Bay Leaf in Diabetes: ತುಂಬಾ ಗುಣಕಾರಿಯಾಗಿದೆ ತಮಾಲ ಪತ್ರ, ಪ್ರತಿ ಅಡುಗೆ ಮನೆಯಲ್ಲಿ ಲಭಿಸುವ ಇದು ಸಕ್ಕರೆ ಕಾಯಿಲೆಗೆ ರಾಮಬಾಣ ಚಿಕಿತ್ಸೆ

Bay Leaf Benefits: ತಮಾಲ ಪತ್ರ (Bay Leaf) ಅಥವಾ ತೇಜ್ ಪತ್ತಾ  ಅಡುಗೆ ಮನೆಯಲ್ಲಿ ಇರುವ ಸಾಂಬಾರ ಪದಾರ್ಥಗಳಲ್ಲಿ ಒಂದು. ಇದು ಕ್ಯಾನ್ಸರ್ ತಡೆಗಟ್ಟಲು, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳಿಗೆ ಇದು ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Nov 19, 2021, 06:33 PM IST
  • ತಮಾಲ ಪತ್ರ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ
  • ತಮಾಲ ಪತ್ರ ಗ್ಲೈಸೆಮಿಕ್ ಪ್ರತಿಕ್ರಿಯೆಯನ್ನು ಕಡಿಮೆ ಮಾಡುತ್ತದೆ.
  • ತಮಾಲ ಪತ್ರ ಮಧುಮೇಹದ ಜಟಿಲತೆಯನ್ನು ತಡೆಯುತ್ತದೆ
Bay Leaf in Diabetes: ತುಂಬಾ ಗುಣಕಾರಿಯಾಗಿದೆ ತಮಾಲ ಪತ್ರ, ಪ್ರತಿ ಅಡುಗೆ ಮನೆಯಲ್ಲಿ ಲಭಿಸುವ ಇದು ಸಕ್ಕರೆ ಕಾಯಿಲೆಗೆ ರಾಮಬಾಣ ಚಿಕಿತ್ಸೆ title=
Bay Leaf in Diabetes (File Photo)

Bay Leaf Benefits In Diabetes: ಲಾರಸ್ ನೊಬಿಲಿಸ್ ಮರದ  (Laurus nobilis tree) ತಮಾಲ ಪತ್ರವನ್ನು (Bay Leaf) ಭಾರತೀಯ ಅಡುಗೆಮನೆಗಳಲ್ಲಿ ಮಸಾಲೆ ಪದಾರ್ಥದ  (Indian Spice) ರೂಪದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದನ್ನು ತಮಾಲಪತ್ರ, ಮಲಬಾರ್ ಎಲೆ (Malabar Leaf Health Benefits), ಇಂಡಿಯನ್ ಕ್ಯಾಸಿಯಾ, ಲಾರೆಲ್ ಲೀಫ್ ಮತ್ತು ತೇಜ್ ಪತ್ತಾ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ತಮಾಲಪತ್ರದ ಅನೇಕ ಪ್ರಯೋಜನಗಳಿವೆ. ಆದರೆ ಮಧುಮೇಹ ರೋಗಿಗಳಿಗೆ ಇದು ತುಂಬಾ ಪ್ರಯೋಜನಕಾರಿ ಎಂಬುದು ನಿಮಗೆ ಗೊತ್ತಿದೆಯೇ? ಮಧುಮೇಹಿಗಳಿಗೆ (Diabetes) ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಸಂಶೋಧನೆ ಏನ್ ಹೇಳುತ್ತೆ 
ಜರ್ನಲ್ ಆಫ್ ಕ್ಲಿನಿಕಲ್ ಬಯೋಕೆಮಿಸ್ಟ್ರಿ ಅಂಡ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ದಿನಕ್ಕೆ 1-3 ಗ್ರಾಂ ತಮಾಲ ಪತ್ರದ ಎಲೆಗಳನ್ನು 30 ದಿನಗಳವರೆಗೆ ಸೇವಿಸುವುದರಿಂದ ಮಧುಮೇಹ ಮತ್ತು ಹೃದ್ರೋಗದ  ಅಪಾಯಕಾರಿ ಅಂಶ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹ ಇರುವವರಲ್ಲಿ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.

ತಮಾಲಪತ್ರದಲ್ಲಿ ಕಂಡುಬರುವ ಪೋಷಕಾಂಶಗಳು
ತೇಜ್ ಪತ್ತಾ ಅಥವಾ ತಮಾಲ ಪತ್ರದಲ್ಲಿ ಟ್ಯಾನಿನ್‌ಗಳು, ಫ್ಲೇವನಾಯ್ಡ್‌ಗಳು, ಫ್ಲೇವೊನ್‌ಗಳು, ಲಿನೂಲ್, ಯುಜೆನಾಲ್, ಆಂಥೋಸಯಾನಿನ್‌ಗಳು ಮತ್ತು ಮೀಥೈಲ್ ಚಾವಿಕೋಲ್‌ನಂತಹ ಫೈಟೊಕೆಮಿಕಲ್ ಸಂಯುಕ್ತಗಳು ಹೇರಳಪ್ರಮಾಣದಲ್ಲಿವೆ. ಇದು ಸಿಟ್ರಿಕ್ ಆಮ್ಲ, ಆಲ್ಕಲಾಯ್ಡ್‌ಗಳು, ಸಾರಭೂತ ತೈಲಗಳು, ಟ್ರೈಟರ್‌ ಪೆನಾಯ್ಡ್‌ಗಳು ಮತ್ತು ಟ್ಯಾನೇಟ್ ಆಮ್ಲವನ್ನು ಸಹ ಒಳಗೊಂಡಿದೆ.

ತಮಾಲ ಪತ್ರದಲ್ಲಿರವ ಕೆಲವು ಅಗತ್ಯ ಜೀವಸತ್ವಗಳು ಮತ್ತು ಖನಿಜಗಳೆಂದರೆ ವಿಟಮಿನ್ ಎ, ಪ್ರೋಟೀನ್, ಕಬ್ಬಿಣ, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಡಯೆಟರಿ ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ರಂಜಕ, ಸೋಡಿಯಂ, ತಾಮ್ರ, ಸತು, ಸೆಲೆನಿಯಮ್, ಮ್ಯಾಂಗನೀಸ್ ಮತ್ತು ಫೋಲೇಟ್.

ಮಧುಮೇಹಿಗಳಿಗೆ ತಮಾಲ ಪತ್ರ 
HDL ಅಥವಾ 'ಉತ್ತಮ' ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಸಾಮರ್ಥ್ಯ ತಮಾಲ ಪತ್ರಕ್ಕಿದೆ.  ತಮಾಲ ಪತ್ರ ರಕ್ತದಲ್ಲಿನ ಗ್ಲೂಕೋಸ್, ಕೆಟ್ಟ ಕೊಲೆಸ್ಟ್ರಾಲ್ ಮತ್ತು ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಮಧುಮೇಹಿಗಳಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ.

ಗ್ಲೈಸೆಮಿಕ್ ಪ್ರತಿಕ್ರಿಯೆಯನ್ನು ಕಡಿಮೆ ಮಾಡುತ್ತದೆ
ಒಂದು ಸಂಶೋಧನೆಯ ಪ್ರಕಾರ, ಶೇ.6 ರಷ್ಟು ತಮಾಲಪತ್ರದ ಪುಡಿ ಹೊಂದಿರುವ ಕುಕೀಗಳು ಮಧುಮೇಹಿಗಳಿಗೆ ಕಡಿಮೆ ಗ್ಲೈಸೆಮಿಕ್ ಪ್ರತಿಕ್ರಿಯೆಯೊಂದಿಗೆ ರುಚಿಕರವಾದ ಮತ್ತು ಪ್ರಯೋಜನಕಾರಿ ಆಹಾರ ಉತ್ಪನ್ನಗಳಾಗಿವೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ, ಜಠರಗರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಸೇವನೆಯ ನಂತರ ಸಕ್ಕರೆಯ ಮಟ್ಟದಲ್ಲಿ ಸ್ಪೈಕ್ ಅನ್ನು ತಡೆಯುತ್ತದೆ. ಆದ್ದರಿಂದ, ತಮಾಲ ಪತ್ರ ಅಥವಾ ಅದರ ಪುಡಿಯನ್ನು ಆಹಾರಕ್ಕೆ ಸೇರಿಸುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಮತ್ತು ಮಧುಮೇಹವನ್ನು ನಿರ್ವಹಿಸಲು ಅಥವಾ ತಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-Drinking Water: ನೀವು 8 ಗ್ಲಾಸ್‌ಗಿಂತ ಹೆಚ್ಚು ನೀರು ಕುಡಿಯುತ್ತಿದ್ದರೆ, ಈಗಲೇ ಈ ಅಭ್ಯಾಸವನ್ನು ಬಿಡಿ

ಇನ್ಸುಲಿನ್ ಬಿಡುಗಡೆಗೆ ಸಹಾಯ ಮಾಡುತ್ತದೆ
ದೇಹದಲ್ಲಿನ ಸ್ವತಂತ್ರ ರಾಡಿಕಲ್ಗಳು ಮೇದೋಜ್ಜೀರಕ ಗ್ರಂಥಿಯ ಬೀಟಾ ಕೋಶಗಳನ್ನು ಹಾನಿಗೊಳಿಸಬಹುದು ಮತ್ತು ಹೈಪರ್ಗ್ಲೈಸೀಮಿಯಾವನ್ನು ಉಂಟುಮಾಡಬಹುದು. ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದನೆಗೆ ಕಾರಣವಾಗಿದೆ, ಇದು ದೇಹದಲ್ಲಿನ ಗ್ಲೂಕೋಸ್ ಅನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಮೇದೋಜ್ಜೀರಕ ಗ್ರಂಥಿಯ ಬೀಟಾ ಕೋಶಗಳು ನಾಶವಾದಾಗ, ಇನ್ಸುಲಿನ್ ಉತ್ಪಾದನೆಯು ಕಡಿಮೆಯಾಗಬಹುದು. ಹಾನಿಗೊಳಗಾದ ಬೀಟಾ ಕೋಶಗಳಿಂದ ಇನ್ಸುಲಿನ್ ಬಿಡುಗಡೆಯನ್ನು ಉತ್ತೇಜಿಸಲು ಬೇ ಎಲೆಗಳು ಸಹಾಯಕವಾಗಿವೆ. ಇದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಸ್ವತಂತ್ರ ರಾಡಿಕಲ್‌ಗಳಿಂದ ಮೇದೋಜ್ಜೀರಕ ಗ್ರಂಥಿಗೆ ಹಾನಿಯಾಗದಂತೆ ತಡೆಯುತ್ತದೆ.

ಇದನ್ನೂ ಓದಿ-Weight Loss Tips : ಡಯಟ್ ಮಾಡದೆ ತೂಕ ಇಳಿಸಿಕೊಳ್ಳಿ : ಅದಕ್ಕೆ ಹೀಗೆ ಪ್ರತಿ ದಿನ ರಾಗಿ ರೊಟ್ಟಿ ಸೇವಿಸಿ!

ಮಧುಮೇಹದ ಜಟಿಲತೆ ತಡೆಯಬಹುದು
ಅನಿಯಂತ್ರಿತ ಮಧುಮೇಹವು ನರಮಂಡಲದ ಹಾನಿ, ಹೆಚ್ಚಿದ ಹೃದ್ರೋಗ, ಕಣ್ಣುಗಳಿಗೆ ಹಾನಿ ಮತ್ತು ಮೂತ್ರಪಿಂಡದ ತೊಂದರೆಗಳಿಗೆ ಕಾರಣವಾಗಬಹುದು. ತಮಾಲ ಪತ್ರ ಟ್ರೈಟರ್‌ಪೆನಾಯ್ಡ್‌ಗಳು, ಯುಜೆನಾಲ್ ಮತ್ತು ಲಿನೂಲ್‌ನಂತಹ ಸಂಯುಕ್ತಗಳನ್ನು ಹೊಂದಿರುತ್ತದೆ. ಈ ಉತ್ಕರ್ಷಣ ನಿರೋಧಕಗಳು ಇನ್ಸುಲಿನ್ ಕೊರತೆ ಮತ್ತು ಉರಿಯೂತದ ಅಂಶಗಳ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತವೆ, ಇದು ಅನಿಯಂತ್ರಿತ ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ-Heart Attack: ಚಳಿಗಾಲದಲ್ಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತೆ ಈ 4 ತಪ್ಪುಗಳು

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅನುಸರಿಸುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು  ಖಚಿತಪಡಿಸುವುದಿಲ್ಲ)

Trending News