ವೈಷ್ಣವಿಗೌಡ ಮದುವೆ ನಿಶ್ಚಯ : ಸನ್ನಿಧಿ ಕೈಹಿಡಿಯಲಿದ್ದಾನೆ ಈ ಹೀರೋ..!

ಸ್ಯಾಂಡಲ್‌ವುಡ್‌ ಮಿಲ್ಕಿ ಬ್ಯೂಟಿ, ವೈಷ್ಣವಿ ಗೌಡ ಅವರಿಗೆ ಸಂಬಂಧಪಟ್ಟ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಸನ್ನಿದಿಯ ಮದುವೆ ನಿಶ್ಚಿಯ ಆಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಫೋಟೋಗಳು ಸುದ್ದಿಯಾಗುತ್ತಿವೆ. ಅಲ್ಲದೆ, ಫೋಟೋಗಳಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಶಂಕರ್‌ ಬಿದರಿ ಇರುವುದು ಕುತೂಹಲ ಮೂಡಿಸಿದೆ. ಮದುವೆ ಕುರಿತು ವೈಷ್ಣವಿಗೌಡ ಅವರು ಸಹ ಹೇಳಿಕೆ ನೀಡಿದ್ದಾರೆ.

Written by - Krishna N K | Last Updated : Nov 23, 2022, 01:47 PM IST
  • ಸ್ಯಾಂಡಲ್‌ವುಡ್‌ ಮಿಲ್ಕಿ ಬ್ಯೂಟಿ ವೈಷ್ಣವಿಗೌಡ ಮದುವೆ ನಿಶ್ಚಯ
  • ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ ಸನ್ನಿದಿ ಫೋಟೋ
  • ಡಿಂಪಲ್‌ ಬ್ಯೂಟಿ ಕೈಹಿಡಿಯಲಿದ್ದಾನಂತೆ ಬೆಂಗಳೂರು ಮೂಲದ ಉದ್ಯಮಿ
ವೈಷ್ಣವಿಗೌಡ ಮದುವೆ ನಿಶ್ಚಯ : ಸನ್ನಿಧಿ ಕೈಹಿಡಿಯಲಿದ್ದಾನೆ ಈ ಹೀರೋ..! title=

ಬೆಂಗಳೂರು : ಸ್ಯಾಂಡಲ್‌ವುಡ್‌ ಮಿಲ್ಕಿ ಬ್ಯೂಟಿ, ವೈಷ್ಣವಿ ಗೌಡ ಅವರಿಗೆ ಸಂಬಂಧಪಟ್ಟ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಸನ್ನಿದಿಯ ಮದುವೆ ನಿಶ್ಚಿಯ ಆಗಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಫೋಟೋಗಳು ಸುದ್ದಿಯಾಗುತ್ತಿವೆ. ಅಲ್ಲದೆ, ಫೋಟೋಗಳಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ ಶಂಕರ್‌ ಬಿದರಿ ಇರುವುದು ಕುತೂಹಲ ಮೂಡಿಸಿದೆ. ಮದುವೆ ಕುರಿತು ವೈಷ್ಣವಿಗೌಡ ಅವರು ಸಹ ಹೇಳಿಕೆ ನೀಡಿದ್ದಾರೆ.

ಕನ್ನಡದ ಪ್ರಸಿದ್ಧ ಧಾರಾವಾಹಿಗಳಲ್ಲಿ ಒಂದಾದ ʼಅಗ್ನಿಸಾಕ್ಷಿʼ ಮೂಲಕ ಕನ್ನಡಿಗರ ಮನ ಗೆದ್ದಿದ್ದ ವೈಷ್ಣವಿ ಗೌಡ ಅವರು ಸನ್ನಿಧಿ ಅಂತ ಕರುನಾಡಿನಲ್ಲಿ ಹೆಸರುವಾಸಿಯಾದವರು. ತಮ್ಮ ನಟನೆ, ಕ್ಯೂಟ್‌ ನಗು, ಸೌಂದರ್ಯದಿಂದಲೇ ವೈಷ್ಣವಿಗೌಡ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ʼಬಿಗ್ ಬಾಸ್ʼ ಸ್ಪರ್ಧಿಯಾಗಿ ದೊಡ್ಮನೆ ಸೇರಿ ಉತ್ತಮ ಪ್ರದರ್ಶನವನ್ನು ಕೂಡ ಡಿಂಪಲ್‌ ಕ್ವಿನ್‌ ನೀಡಿದ್ದರು. ಆದ್ರೆ ಕೆಲ ವರ್ಷಗಳಿಂದ ಬಣ್ಣದ ಲೋಕದಿಂದ ಮಿಲ್ಕಿ ಬ್ಯೂಟಿ ದೂರ ಉಳಿದಿದ್ದರು. ಆದ್ರೆ ಸೋಷಿಯಲ್‌ ಮೀಡಿಯಾದ ಮೂಲಕ ಫ್ಯಾನ್ಸ್‌ಗಳಿಗೆ ಸದಾ ಹತ್ತಿರವಾಗಿದ್ದರು.

ಇದನ್ನೂ ಓದಿ: ‘ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಸಿನಿಮಾದ ಟ್ರೈಲರ್ ರಿಲೀಸ್; ಹೇಗಿದೆ ಗೊತ್ತಾ ಹವಾ..?

ಸದ್ಯ ವೈಷ್ಣವಿ ಗೌಡ ಅವರಿಗೆ ಮದುವೆ ನಿಶ್ಚಯ ಆಗಿದೆ ಎಂಬ ಸುದ್ದಿ ನೆಟ್ಟಿಗರ ಬಾಯಿಂದ ಕೇಳಿ ಬರುತ್ತಿದೆ. ವೈಷ್ಣವಿ ಅವರನ್ನು ಕೈ ಹಿಡಿಯಲಿರುವ ಹುಡುಗ ಬೆಂಗಳೂರು ಮೂಲದ ಉದ್ಯಮಿ ಎಂದು ಹೇಳಲಾಗುತ್ತಿದೆ. ವರನ ಹೆಸರನ್ನು ವಿಧ್ಯಾಭರಣ ಎಂದು ತಿಳಿದು ಬಂದಿದೆ. ಇನ್ನು ವಿಧ್ಯಾಭರಣ್‌ ಅವರು ʼವಿರಾಜ್‌ʼ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಸದ್ಯ ವೈಷ್ಣವಿ ಗೌಡ ಅವರ ಕೈ ಹಿಡಿಯಲಿದ್ದಾರೆ ಎಂದು ತಿಳಿದುಬಂದಿದೆ.

ವೈರಲ್‌ ಆಗಿರುವ ಮದುವೆ ನಿಶ್ಚಯ ಫೋಟೋ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಖಾಸಗಿ ವಾಹಿನಿಗೆ ವೈರಲ್‌ ಫೋಟೋ ಕುರಿತು ವೈಷ್ಣವಿಗೌಡ ಅವರು ಸ್ಪಷ್ಟತೆ ನೀಡಿದ್ದಾರೆ. ಹುಡುಗನ ಕಡೆಯವರು ಬಂದು ನೋಡಿಕೊಂಡು ಹೋಗಿದ್ದಾರೆ, ನನ್ನ ಅಭಿಪ್ರಾಯವನ್ನು ನಾನು ತಿಳಿಸಿಲ್ಲ. ಇದು ಎಂಗೇಜ್‌ಮೆಂಟ್‌ ಅಲ್ಲ ಎಂದು ಹೇಳಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ನಂತರ ವೈಷ್ಣವಿ ಅವರು ಲಕ್ಷಣ ಧಾರಾವಾಹಿಯ ಸಂಚಿಕೆಯೊಂದರಲ್ಲಿ ನಟಿಸುವ ಮೂಲಕ ಕಮ್‌ಬ್ಯಾಕ್‌ ಮಾಡಿದ್ದರು. ಇದೀಗ ಹೊಸ ಧಾರಾವಾಹಿಯಲ್ಲಿ ವೈಷ್ಣವಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News