Heart Attack: ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಕೂಡಲೇ ಈ 4 ಅಭ್ಯಾಸ ರೂಢಿಸಿಕೊಳ್ಳಿ

ಹೃದಯಾಘಾತದ ಅಪಾಯ: ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ತುಂಬಾ ಹೆಚ್ಚಾಗಿದೆ. ಏಕೆಂದರೆ ಇಲ್ಲಿನ ಜನರ ಆಹಾರ ಪದ್ಧತಿ ಮತ್ತು ಜೀವನಶೈಲಿ ಅನಾರೋಗ್ಯಕರವಾಗುತ್ತಿದೆ. ಹೀಗಾಗಿ ನೀವು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.

Written by - Puttaraj K Alur | Last Updated : Oct 9, 2023, 04:04 PM IST
  • ಪ್ಯಾಕೇಜ್ ಆಹಾರ, ಸಂಸ್ಕರಿಸಿದ ಆಹಾರ, ಸಕ್ಕರೆ, ಕೆಂಪು ಮಾಂಸ & ಕರಿದ ಪದಾರ್ಥ ಸೇವಿಸಬೇಡಿ
  • ನೀವು ಎಷ್ಟು ಬೇಗ ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುತ್ತಿರೋ ಅಷ್ಟು ಉತ್ತಮ
  • ಹೆಚ್ಚು ದೈಹಿಕ ಚಟುವಟಿಕೆ ಮಾಡಿದ್ರೆ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ
Heart Attack: ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಕೂಡಲೇ ಈ 4 ಅಭ್ಯಾಸ ರೂಢಿಸಿಕೊಳ್ಳಿ title=
ಹೃದಯಾಘಾತ ತಪ್ಪಿಸುವ ಮಾರ್ಗಗಳು

ಹೃದಯಾಘಾತ ತಪ್ಪಿಸಲು ಆರೋಗ್ಯಕರ ಅಭ್ಯಾಸ: ಹಿಂದಿನ ಕಾಲದಲ್ಲಿ ಮಧ್ಯವಯಸ್ಕ ಅಥವಾ ವೃದ್ಧಾಪ್ಯದವರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ವಾಸ್ತವವಾಗಿ ಅತಿಯಾದ ಕೆಟ್ಟ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಸಂಗ್ರಹವಾದಾಗ ಅಪಧಮನಿಗಳು ಕಿರಿದಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ರಕ್ತವು ಹೃದಯವನ್ನು ತಲುಪಲು ಹೆಚ್ಚಿನ ಶಕ್ತಿಯನ್ನು ಬಳಸಬೇಕಾಗುತ್ತದೆ. ಇದರಿಂದಾಗಿ ಮೊದಲು ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ನಂತರ ಹೃದಯಾಘಾತ ಸಂಭವಿಸುತ್ತದೆ. ಇದನ್ನು ತಪ್ಪಿಸಲು ನಿಮ್ಮ ದೈನಂದಿನ ಜೀವನದಲ್ಲಿ ಕೆಲವು ಅಭ್ಯಾಸಗಳನ್ನು ನೀವು ರೂಢಿಸಿಕೊಳ್ಳಬೇಕು. 

ಹೃದಯಾಘಾತ ತಪ್ಪಿಸುವ ಮಾರ್ಗಗಳು

1. ಆರೋಗ್ಯಕರ ಆಹಾರ ಸೇವಿಸಿ: ನಮ್ಮ ಹೃದಯದ ಆರೋಗ್ಯವು ನಮ್ಮ ಆಹಾರದ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ನೀವು ಹೃದಯಾಘಾತ ತಪ್ಪಿಸಲು ಬಯಸಿದರೆ ಪ್ಯಾಕೇಜ್ ಮಾಡಿದ ಆಹಾರ, ಸಂಸ್ಕರಿಸಿದ ಆಹಾರ, ಸಕ್ಕರೆ, ಕೆಂಪು ಮಾಂಸ ಮತ್ತು ಕರಿದ ಪದಾರ್ಥಗಳನ್ನು ಬಿಡಿ. ಇವುಗಳ ಬದಲಿಗೆ ನೀವು ಧಾನ್ಯಗಳು, ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಮೀನುಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸಿ.

ಇದನ್ನೂ ಓದಿ: ಮೂಲಂಗಿಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ 5 ವಿಷಯಗಳು ಇವು

2. ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ: ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಸಿಗರೇಟ್ ಮತ್ತು ಮದ್ಯ ಸೇವನೆಯ ಮಟ್ಟವು ಗಣನೀಯವಾಗಿ ಹೆಚ್ಚಾಗಿದೆ. ಇದರಿಂದಾಗಿ ಹೃದಯದ ಆರೋಗ್ಯವು ಗಮನಾರ್ಹವಾಗಿ ಹದಗೆಡುತ್ತಿದೆ. ನೀವು ಎಷ್ಟು ಬೇಗ ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುತ್ತಿರೋ ಅಷ್ಟು ಉತ್ತಮ. ಇಲ್ಲವಾದಲ್ಲಿ ಹೃದ್ರೋಗಕ್ಕೆ ಬಲಿಯಾಗಬಹುದು.

3. ದೈಹಿಕ ಚಟುವಟಿಕೆ ಹೆಚ್ಚಿಸಿ: ನೀವು ಕಚೇರಿಯಲ್ಲಿ ಕುಳಿತು 8 ರಿಂದ 10 ಗಂಟೆಗಳ ಕಾಲ ಕೆಲಸ ಮಾಡಿದರೆ, ಹೃದಯಾಘಾತದ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಅನೇಕ ಬಾರಿ ಜಿಮ್‌ಗೆ ಹೋಗಲು ನಮಗೆ ಸಮಯ ಸಿಗುವುದಿಲ್ಲ. ಎಷ್ಟೇ ಬ್ಯುಸಿ ಇದ್ದರೂ ದಿನಕ್ಕೆ 1 ಗಂಟೆ ವ್ಯಾಯಾಮಕ್ಕೆ ಸಮಯ ನೀಡಬೇಕು. ನೀವು ಮೆಟ್ಟಿಲು ಹತ್ತುವುದು ಮತ್ತು ವಾಕಿಂಗ್ ಕೂಡ ಮಾಡಬಹುದು. ನೀವು ಹೆಚ್ಚು ದೈಹಿಕ ಚಟುವಟಿಕೆ ಹೆಚ್ಚಿಸಿದರೆ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಕಡಿಮೆಯಾಗುತ್ತದೆ.

4. ಟೆನ್ಷನ್ ತೆಗೆದುಕೊಳ್ಳಬೇಡಿ: ಅಧ್ಯಯನದಿಂದ ಕೆಲಸದವರೆಗೆ ಒತ್ತಡದಿಂದಾಗಿ ವ್ಯಕ್ತಿಯ ಹೊರೆ ಹೆಚ್ಚಾಗುತ್ತದೆ. ಕೆಲವೊಮ್ಮೆ ಸಂಬಂಧಗಳಲ್ಲಿನ ವೈಫಲ್ಯವೂ ನಿಮ್ಮನ್ನು ಟೆನ್ಷನ್‌ಗೆ ತಳ್ಳಬಹುದು. ನೀವು ಹೃದಯಾಘಾತದ ಅಪಾಯದಿಂದ ಪಾರಾಗಲು ಬಯಸಿದರೆ, ಯಾವಾಗಲೂ ಸಂತೋಷವಾಗಿರುವ ಅಭ್ಯಾಸ ಬೆಳೆಸಿಕೊಳ್ಳಿ. ಅನಗತ್ಯವಾಗಿ ಅತಿಯಾದ ಆಲೋಚನೆಯನ್ನು ತಪ್ಪಿಸಿ.

ಇದನ್ನೂ ಓದಿ: ಕರಿಬೇವಿನ ನೀರನ್ನು ಪ್ರತಿದಿನ ಕುಡಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಸಲಹೆಗಳನ್ನು ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆದುಕೊಳ್ಳಿರಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News