ಹವಾಮಾನ ಬದಲಾಗುತ್ತಿದ್ದಂತೆಯೇ ನಿಂಬೆಹಣ್ಣು ಸೇವಿಸಿ ! ಈ ಸಮಸ್ಯೆಗಳು ಕಾಡುವುದಿಲ್ಲ

ಹವಾಮಾನ ಬದಲಾಗುತ್ತಿದ್ದಂತೆಯೇ ವೈರಲ್ ಸೋಂಕಿನ ಅಪಾಯ ಕೂಡಾ ಕಾಡತೊಡಗುತ್ತದೆ. ಹೀಗಿರುವಾಗ ಆರೋಗ್ಯ ಕಾಪಾಡಬೇಕಾದರೆ ಋತು ಬದಲಾಗುತ್ತಿದ್ದಂತೆಯೇ ನಿಂಬೆಯನ್ನು ಸೇವಿಸಬೇಕು. 

Written by - Ranjitha R K | Last Updated : Oct 5, 2023, 11:52 AM IST
  • ಬದಲಾಗುತ್ತಿರುವ ಋತುವಿನಲ್ಲಿ ನಿಂಬೆ ಸೇವಿಸಬೇಕು
  • ದೇಹಕ್ಕೆ ನಿಂಬೆ ಸೇವನೆಯ ಪ್ರಯೋಜನಗಳು
  • ಬದಲಾಗುತ್ತಿರುವ ಹವಾಮಾನದಲ್ಲಿ ನಿಂಬೆಯನ್ನು ಸೇವಿಸುವುದು ಹೇಗೆ
ಹವಾಮಾನ ಬದಲಾಗುತ್ತಿದ್ದಂತೆಯೇ ನಿಂಬೆಹಣ್ಣು ಸೇವಿಸಿ ! ಈ ಸಮಸ್ಯೆಗಳು ಕಾಡುವುದಿಲ್ಲ  title=

ಬೆಂಗಳೂರು : ನಿಂಬೆ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.   ಬದಲಾಗುತ್ತಿರುವ ಋತುಗಳಲ್ಲಿ ಇದರ ಸೇವನೆಯು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ ವೈರಲ್ ಸೋಂಕಿನ ಅಪಾಯವು ಹೆಚ್ಚಾಗಿರುತ್ತದೆ. ಇದರಿಂದಾಗಿ ಶೀತ, ಕೆಮ್ಮು, ಶೀತ ಮತ್ತು ಜ್ವರದಂತಹ ರೋಗಗಳು ಆಕ್ರಮಣಕ್ಕೆ ಇಳಿದು ಬಿಡುತ್ತವೆ. ಹೀಗಿರುವಾಗ ಆರೋಗ್ಯ ಕಾಪಾಡಬೇಕಾದರೆ  ಋತು ಬದಲಾಗುತ್ತಿದ್ದಂತೆಯೇ ನಿಂಬೆಯನ್ನು ಸೇವಿಸಬೇಕು.  

ನಿಂಬೆ ಸೇವನೆಯ ಪ್ರಯೋಜನಗಳು :
1. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ :

ನಿಂಬೆ ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಇದು ನಮ್ಮ ದೇಹದಲ್ಲಿ  ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬದಲಾಗುತ್ತಿರುವ ಋತುಗಳಲ್ಲಿ, ದೇಹಕ್ಕೆ ವಿಟಮಿನ್ ಸಿ ಅಗತ್ಯ ಕೂಡಾ ಹೆಚ್ಚಾಗಿರುತ್ತದೆ. ಏಕೆಂದರೆ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಈ ಋತುವಿನಲ್ಲಿ ನಿಂಬೆಹಣ್ಣು ಸೇವಿಸಿದರೆ, ರೋಗಗಳ ಅಪಾಯವು ಸಾಕಷ್ಟು ಕಡಿಮೆಯಾಗುತ್ತದೆ. 

ಇದನ್ನೂ ಓದಿ : ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳಲು ಈ ಬೀಜಗಳನ್ನು ತಿನ್ನಿ ! ಇದೇ ರೀತಿಯಲ್ಲಿ ಸೇವಿಸಿ

2. ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ :
ವಿಟಮಿನ್ ಸಿ ಜೊತೆಗೆ, ನಿಂಬೆ ಹಣ್ಣಿನಲ್ಲಿ ವಿಟಮಿನ್ ಎ ಕೂಡಾ ಇರುತ್ತದೆ.  ಇದು ನಮ್ಮ ಕಣ್ಣುಗಳಿಗೆ ಬಹಳ ಮುಖ್ಯವಾಗಿದೆ. ಇವು ಕಣ್ಣುಗಳಿಗೆ ಅಗತ್ಯವಾದ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ. ಇದರಿಂದ ದೃಷ್ಟಿ ಸುಧಾರಿಸುತ್ತದೆ. ಆದ್ದರಿಂದ, ಬದಲಾಗುತ್ತಿರುವ ಋತುವಿನಲ್ಲಿ ನಿಂಬೆ ಹಣ್ಣಿನ ಸೇವನೆಯು ಕಣ್ಣುಗಳಿಗೆ ಪ್ರಯೋಜನಕಾರಿಯಾಗಿದೆ.

3. ಹೃದಯದ ಆರೋಗ್ಯಕ್ಕೂ ಮುಖ್ಯ : 
ನಿಂಬೆಯು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಏಕೆಂದರೆ ಪೊಟ್ಯಾಸಿಯಮ್ ಸಹಾಯದಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಇದಲ್ಲದೆ, ನಿಂಬೆಯಲ್ಲಿ ಅಧಿಕ ಪ್ರಮಾಣದ ಫೈಬರ್ ಇರುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : Diabetes Control Tips: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ನಿಮ್ಮ ಡಯಟ್ನಲ್ಲಿರಲಿ ಈ 4 ಮಸಾಲೆಗಳು

ಬದಲಾಗುತ್ತಿರುವ ಹವಾಮಾನದಲ್ಲಿ ನಿಂಬೆಯನ್ನು ಸೇವಿಸುವುದು ಹೇಗೆ ? :
ನಿಂಬೆ ರಸವನ್ನು ಹೊರತೆಗೆಯುವ ಮೂಲಕ ಇದನ್ನು ಸೇವಿಸಲಾಗುತ್ತದೆ.  ಅದನ್ನು ನಿಂಬೆ ಶರಬತ್ತು, ನಿಂಬೆ ಚಟ್ನಿ, ಜೇನುತುಪ್ಪ ಅಥವಾ ಸಲಾಡ್ ರೂಪದಲ್ಲಿ ಬೆರೆಸಿ ಸೇವಿಸಬಹುದು. ಆದರೆ ನೆನಪಿರಲಿ ನಿಂಬೆಯನ್ನು ಅತಿಯಾಗಿ ಸೇವಿಸಬಾರದು. ಏಕೆಂದರೆ ವಿಟಮಿನ್ ಸಿ ಅಧಿಕವಾದರೆ ಹೊಟ್ಟೆಯ ಸಮಸ್ಯೆಗಳು ಉಂಟಾಗಬಹುದು. 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News