ಸೌತ್‌ ನಟಿ ನಮಿತಾ ಪತಿಗೆ ಸಂಕಷ್ಟ: ವೀರೇಂದ್ರ ಚೌಧರಿಗೆ ಪೋಲೀಸರಿಂದ ನೋಟಿಸ್‌!

Veerendra Choudhry: ಬಹುಭಾಷಾ ನಟಿ ನಮಿತಾ ಪತಿ ವೀರೇಂದ್ರ ಚೌಧರಿ ತಮಿಳು ನಾಡಿನ  ಕೈಗಾರಿಕೆಗಳ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಗೋಪಾಲಸ್ವಾಮಿ ಎಂಬುವವರ ಬಳಿ 50 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿರುವ ಆರೋಪದಿಂದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಾಗಿದೆ.

Written by - Zee Kannada News Desk | Last Updated : Nov 16, 2023, 03:12 PM IST
  • ಗ್ಲಾಮರ್ ಲುಕ್‌ನಿಂದಲೇ ಹೆಚ್ಚಾಗಿ ಜನಪ್ರಿಯರಾಗಿರುವ ಈ ನಟಿಯ ಪತಿ ವೀರೇಂದ್ರ ಚೌಧರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
  • ನಮಿತಾ ಪತಿ ಗೋಪಾಲಸ್ವಾಮಿಗೆ ಕೈಗಾರಿಕೆಗಳ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ 50 ಲಕ್ಷ ರೂಪಾಯಿ ಪಡೆದು, ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
  • ನಮಿತಾ ಪತಿ ವೀರೇಂದ್ರ ಚೌಧರಿಗೆ ಪೊಲೀಸರು ನೋಟಿಸ್ ನೀಡಿದ್ದು, ತನಿಖೆಗೆ ಹಾಜರಾಗುವಂತೆ ಹೇಳಿದ್ದಾರೆ.
ಸೌತ್‌ ನಟಿ ನಮಿತಾ ಪತಿಗೆ ಸಂಕಷ್ಟ: ವೀರೇಂದ್ರ ಚೌಧರಿಗೆ ಪೋಲೀಸರಿಂದ ನೋಟಿಸ್‌! title=

Namithaʼs Husband In Trouble: ದಕ್ಷಿಣ ಭಾರತದ ಗ್ಲಾಮರಸ್ ನಟಿ ನಮಿತಾ, ಈ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ 'ನೀಲಕಂಠ' ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಈಕೆಗೆ ಕನ್ನಡದಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ.  ಗ್ಲಾಮರ್ ಲುಕ್‌ನಿಂದಲೇ ಹೆಚ್ಚಾಗಿ ಜನಪ್ರಿಯರಾಗಿರುವ ಈ ನಟಿಯ ಪತಿ ವೀರೇಂದ್ರ ಚೌಧರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದು, ಇವರ ವಿರುದ್ಧ ಇತ್ತೀಚೆಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಬಹುಭಾಷಾ ನಟಿ ನಮಿತಾ ಪತಿ ವೀರೇಂದ್ರ ಚೌಧರಿ ಹೆಸರು ವಂಚನೆ ಪ್ರಕರಣವೊಂದರಲ್ಲಿ ಕೇಳಿ ಬರುತ್ತಿದ್ದು, ಇತ್ತೀಚೆಗೆ ನಮಿತಾ ಪತಿ ವಿರುದ್ಧ ತಮಿಳುನಾಡಿನ ಗೋಪಾಲಸ್ವಾಮಿ ಎಂಬುವವರು ವಂಚನೆ ಪ್ರಕರಣವನ್ನು ದಾಖಲು ಮಾಡಿದ್ದರು. ನಟಿ ನಮಿತಾ ಪತಿ, ತಮಿಳು ನಾಡಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಗೋಪಾಲಸ್ವಾಮಿ ಎಂಬುವವರ ಬಳಿ 50 ಲಕ್ಷ ರೂಪಾಯಿ ಪಡೆದಿದ್ದು, ಆ ಬಳಿಕ ಅಧ್ಯಕ್ಷ ಸ್ಥಾನ ಕೊಡಿಸದೇ, ಇತ್ತ ಹಣವನ್ನು ನೀಡದೆ ಸತಾಯಿಸುತ್ತಿದ್ದಾರೆಂದು ವಂಚನೆ ಆರೋಪ ಮಾಡಿ, ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. 

ಇದನ್ನು ಓದಿ: Tiger 3: OTT ಅಂಗಳಕ್ಕೆ ಸಲ್ಲು ಬಾಯ್‌ ನ್ಯೂ ಸಿನಿಮಾ..! ಎಲ್ಲಿ? ಯಾವಾಗ?

ಈ ಸಂಬಂಧ ನಮಿತಾ ಪತಿ ವೀರೇಂದ್ರ ಚೌಧರಿಗೆ ಪೊಲೀಸರು ನೋಟಿಸ್ ನೀಡಿದ್ದು, ತನಿಖೆಗೆ ಹಾಜರಾಗುವಂತೆ ಹೇಳಿ, ಸೇಲಂನ ಕೇಂದ್ರ ಅಪರಾಧ ವಿಭಾಗ ಅಧಿಕಾರಿಗಳು ವೀರೇಂದ್ರ ಚೌಧರಿ ಹಾಗೂ ಮತ್ತಿಬ್ಬರಿಗೆ ಸಮನ್ಸ್ ಕಳುಹಿಸಿರುವ ಬಗ್ಗೆ ವರದಿಯಾಗಿದೆ. ವೀರೇಂದ್ರ ಚೌಧರಿ ಜೊತೆ ಇನ್ನಿಬ್ಬರು ಮುತ್ತು ರಾಮನ್ ಹಾಗೂ ಜಾಕೀರ್ ಎಂಬುವವರು 50 ಲಕ್ಷ ರೂಪಾಯಿ ಹಣ ಪಡೆದಿದ್ದರು ಎನ್ನಲಾಗಿದ್ದು, ವೀರೇಂದ್ರ ಚೌಧರಿ ಸೌತ್‌ ನಟಿ ನಮಿತಾ ಪತಿಯಾಗಿದ್ದರಿಂದ ಈ ವಿಷಯ ನಿನ್ನೆಯಿಂದ ಸದ್ದು ಮಾಡುತ್ತಿದೆ. 

ನಮಿತಾ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಗ್ಲಾಮರ್ ಪಾತ್ರಗಳಲ್ಲಿಯೇ ಹೆಚ್ಚಾಗಿ ಮಿಂಚಿ ಜನಪ್ರಿಯರಾಗಿದ್ದಾರೆ. ಈಕೆಯ ಅಭಿಮಾನಿಗಳು ತಮಿಳುನಾಡಿನಲ್ಲಿ ಗುಡಿಯನ್ನು ಕಟ್ಟಿ ಪೂಜಿಸುತ್ತಿದ್ದಾರೆ. ನಮಿತಾ ನಟ ದರ್ಶನ್ ನಟಿಸಿದ 'ಇಂದ್ರ' ಸಿನಿಮಾದಲ್ಲಿ ನಮಿತಾ ನಾಯಕಿಯಾಗಿ ನಟಿಸಿ, ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ನೀಲಕಂಠ', 'ಹೂ' ಕನ್ನಡದ ಫೇಮಸ್ ಸಿನಿಮಾಗಳ ಜೊತೆಗೆ 'ನಮಿತಾ ಐ ಲವ್ ಯೂ', 'ಬೆಂಕಿ ಬಿರುಗಾಳಿ', 'ಸಿಕ್ಕಾಪಟ್ಟೆ ಇಷ್ಟಾಪಟ್ಟೆ' ಅಂತಹ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News