕೊಂಡು ಬದುಕು 2 ಸೆಕೆಂಡ್‌ನಲ್ಲಿ ಇಲ್ಲಾ ಅಂದಾಗ, ಅದನ್ನು ಹೇಗೆ ಅರಗಿಸಿಕೊಳ್ಳಬೇಕು ಅನ್ನೋದು ಗೊತ್ತಾಗಲ್ಲ. ಇಡೀ ಕರುನಾಡಿನ ಜನತೆಗೆ ಅಪ್ಪು ಕರ್ನಾಟಕದ ಮಗ ಅನ್ನೋ ಫೀಲಿಂಗ್ ಇದೆ. ಇದು ಅಪ್ಪು ಅವರಿಗೆ ಮಾತ್ರ ಸಿಗೋದು ಅಂತಾ ಯಶ್ ಹೇಳಿದರು.

ಇದನ್ನೂ ಓದಿ: Puneeth Parva: ‘ಅಪ್ಪು’ ಹೋಗಿ 1 ವರ್ಷ ಆಯ್ತು.. ನೋವಿನಲ್ಲೇ ದಿನ ಕಳೆದ್ವಿ ಎಂದು ಶಿವಣ್ಣ ಭಾವುಕ

ಅಪ್ಪು ಸರ್ ಕನಸಿನ ಪಿಕ್ಚರ್ ‘ಗಂಧದಗುಡಿ’ ಕೆಜಿಎಫ್‍ನ ಎಲ್ಲಾ ದಾಖಲೆಗಳನ್ನು ಪುಡಿ ಪುಡಿ ಮಾಡಬೇಕು. ಪ್ರತಿಯೊಂದು ಮನೆಯ ಸದಸ್ಯರು ‘ಗಂಧದಗುಡಿ’ಯನ್ನು ಕಣ್ತುಂಬಿಕೊಳ್ಳಬೇಕು. ಅಪ್ಪು ನಡೆದ ಹಾದಿಯಲ್ಲೇ ನಾವು ನಡೀಬೇಕು ಅಂತಾ ಯಶ್ ಇದೇ ವೇಳೆ ತಿಳಿಸಿದರು.

ಪುನೀತ ಪರ್ವ’ ಕಾರ್ಯಕ್ರಮಕ್ಕೆ 500ಕ್ಕೂ ವಿವಿಐಪಿಗಳು ಹಾಗೂ 5 ಸಾವಿರಕ್ಕೂ ಹೆಚ್ಚು ವಿಐಪಿಗಳಿಗೆ ಅಹ್ವಾನ ನೀಡಲಾಗಿತ್ತು. ಅಹ್ವಾನ ಸ್ವೀಕರಿಸಿದ್ದ ಬಹುತೇಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇನ್ನೂ ಬೆಂಗಳೂರು ಸೇರಿದಂತೆ ದೂರದ ಊರು ಹಾಗೂ ಜಿಲ್ಲೆಗಳಿಂದಲೂ ವಾಹನಗಳನ್ನು ಮಾಡಿಕೊಂಡು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು. ಸುಮಾರು 25 ಸಾವಿರ ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ನೆಚ್ಚಿನ ನಟನ ಕೊನೆಯ ಚಿತ್ರದ ಕಾರ್ಯಕ್ರಮವನ್ನು ಕಣ್ಣು ತುಂಬಿಕೊಂಡರು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News