ಸಮಂತಾ-ನಾಗಚೈತನ್ಯ ಡಿವೋರ್ಸ್‌ಗೆ ಕಾರಣ ಇದೇ!! 4 ವರ್ಷಗಳ ನಂತರ ಬಟಾಬಯಲಾಯ್ತು ಅಸಲಿ ಸತ್ಯ!

Samantha-Nag Chaitanya Divorce Real Reason: ಟಾಲಿವುಡ್ ಸ್ಟಾರ್ ಜೋಡಿ ನಾಗ ಚೈತನ್ಯ-ಸಮಂತಾ ವಿಚ್ಛೇದನ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇತ್ತೀಚಿಗೆ ರಾಜ್ಯವನ್ನೇ ನಡುಗಿಸುವ ಫೋನ್ ಕದ್ದಾಲಿಕೆ ವಿಚಾರದಲ್ಲಿ ಇವರ ಹೆಸರುಗಳು ಹರಿದಾಡುತ್ತಿವೆ.. 

Written by - Savita M B | Last Updated : Mar 28, 2024, 10:40 AM IST
  • ಟಾಲಿವುಡ್ ಸ್ಟಾರ್ ಜೋಡಿ ನಾಗ ಚೈತನ್ಯ- ಸಮಂತಾ ವಿಚ್ಛೇದನ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ
  • ಅಂದಿನಿಂದ, ಈ ಇಬ್ಬರಿಗೆ ಸಂಬಂಧಿಸಿದ ಅನೇಕ ವಿಷಯಗಳು ಜನರಲ್ಲಿ ಹಾಟ್ ಟಾಪಿಕ್ ಆಗಿವೆ.
ಸಮಂತಾ-ನಾಗಚೈತನ್ಯ ಡಿವೋರ್ಸ್‌ಗೆ ಕಾರಣ ಇದೇ!! 4 ವರ್ಷಗಳ ನಂತರ ಬಟಾಬಯಲಾಯ್ತು ಅಸಲಿ ಸತ್ಯ!  title=

Samantha-Nag Chaitanya: ಟಾಲಿವುಡ್ ಸ್ಟಾರ್ ಜೋಡಿ ನಾಗ ಚೈತನ್ಯ- ಸಮಂತಾ ವಿಚ್ಛೇದನ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸಮಂತಾಳನ್ನು ಪ್ರೀತಿಸಿ ಮದುವೆಯಾದ ನಾಗ ಚೈತನ್ಯ ಆಕೆಯ ಜೊತೆಗಿನ ವೈವಾಹಿಕ ಸಂಬಂಧಕ್ಕೆ ಫುಲ್ ಸ್ಟಾಪ್ ಹಾಕುವ ಮೂಲಕ ಅನಿರೀಕ್ಷಿತ ಶಾಕ್ ಕೊಟ್ಟಿದ್ದರು.. ಅಂದಿನಿಂದ, ಈ ಇಬ್ಬರಿಗೆ ಸಂಬಂಧಿಸಿದ ಅನೇಕ ವಿಷಯಗಳು ಜನರಲ್ಲಿ ಹಾಟ್ ಟಾಪಿಕ್ ಆಗಿವೆ.

ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನದ ಕಾರಣವನ್ನು ಬಹಿರಂಗಪಡಿಸದೆ ಅಧಿಕೃತವಾಗಿ ವಿಚ್ಛೇದನವನ್ನು ಘೋಷಿಸಿದ್ದರು. ಅಂದಿನಿಂದ ಅವರು ಪ್ರತ್ಯೇಕವಾಗಿದ್ದು ತಮ್ಮ ತಮ್ಮ ವೃತ್ತಿಯನ್ನು ಮುಂದುವರೆಸಿದ್ದಾರೆ. ಹೀಗಾಗಿ ಸಮಂತಾ ಮತ್ತು ನಾಗ ಚೈತನ್ಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಲವು ವದಂತಿಗಳಿಗೆ ತೆರೆ ಬಿದ್ದಿತ್ತು..

ಇದನ್ನೂ ಓದಿ-Siddharth-Aditi Rao: ಸದ್ದಿಲ್ಲದೆ ಎರಡನೇ ಮದುವೆಯಾದ ನಟ ಸಿದ್ಧಾರ್ಥ್‌ ಮೊದಲ ಪತ್ನಿ ಇವರೇ..! ಯಾವ ಹಿರೋಯಿನ್‌ಗೂ ಕಡಿಮೆಯಿಲ್ಲ ಈ ಚೆಲುವೆ!!

ಈ ಹಿನ್ನಲೆಯಲ್ಲಿ ಇದೀಗ ರಾಜ್ಯವನ್ನೇ ನಡುಗಿಸುತ್ತಿರುವ ಲೇಟೆಸ್ಟ್ ವಿಚಾರ ಫೋನ್ ಕದ್ದಾಲಿಕೆಯಾಗಿದ್ದು.. ಇದರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಹೆಸರುಗಳು ಮುನ್ನೆಲೆಗೆ ಬಂದಿದೆ. ಟೆಲಿಫೋನ್ ಕದ್ದಾಲಿಕೆಯಲ್ಲಿ ತೊಡಗಿದ್ದ ತೆಲಂಗಾಣ ಸರ್ಕಾರಿ ಅಧಿಕಾರಿ ಪ್ರಣೀತ್ ರಾವ್ ಅವರನ್ನು ಬಂಧಿಸಿ ತನಿಖೆ ನಡೆಸಿದ ಬಳಿಕ ಸಂವೇದನೆಯ ವಿಷಯಗಳು ಬೆಳಕಿಗೆ ಬರುತ್ತಿದ್ದು.. ಹಿಂದಿನ ಸರ್ಕಾರ ಕೆಲವು ಸಿನಿಮಾ ನಾಯಕ-ನಾಯಕಿಯರ ಫೋನ್ ಕರೆಗಳ ಮೇಲೆ ಕಣ್ಣಿಟ್ಟಿದ್ದು ಸಿನಿ ವಲಯದಲ್ಲಿ ಸಂಚಲನ ಮೂಡಿಸಿದೆ.

ಇದೇ ವೇಳೆ ಟೆಲಿಫೋನ್ ಟ್ಯಾಪಿಂಗ್ ಬಗ್ಗೆ ಮಾತನಾಡುವಾಗ ಯೂಟ್ಯೂಬರ್ ತೀನ್ಮಾರ್ ಮಲ್ಲಣ್ಣ ಅವರು ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಇದು ಕೂಡ ಕಾರಣ ಎಂದು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಆಗಿನ ಆಡಳಿತ ಪಕ್ಷದ ಪ್ರಮುಖ ನಾಯಕ, ಡ್ರಗ್ ಡೀಲರ್ ಮಧ್ಯಸ್ಥಿಕೆಯಿಂದ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.. 

ಇದನ್ನೂ ಓದಿ-Anushka Sharma: ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ ಅನುಷ್ಕಾ ಶರ್ಮಾ.. ವಿರಾಟ್‌ ಕೊಹ್ಲಿಗಾಗಿ ಅಲ್ಲ.. ಈ ಕಾರಣಕ್ಕಾಗಿ!!

ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನವನ್ನು ಬಹುತೇಕ ಎಲ್ಲರೂ ಮರೆತುಬಿಡುತ್ತಿರುವ ಈ ಸಮಯದಲ್ಲಿ, ಟೆಲಿಫೋನ್ ಕದ್ದಾಲಿಕೆ ವಿಚಾರದಲ್ಲಿ ಅವರ ಹೆಸರು ಕೇಳಿಬಂದಾಗ ಎಲ್ಲರೂ ಶಾಕ್ ಆಗಿದ್ದಾರೆ. ಸದ್ಯ ತನ್ಮಾರ್ ಮಲ್ಲಣ್ಣ ಮಾಡಿರುವ ಈ ಕಾಮೆಂಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಪ್ರಸ್ತುತ, ನಾಗ ಚೈತನ್ಯ ಮತ್ತು ಸಮಂತಾ ಇಬ್ಬರೂ ಭಿನ್ನವಾಗಿದ್ದು, ತಮ್ಮ ತಮ್ಮ ವೃತ್ತಿಯತ್ತ ಗಮನ ಹರಿಸಿ, ಸಿನಿಮಾ ವಿಷಯದಲ್ಲಿ ಬ್ಯುಸಿಯಾಗಿದ್ದಾರೆ. ವಿಚ್ಛೇದನದ ಬಗ್ಗೆ ಸಾಕಷ್ಟು ವದಂತಿಗಳು ಹರಡಿದ್ದರೂ, ಈ ಇಬ್ಬರು ಸೆಲೆಬ್ರಿಟಿಗಳು ಅವುಗಳ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News