Tamannah : "ಆ ಸಿನಿಮಾದಲ್ಲಿ ನಾನು ಬಹಳ ಕೆಟ್ಟದಾಗಿ ಕಾಣಿಸಿಕೊಂಡಿದ್ದೇನೆ..ಶೂಟಿಂಗ್‌ ವೇಳೆಯೇ ಗೆಲ್ಲಲ್ಲ ಅಂತ ಗೊತ್ತಿತ್ತು"

Tamannah on sura film : ಸಾಕಷ್ಟು ನಟ ನಟಿಯರು ತಾವು ನಟಿಸಿದ ಸಿನಿಮಾಗಳು ಪ್ಲಾಪ್‌ ಆದರೂ..ಸಕ್ಸಸ್‌ ಆದರೂ ನಮಗೆ ಇಷ್ಟ ಅಂತಲೇ ಹೇಳುತ್ತಾರೆ. ಆದರೆ ಕೆಲವೊಮ್ಮೆ ಮಾತ್ರ ಬಹಳ ದಿನಗಳ ನಂತರ ತಾವು ಕೆಟ್ಟದಾಗಿ ನಟಿಸಿದ ಸಿನಿಮಾಗಳ ಬಗ್ಗೆ ಹೇಳುತ್ತಾರೆ. ಇದೀಗ ತಮನ್ನಾ ಸಹ ತಮ್ಮದೊಂದು ಅಂತದ್ದೇ ಸಿನಿಮಾದ ಹೆಸರನ್ನು ಹೇಳಿದ್ದಾರೆ.   

Written by - Savita M B | Last Updated : Aug 1, 2023, 08:45 AM IST
  • ಬಹುಭಾಷಾ ನಟಿ ತಮನ್ನಾ ನಟಿಸಿರುವ ಜೈಲರ್‌ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
  • ತಮನ್ನಾ ಬಿಂದಾಸ್‌ ಸ್ಟೆಪ್‌ಗೆ ಫ್ಯಾನ್ಸ್‌ ಈಗಲೂ ಹುಚ್ಚೆದ್ದು ಕುಣಿಯುತ್ತಿದ್ದಾರೆ.
  • ಸಂದರ್ಶನದಲ್ಲಿಭಾಗಿಯಾದ ತಮನ್ನಾ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ಧಾರೆ
Tamannah : "ಆ ಸಿನಿಮಾದಲ್ಲಿ ನಾನು ಬಹಳ ಕೆಟ್ಟದಾಗಿ ಕಾಣಿಸಿಕೊಂಡಿದ್ದೇನೆ..ಶೂಟಿಂಗ್‌ ವೇಳೆಯೇ ಗೆಲ್ಲಲ್ಲ ಅಂತ ಗೊತ್ತಿತ್ತು"  title=

Tamannah : ಬಹುಭಾಷಾ ನಟಿ ತಮನ್ನಾ ನಟಿಸಿರುವ ಜೈಲರ್‌ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದಲ್ಲಿ ನಟಿ ರಜನಿಕಾಂತ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಸದ್ಯ ಇದೇ ಚಿತ್ರದ ಕಾವಾಲಾ ಸಾಂಗ್‌ ರಿಲೀಸ್‌ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ. ತಮನ್ನಾ ಬಿಂದಾಸ್‌ ಸ್ಟೆಪ್‌ಗೆ ಫ್ಯಾನ್ಸ್‌ ಈಗಲೂ ಹುಚ್ಚೆದ್ದು ಕುಣಿಯುತ್ತಿದ್ದಾರೆ. 

ಇನ್ನು ಈ ನಡುವೆ ತಮನ್ನಾ ಗಲಾಟ ತಮಿಳಿ ಯೂಟ್ಯೂಬ್ ಸಂದರ್ಶನದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದು, ನೀವು ನಟಿಸಿದ ಸಿನಿಮಾಗಳಲ್ಲಿ ಬಹಳ ಕೆಟ್ಟ ಸಿನಿಮಾ ಎನಿಸಿದ್ದು, ನೀವು ನೋಡೊಕೆ ಇಷ್ಟವಾಗದ ಸಿನಿಮಾ ಯಾವುದು?  ಎನ್ನುವ ಪ್ರಶ್ನೆಗೆ 'ಸುರ' ಸಿನಿಮಾ ಎಂದು ಉತ್ತರ ನೀಡಿದ್ದಾರೆ. ಹಾಗೇ ನೋಡಿದರೆ ಅಂತಹ ಸಾಕಷ್ಟು ಸಿನಿಮಾಗಳಿವೆ ಆದರೆ ಅದರಲ್ಲಿ ಅದು ಒಂದು. ಶೂಟಿಂಗ್ ವೇಳೆಯೇ ಅದು ಸರಿ ಇಲ್ಲ ಎನಿಸಿತು. ಆದರೂ ನಟಿಸಲೇಬೇಕಾಯಿತು ಎಂದಿದ್ದಾರೆ.

ಇದನ್ನೂ ಓದಿ-ಹಾಟ್‌ ವೈಟ್‌ ಕೋಟ್‌ ಧರಿಸಿ ʼಜಿಲ್ಕಾ ಜಿಲ್ಕಾ ರೇʼ ಅಂತಿದ್ದಾರೆ ಕರಾವಳಿ ಸುಂದರಿ ಮೇಘಾ ಶೆಟ್ಟಿ..!

ನಾನು "ಸುರ" ರೀತಿಯ ಸಿನಿಮಾಗಳನ್ನು ಮತ್ತೆ ಮಾಡಲಾರೆ..ಆ ಸಿನಿಮಾದಲ್ಲಿ ನಾನು ಕೆಟ್ಟದಾಗಿ ನಟಿಸಿದ್ದೇನೆ. ಈ ವಿಚಾರ ನನಗೆ ಶೂಟಿಂಗ್‌ ವೇಳೆಯೇ ತಿಳಿದಿತ್ತು..ಅದು ವರ್ಕ್‌ ಆಗಲ್ಲ ಅನ್ನೋದು ಗೊತ್ತಾಗಿತ್ತು. ಸಾಕಷ್ಟು ಸಿನಿಮಾ ಮಾಡುವಾಗ ಈ ರೀತಿ ಎನ್ನಿಸಿದ್ದುಂಟು..ಚಿತ್ರೀಕರಣದ ವೈಬ್‌ ನೋಡಿದಾಗಲೇ ಗೊತ್ತಾಗುತ್ತೆ..ಒಪ್ಪಿಕೊಂಡಿರುತ್ತೇ ಎಂದ ಮೇಲೆ ನಟಿಸಲೇಬೇಕು" ಎಂದು ತಮನ್ನಾ ಹೇಳಿದ್ದಾರೆ.

ತಮನ್ನಾ ಅವರ ಈ ಹೇಳಿಕೆ ದಳಪತಿ ವಿಜಯ್ ಅಭಿಮಾನಿಗಳಿಗೆ ಅಸಮಾಧಾನ ಉಂಟುಮಾಡಿದೆ. ಕೆಲವು ದಿನಗಳ ಹಿಂದೆ ನಟಿ ಸುರ ಸಿನಿಮಾದಲ್ಲಿ ನಟಿಸಿದ ಮೇಲೆಯೇ ನನಗೆ ತೆಲುಗಿನಲ್ಲಿ ಹೆಚ್ಚೆಚ್ಚು ಅವಕಾಶಗಳು ಬಂದವು ಎಂದಿದ್ದರು. ಆದರೆ ಈಗ ಕೆಟ್ಟ ಸಿನಿಮಾ ಎಂದು ಹೇಳುತ್ತಿದ್ದಾರೆ ಎಂದೆಲ್ಲಾ ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. 

ಇದನ್ನೂ ಓದಿ-"ಕಾವ್ಯ ಮಾರನ್ ನೋಡಿ ಬೇಜಾರುಗುತ್ತೆ" ಎಂದಿದ್ದೇಕೆ ರಜನಿಕಾಂತ್?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News