ದರ್ಶನ್ ಮುಂದೆ ಬಿಲ್ಡಪ್..! ಮನೆಗೆ ಹೋಗು ಅಂದ್ರೂ ಬಾಸ್‌.. ಅಂತ ಹೋದವ ಕಂಬಿ ಹಿಂದೆ

Darshan case update : ಸುಮ್ಮನೆ ಇರಲಾದರೇ ಇರುವೆ ಬಿಟ್ಟುಕೊಂಡ್ರಂತೆ ಎಂಬ ಮಾತಿಗೆ ರೇಣುಕಾಸ್ವಾಮಿ ಕೇಸಲ್ಲಿ ಅಂದರ್ ಆಗಿರುವ ಆರೋಪಿಯ ಪ್ರದೋಷ್ ಪರಿಸ್ಥಿತಿ ಆಗಿದೆ. ಅರೇ ಇದೇನೆಪ್ಪಾ ಹೀಗ್ ಹೇಳ್ತಿದಾರೆ ಅಂತೀರಾ.. ಹಾಗಾದ್ರೆ ಈ ಸ್ಟೋರಿ ನೋಡಿ.

Written by - Krishna N K | Last Updated : Jul 21, 2024, 06:48 PM IST
    • ಸುಮ್ಮನೆ ಇರಲಾದರೇ ಇರುವೆ ಬಿಟ್ಟುಕೊಂಡ್ರಂತೆ
    • ದರ್ಶನ್ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊಲೆ ಕೇಸಲ್ಲಿ ಅಂದರ್
    • ನಾನು ನಿಮ‌್ಮ ಕಾರಲ್ಲೆ ಬರ್ತಿನಿ ಅಂತ ಸೀದಾ ದರ್ಶನ್ ಜೊತೆಗೆ ಹೋಗಿದ್ದ‌.
ದರ್ಶನ್ ಮುಂದೆ ಬಿಲ್ಡಪ್..! ಮನೆಗೆ ಹೋಗು ಅಂದ್ರೂ ಬಾಸ್‌.. ಅಂತ ಹೋದವ ಕಂಬಿ ಹಿಂದೆ title=
Darshan case

Renukaswamy murder case : ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ವೇಳೆ ಒಬ್ಬಬ್ಬ ಆರೋಪಿಯ ಅಸಲಿಯತ್ತು ಬಯಲಾಗುತ್ತಿದೆ. ಸದ್ಯ ನಾವು ಈಗ ಹೇಳ ಹೊರಟಿರುವುದು ದರ್ಶನ್ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊಲೆ ಕೇಸಲ್ಲಿ ಅಂದರ್ ಆದವನ ಸ್ಟೋರಿ. ಹೌದು ಪ್ರದೋಷ್ ಲಾಕ್ ಆಗಿರೋದು ಪಕ್ಕಾ ದರ್ಶನ್ ಗೆ ಬಿಲ್ಡಪ್ ಕೊಡಲು ಹೋಗಿ. ಪ್ರದೋಷ್ ಬಾಸ್ ಬಾಸ್ ಅನ್ಕೊಂಡು ಕೊಲೆ ಕೇಸಲ್ಲಿ ಫಿಟ್ ಆಗಿದ್ದಾನಂತೆ.

ರೇಣುಕಾಸ್ವಾಮಿ ಕೊಲೆ ಮೊದಲು ಸ್ಟೋನಿ ಬ್ರೂಕ್ ಪಬ್ ನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ಪ್ರದೋಷ್ ಭಾಗಿಯಾಗಿದ್ದ. ಪಾರ್ಟಿ ಮುಗಿಸಿಕೊಂಡು ಸುಮ್ನೆ ಚಿಕ್ಕಣ್ಣನ‌ ರೀತಿ ಮನೆಗೆ ಹೋಗಿದ್ರೆ ಇವತ್ತು ಆರಾಮಾಗಿ ಮನೆಯಲ್ಲಿರ್ತಿದ್ದ. ಆದ್ರೆ ದರ್ಶನ್  ಪಟ್ಟಣಗೆರೆ ಶೆಡ್ ಗೆ ಹೋಗುವ ಮುನ್ನ ಬಾಸ್ ನಾನು ನಿಮ‌್ಮ ಕಾರಲ್ಲೆ ಬರ್ತಿನಿ ಅಂತ ಸೀದಾ ದರ್ಶನ್ ಜೊತೆಗೆ ಹೋಗಿದ್ದ‌.

ಇದನ್ನೂ ಓದಿ:ನಟನೆ ಏನ್‌ ಬೇಡ ಜಸ್ಟ್‌ ತಮನ್ನಾ ಹಾಗೆ ಮಾಡಿದ್ರೆ ಸಾಕು ಸಿನಿಮಾ ಸೂಪರ್ ಹಿಟ್..! ನಿರ್ದೇಶಕನ ಶಾಕಿಂಗ್ ಹೇಳಿಕೆ

ಇದೇ ಚಿತ್ರದುರ್ಗದದಿಂದ ರೇಣುಕಾಸ್ವಾಮಿ ಕರ್ಕೊಂಡು ಬಂದಿರೋದಾಗಿ ದರ್ಶನ್ ಗೆ ಕರೆ ಬಂದಿತ್ತು. ಈ ವೇಳೆ ಕರೆಯಲ್ಲಿ ಮಾತನಾಡಿ ತಕ್ಷಣ ಪಾರ್ಟಿಯಿಂದ ಹೊರಟಿದ್ರು. ಈ ವೇಳೆ ಪ್ರದೋಷ್  ಮನೆಗೆ ಹೋಗಲು ರೆಡಿಯಾಗಿದ್ದವನು ಬಾಸ್ ನಾನು ನಿಮ್ಮ ಜೊತೆಗೆ ಬರ್ತಿನಿ ಅಂತ ದರ್ಶನ್ ಜೊತೆಗೆ ಹೋಗಿದ್ದ. 

ಇದಾದ ಮೇಲೆ ರೇಣುಕಾಸ್ವಾಮಿ ಮೇಲೆ ಹಲ್ಲೆ,ಕೊಲೆ ಸಾಕ್ಷಿ ನಾಶ ಎಲ್ಲವೂ ಆಯ್ತು ಈ ಸಾಕ್ಷ್ಯ ನಾಶ ಹಾಗೂ ಸರೆಂಡರ್ ಆಗೋಕೆ ಹುಡುಗರನ್ನ ಅರೇಂಜ್ ಮಾಡಿದ್ದು ಇದೇ ಪ್ರದೋಷ್. ಆದರೆ ಡಿ ಗ್ಯಾಂಗ್ ಪ್ಲಾನ್ ಎಲ್ಲಾ ಉಲ್ಟಾ ಆಗಿತ್ತು. ಸರೆಂಡರ್ ಆದವರನ್ನು ತಮ್ಮದೇ ಸ್ಟೈಲಲ್ಲಿ ಪೊಲೀಸರು ಬೆಂಡೆತ್ತಿದ್ದಾಗ ಅವರ ಮುಂದೆ ನಿಜ ಕಕ್ಕಿದ್ರು.

ಇದನ್ನೂ ಓದಿ:ಬಿಗ್ ಬಾಸ್ ಹೊಸ ಲೋಗೋ ಮತ್ತು ಪ್ರೋಮೋ ಬಿಡುಗಡೆ..! ಅಸಲಿ ಆಟ ಈಗ ಶುರು.. 

ಒಟ್ಟಿನಲ್ಲಿ ಪಾರ್ಟಿ ಮುಗಿಸಿ ಮನೆಗೆ ಹೋಗಿದೋ ಬಿಟ್ಟು ಬಾಸ್ ಬಾಸ್ ಅಂತ ಬಿಲ್ಡಪ್ ಕೊಟ್ಟು ಕೊಲೆ ಸಾಕ್ಷ ನಾಶಪಡಿಸಲು ಪ್ರಯತ್ನಿಸಿ ದರ್ಶನ್ ಜೊತೆ ಪ್ರದೋಷ್ ಜೈಲು ಸೇರಿದ್ದು, ದುರಂತವೇ ಸರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News