ಕಿಚ್ಚ-‌ಉಪ್ಪಿ ಸ್ನೇಹಕ್ಕೆ ಸಾಕ್ಷಿಯಾದ ‘ವಿಕ್ರಾಂತ್ ರೋಣ’ ಅದ್ಧೂರಿ ಕಾರ್ಯಕ್ರಮ..!

ಜಗತ್ತಿನಾದ್ಯಂತ ‘ವಿಕ್ರಾಂತ್ ರೋಣ’ ಹವಾ ಜೋರಾಗಿದೆ. ನಿನ್ನೆ ರಾಜಧಾನಿ ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಅಭಿಮಾನದ ಕಾಣಿಕೆ ಸಲ್ಲಿಸಿದ್ರು. ಅದರಲ್ಲೂ, ಕಿಚ್ಚ-‌ಉಪ್ಪಿ ಸ್ನೇಹಕ್ಕೆ ‘ವಿಕ್ರಾಂತ್ ರೋಣ’ ಕಾರ್ಯಕ್ರಮ ಸಾಕ್ಷಿ ಆಗಿದ್ದು ಮಾತ್ರ ಇತಿಹಾಸದ ಪುಟ ಸೇರಿದೆ.

Written by - Malathesha M | Edited by - Manjunath N | Last Updated : Jul 27, 2022, 05:03 PM IST
  • ಸಾಲು ಸಾಲು ಕನ್ನಡ ಸಿನಿಮಾಗಳು ಜಗತ್ತಿನಾದ್ಯಂತ ಹವಾ ಎಬ್ಬಿಸುತ್ತಿವೆ.
  • ಈ ಸಂಭ್ರಮ ಕನ್ನಡಿಗರ ಖುಷಿಗೆ ಕಾರಣವಾಗುತ್ತಿದೆ.
  • ಇದರ ಜೊತೆಗೆ ಕನ್ನಡಿಗರ ಮತ್ತೊಂದು ಸಿನಿಮಾ ಹಾಲಿವುಡ್‌ ಅಂಗಳವನ್ನು ಶೇಕ್‌ ಮಾಡಲು ಸಜ್ಜಾಗಿ ನಿಂತಿದೆ.
ಕಿಚ್ಚ-‌ಉಪ್ಪಿ ಸ್ನೇಹಕ್ಕೆ ಸಾಕ್ಷಿಯಾದ ‘ವಿಕ್ರಾಂತ್ ರೋಣ’ ಅದ್ಧೂರಿ ಕಾರ್ಯಕ್ರಮ..! title=

ಬೆಂಗಳೂರು: ಜಗತ್ತಿನಾದ್ಯಂತ ‘ವಿಕ್ರಾಂತ್ ರೋಣ’ ಹವಾ ಜೋರಾಗಿದೆ. ನಿನ್ನೆ ರಾಜಧಾನಿ ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಅಭಿಮಾನದ ಕಾಣಿಕೆ ಸಲ್ಲಿಸಿದ್ರು. ಅದರಲ್ಲೂ, ಕಿಚ್ಚ-‌ಉಪ್ಪಿ ಸ್ನೇಹಕ್ಕೆ ‘ವಿಕ್ರಾಂತ್ ರೋಣ’ ಕಾರ್ಯಕ್ರಮ ಸಾಕ್ಷಿ ಆಗಿದ್ದು ಮಾತ್ರ ಇತಿಹಾಸದ ಪುಟ ಸೇರಿದೆ.

ಕನ್ನಡದ ‘ವಿಕ್ರಾಂತ್ ರೋಣ’ ಜಗತ್ತಿನಾದ್ಯಂತ ಅಬ್ಬರಿಸಿ ಬೊಬ್ಬಿರಿಯಲು ಸಜ್ಜಾಗಿದೆ. ಇನ್ನೇನು ಜುಲೈ 28 ಅಂದ್ರೆ ಗುರುವಾರ ‘ವಿಕ್ರಾಂತ್ ರೋಣ’ ಚಿತ್ರ ಜಗತ್ತಿನಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ ಎಂಟ್ರಿ ಕೊಡಲಿದೆ. ಆದರೆ ಈ ಸಂಭ್ರಮಕ್ಕೂ ಮೊದಲು ಬೆಂಗಳೂರಿನಲ್ಲಿ ನಿನ್ನೆ ಪ್ರೀ ರಿಲೀಸ್‌ ಇವೆಂಟ್‌ನ್ನು ಆಯೋಜಿಸಿತ್ತು ‘ವಿಕ್ರಾಂತ್ ರೋಣ’ ತಂಡ. ಅಂದಹಾಗೆ ಈ ಕಾರ್ಯಕ್ರಮಕ್ಕೆ ರಿಯಲ್‌ ಸ್ಟಾರ್‌ ಉಪೇಂದ್ರ ಅವರೇ ಸ್ಪೆಷಲ್‌ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದರು. ಅಲ್ಲದೆ ಉಪ್ಪಿ ಹಾಗೂ ಕಿಚ್ಚನ ಸ್ನೇಹದ ಪ್ರತೀಕವೂ ಆಗಿತ್ತು. ಸುಮಾರು 4 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕಾರ್ಯಕ್ರಮ ಕಣ್ತುಂಬಿಕೊಂಡರು.

ಇದನ್ನೂ ಓದಿ: 'Vikrant Rona' ಬಿಡುಗಡೆಗೆ ವಿಶ್ವಾದ್ಯಂತ ಕೌಂಟ್ ಡೌನ್ ಶುರು..!

ಕಿಚ್ಚ ಸುದೀಪ್‌ ಹವಾ: 
‘ವಿಕ್ರಾಂತ್ ರೋಣ’ ಪದ ಕಿವಿಗೆ ಬಿದ್ದ ತಕ್ಷಣ ಸ್ಯಾಂಡಲ್‌ವುಡ್‌ ಸಿನಿ ಪ್ರಿಯರು ಎದೆಯುಬ್ಬಿಸಿ, ಇದು ನಮ್ಮ ಸಿನಿಮಾ ಅಂತಾರೆ. ಯಾಕಂದ್ರೆ ಕಿಚ್ಚ ಸುದೀಪ್‌ ಅಭಿನಯದ ‘ವಿಕ್ರಾಂತ್ ರೋಣ’ ಸೃಷ್ಟಿಸಿರುವ ಹವಾನೆ ಅಂತಹದ್ದು. ಇದೇ ಮೊದಲ ಬಾರಿಗೆ ಸ್ಯಾಂಡಲ್‌ವುಡ್ ಸಿನಿಮಾ ಒಂದು ಹಾಲಿವುಡ್‌ ಬಾಗಿಲನ್ನೇ ಬಡಿದು, ಹೊಸ ಇತಿಹಾಸ ಸೃಷ್ಟಿಸುತ್ತಿದೆ.

ಸಾಲು ಸಾಲು ಕನ್ನಡ ಸಿನಿಮಾಗಳು ಜಗತ್ತಿನಾದ್ಯಂತ ಹವಾ ಎಬ್ಬಿಸುತ್ತಿವೆ. ಈ ಸಂಭ್ರಮ ಕನ್ನಡಿಗರ ಖುಷಿಗೆ ಕಾರಣವಾಗುತ್ತಿದೆ. ಇದರ ಜೊತೆಗೆ ಕನ್ನಡಿಗರ ಮತ್ತೊಂದು ಸಿನಿಮಾ ಹಾಲಿವುಡ್‌ ಅಂಗಳವನ್ನು ಶೇಕ್‌ ಮಾಡಲು ಸಜ್ಜಾಗಿ ನಿಂತಿದೆ. ಈಗಾಗಲೇ‌ ಕಿಚ್ಚ ಸುದೀಪ್ ಫ್ಯಾನ್ಸ್ ‘ವಿಕ್ರಾಂತ್ ರೋಣ’ ರಿಲೀಸ್‌ಗೆ ಸಂಭ್ರಮದ‌ ತಯಾರಿ ನಡೆಸಿದ್ದಾರೆ. ನಾಳೆಯಿಂದಲೇ ‘ವಿಕ್ರಾಂತ್ ರೋಣ’ನ ಹಬ್ಬ ಜಗಮಗಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News