ಶ್ರೀ ರಾಮನ ಜಪ ಮಾಡಿಯೆಂದ ಗಾಯಕಿ ಚೈತ್ರ: ಟೀಕೆಗೆ ಗುರಿಯಾದ ಕೇರಳದ ನೈಟಿಂಗೇಲ್!

Indian Singer K.S.Chithra: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಇದೇ ಜನವರಿ 22 ರಂದು ನಡೆಯಲಿರುವ ಹಿನ್ನೆಲೆ ರಾಷ್ಟ್ರ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಹಿರಿಯ ಗಾಯಕಿ ಚಿತ್ರಾ ಆ ದಿನ ಶ್ರೀರಾಮ ಜಪ ಮಾಡುವಂತೆ ವಿಡಿಯೋ ಮಾಡಿದಕ್ಕೆ ಟೀಕೆಗೆ ಗುರಿಯಾಗಿದ್ದಾರೆ.

Written by - Zee Kannada News Desk | Last Updated : Jan 17, 2024, 09:05 AM IST
  • ರಾಷ್ಟ್ರ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಹಿರಿಯ ಗಾಯಕಿ ಚಿತ್ರಾ ಎರಡು ದಿನಗಳ ಹಿಂದೆ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಶ್ರೀರಾಮ ಜಪ ಮಾಡುವಂತೆ ವಿಡಿಯೋ ಮಾಡಿದ್ದರು.
  • ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಕಿಡಿಕಾರುತ್ತಿದ್ದಾರೆ.
  • ಗಾಯಕಿ ಕೆ ಎಸ್‌ ಚಿತ್ರಾ ಕೇರಳದ ನೈಟಿಂಗೇಲ್ ಅಂತಲೇ ಜನಪ್ರಿಯರಾಗಿರುವ ಚಿತ್ರಾ ಸಾವಿರಾರು ಹಾಡುಗಳು ಧ್ವನಿ ನೀಡಿದ್ದು, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಾಡಿ ಮೆಚ್ಚುಗೆ ಗಳಿಸಿದ್ದಾರೆ
ಶ್ರೀ ರಾಮನ ಜಪ ಮಾಡಿಯೆಂದ ಗಾಯಕಿ ಚೈತ್ರ: ಟೀಕೆಗೆ ಗುರಿಯಾದ ಕೇರಳದ ನೈಟಿಂಗೇಲ್! title=

Singer K.S.Chithra Controversy: ಇದೇ ವರ್ಷ ಜನವರಿ 22ರಂದು  ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ನಡೆಯಲಿದ್ದು, ಇದಕ್ಕಾಗಿ ಹಲವು ದಿನಗಳಿಂದ ಸಿದ್ಧತೆಗಳು ಆರಂಭ ಆಗಿವೆ. ಈ ವಿಶೇಷ  ಕಾರ್ಯಕ್ರಮದಲ್ಲಿ ಸ್ವತ: ಪ್ರಧಾನಿ ನರೇಂದ್ರ ಮೋದಿ  ಪಾಲ್ಗೊಳ್ಳುವುದರ ಜೊತೆಗೆ ಹಲವಾರು ಸೆಲೆಬ್ರೆಟಿಗಳು ಕೂಡ ಹರ್ಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಇನ್ನೇನು ಕೆಲವೇ ದಿನಗಳಲ್ಲಿ ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಹೀಗಾಗಿ  ರಾಷ್ಟ್ರ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಹಿರಿಯ ಗಾಯಕಿ ಚಿತ್ರಾ ಎರಡು ದಿನಗಳ ಹಿಂದೆ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಶ್ರೀರಾಮ ಜಪ ಮಾಡುವಂತೆ ವಿಡಿಯೋ ಮಾಡಿದ್ದರು. ಚಿಕ್ಕ ವಿಡಿಯೋದಲ್ಲಿ ಗಾಯಕಿ ಚಿತ್ರಾ ಜನವರಿ 22ರಂದು "ಶ್ರೀ ರಾಮ, ಜಯ ರಾಮ, ಜಯ ಜಯ ರಾಮ" ಮಂತ್ರವನ್ನು ಹೇಳುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: Mahesh Babu: ಇದೇ ನನ್ನ ಕೊನೆಯ ಸಿನಿಮಾ.... ಮಹೇಶ್ ಬಾಬು ಶಾಕಿಂಗ್ ಹೇಳಿಕೆ!!

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಕಿಡಿಕಾರುತ್ತಿದ್ದಾರೆ. ಕೆಲವು ಗಾಯಕಿ ಚಿತ್ರಾ ಈ ಸಂದೇಶವನ್ನು ರವಾನಿಸುವ ಮೂಲಕ ರಾಜಕೀಯದ ಕಡೆಗೆ ವಾಲಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದರೇ, ಮತ್ತೆ ಇನ್ನೂ ಕೆಲವರು ಗಾಯಕಿ ಚಿತ್ರಾಗೆ ಬೆಂಬಲವನ್ನು ಸೂಚಿಸಿದ್ದಾರೆ. "ಗಾಯಕಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಇದೆ" ಎಂದೂ ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದಂತೆ ಗಾಯಕ ಜಿ ವೇಣು ಗೋಪಾಲ್ ಗಾಯಕಿಯ ಬೆಂಬಲ ಸೂಚಿಸಿದ್ದಾರೆ. 

ಗಾಯಕಿ ಕೆ ಎಸ್‌ ಚಿತ್ರಾ ಕೇರಳದ ನೈಟಿಂಗೇಲ್ ಅಂತಲೇ ಜನಪ್ರಿಯರಾಗಿರುವ ಚಿತ್ರಾ ಸಾವಿರಾರು ಹಾಡುಗಳು ಧ್ವನಿ ನೀಡಿದ್ದು, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಾಡಿ ಮೆಚ್ಚುಗೆ ಗಳಿಸಿದ್ದಾರೆ. ದಕ್ಷಿಣ ಭಾರತದ ಅಷ್ಟೇ ಅಲ್ಲದೆ, ಹಿಂದಿ ಸೇರಿದಂತೆ ಇನ್ನು ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಇವರ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳು ಕೂಡ ಲಭಿಸಿದ್ದು, ಆದರೆ ಈಗ  ಶ್ರೀ ರಾಮನ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News