ಸಿಂಪಲ್‌ ಪ್ರೇಮ ಕಥೆಯ 'ಸ್ವಾತಿ ಮುತ್ತಿನ ಮಳೆ ಹನಿಯೇ' ಟ್ರೇಲರ್‌ ಔಟ್!

Swathi Mutthina Male Haniye: ಚಂದನವನದ ನಟ-ನಿರ್ದೇಶಕ ರಾಜ್‌.ಬಿ.ಶೆಟ್ಟಿ ಹಾಗೂ ನಟಿ ಸಿರಿ ರವಿಕುಮಾರ್‌ ಅಭಿನಯದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಸದಿ ವೀಕ್ಷಕರ ಗಮನ ಸೆಳೆಯುತ್ತಿದೆ.   

Written by - Zee Kannada News Desk | Last Updated : Nov 18, 2023, 10:56 AM IST
  • ನಟ-ನಿರ್ದೇಶಕ ರಾಜ್‌ ಬಿ. ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಸ್ವಾತಿ ಮುತ್ತಿನ ಮಳೆಹನಿಯೇ' ಚಿತ್ರದ ಟ್ರೇಲರ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆಯುತ್ತಿದೆ.
  • 'ಸ್ವಾತಿ ಮುತ್ತಿನ ಮಳೆಹನಿಯೇ' ಸಿನಿಮಾದ ಚಿತ್ರೀಕರಣ ಕೇವರ 30 ದಿನಗಳಲ್ಲಿ ಮುಕ್ತಾಯವಾಗಿದೆ.
  • ಕಾಯಿಲೇ ಗುಣ ಆಗುವುದೇ ಇಲ್ಲ ಎನ್ನುವ ಜೀವನದ ಕೊನೆ ದಿನಗಳನ್ನು ಎಣಿಸುತ್ತಿರುವ ವ್ಯಕ್ತಿಯ ಜೀವನದಲ್ಲಿ ಭರವಸೆ ಗಾಳಿ ಬೀಸುವ ಕತೆ ಚಿತ್ರದಲ್ಲಿದೆ.
ಸಿಂಪಲ್‌ ಪ್ರೇಮ ಕಥೆಯ 'ಸ್ವಾತಿ ಮುತ್ತಿನ ಮಳೆ ಹನಿಯೇ' ಟ್ರೇಲರ್‌ ಔಟ್! title=

Swathi Mutthina Male Haniye Trailer: ಸ್ಯಾಂಡಲ್‌ವುಡ್‌ ನಟ-ನಿರ್ದೇಶಕ ರಾಜ್‌ ಬಿ. ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಟ್ರೇಲರ್ ರಿಲೀಸ್ ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಸಿನಿಮಾ ಇದೊಂದು ಸಿಂಪಲ್ ಪ್ರೇಮ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿರುವುದು ಚಿತ್ರದ  ಟ್ರೇಲರ್‌ನಲ್ಲಿ ಗೊತ್ತಾಗುತ್ತಿದ್ದು, ರಾಜ್‌. ಬಿ ಶೆಟ್ಟಿ ಜೋಡಿಯಾಗಿ ಸಿರಿ ರವಿಕುಮಾರ್ ನಟಿಸಿದ್ದಾರೆ. ಬ್ಯೂಟಿ ಕ್ವೀನ್ ರಮ್ಯಾ ತಮ್ಮ ಆಪಲ್ ಬಾಕ್ಸ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 

'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ ಚಿತ್ರೀಕರಣ ಕೇವರ 30 ದಿನಗಳಲ್ಲಿ ಮುಕ್ತಾಯವಾಗಿದ್ದು, ಕಾರಣಾಂತರಗಳಿಂದ ಈ ಚಿತ್ರ ಬಿಡುಗಡೆ ತಡವಾಯಿತು. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿ ಸಿನಿರಸಿಕರ ಮನಗೆದ್ದಿ, ಸದ್ಯ ಚಿತ್ರದ ಟ್ರೇಲರ್‌ ನೋಡಲೇಬೇಕು ಎನ್ನುವ ಕಾತರ ಮೂಡಿಸಿದೆ. ಅಷ್ಟರಮಟ್ಟಕ್ಕೆ ಟ್ರೇಲರ್ ನೋಡುಗರ ಮನಸೂರೆಗೊಳ್ಳುತ್ತಿದ್ದು, ಎರಡು ಮನಸುಗಳ ಪರಿಶುದ್ಧ ಪ್ರೀತಿಯ ಭಾವನೆಗಳ ತೋಳಲಾಟವನ್ನು ರಾಜ್‌ ಬಿ. ಶೆಟ್ಟಿ ಸೊಗಸಾಗಿ ಸೆರೆಹಿಡಿದಿದ್ದಾರೆ. 

ಇದನ್ನು ಓದಿ: Chinnara Chandra : ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ರವರ "ಚಿಣ್ಣರ ಚಂದ್ರ"

ಮಿಥುನ್ ಮುಕುಂದನ್ ಸಂಗೀತ ಹಾಗೂ ಪ್ರವೀಣ್ ಸಿರಿಯಾನ್ ಛಾಯಾಗ್ರಹಣ, ರಾಜ್‌ ಬಿ. ಶೆಟ್ಟಿ ಕಲ್ಪನೆಗೆ ಬಣ್ಣ ಹಾಗೂ ಸಂಗೀತದ ಉಡುಗೆ ತೊಡಿಸಿದಂತಿದೆ. ಕಾಯಿಲೇ ಗುಣ ಆಗುವುದೇ ಇಲ್ಲ ಎನ್ನುವ ಜೀವನದ ಕೊನೆ ದಿನಗಳನ್ನು ಎಣಿಸುತ್ತಿರುವ ವ್ಯಕ್ತಿಯ ಜೀವನದಲ್ಲಿ ಭರವಸೆ ಗಾಳಿ ಬೀಸುವ ಕತೆ ಚಿತ್ರದಲ್ಲಿದ್ದು, ಆಸರೆ ಎನ್ನುವ ಹಾಸ್ಪೈಸ್‌ನಲ್ಲಿ ಪ್ರೇರಣಾ ಸಲಹೆಗಾರ್ತಿಯಾಗಿ ಕೆಲಸ ಮಾಡುತ್ತಿರುತ್ತಾಳೆ. ಅಲ್ಲಿಗೆ ಗ್ಯಾಸ್ಟೋ ಇನ್‌ಸ್ಟೆನಲ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅನಿಕೇತ್ ಬಂದು ದಾಖಲಾದಾಗ ಬಳಿಕ, ಜೀವನದ ಮೇಲೆ ವೈರಾಗ್ಯ ಮೂಡಿದ ಆತನ ಬಾಳಲ್ಲಿ ಪ್ರೇರಣ ಆಗಮನದಿಂದ ಏನೆಲ್ಲಾ ಆಗುತ್ತದೆ ಅನ್ನೋದೇ ಸಿನಿಮಾ ಕತೆ. 

ರಾಜ್‌, ಸಿರಿ ತಮ್ಮ ತಮ್ಮ ಪಾತ್ರಗಳಲ್ಲಿ ಕಳೆದು ಹೋಗಿದ್ದು, ಚಿತ್ರದಲ್ಲಿ ಹೆಚ್ಚು ಪಾತ್ರಗಳಿಲ್ಲದೆ, ಕೆಲವೇ ಪಾತ್ರಗಳ ಸುತ್ತಾ ಕತೆ ಸುತ್ತುತ್ತದೆ. ನಿರ್ದೇಶಕರಾಗಿ ಮಾತ್ರವಲ್ಲದೇ ರಾಜ್‌. ಬಿ ಶೆಟ್ಟಿ ನಟನಾಗಿಯೂ ಗಮನ ಸೆಳೆಯುತ್ತಾ ಬರುತ್ತಿದ್ದು, ತಮಗಾಗಿಯೇ ಬರೆದುಕೊಂಡ ಪಾತ್ರದಲ್ಲಿ ರಾಜ್ ಮತ್ತೊಮ್ಮೆ ಗೆಲ್ಲುವ ಸುಳಿವು ನೀಡಿದ್ದಾರೆ. ಟ್ರೈಲರ್ ನೋಡಿದವರು ಮತ್ತೆ ಮತ್ತೆ ನೋಡುತ್ತಿದ್ದಾರೆ. ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ ಟ್ರೈಲರ್‌ಗೆ ಹೆಚ್ಚಿನ ಬಲ ತುಂಬಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News