Health Tips: ಪ್ರತಿದಿನ ಇಷ್ಟು ಸಾವಿರ ಹೆಜ್ಜೆ ನಡೆದರೆ ಹಲವು ಕಾಯಿಲೆಗಳಿಂದ ಸಿಗುತ್ತೆ ರಕ್ಷಣೆ!

ಉತ್ತಮ ಆರೋಗ್ಯ ಸಲಹೆಗಳು: ನೀವು ದಿನಕ್ಕೆ ಕನಿಷ್ಠ 10 ಸಾವಿರ ಹೆಜ್ಜೆಗಳನ್ನು ನಡೆದರೆ, ನಿಮ್ಮ ದೇಹವು ಅಸಂಖ್ಯಾತ ಪ್ರಯೋಜನಗಳನ್ನು ಪಡೆಯುತ್ತದೆ. ಉತ್ತಮ ಆರೋಗ್ಯ ಹೊಂದಲು ದಿನಕ್ಕೆ ಎಷ್ಟು ಸಾವಿರ ಹೆಜ್ಜೆಗಳನ್ನು ನಡೆಯಬೇಕು ಅನ್ನೋದರ ಬಗ್ಗೆ ತಿಳಿಯಿರಿ.  

Written by - Puttaraj K Alur | Last Updated : Jul 3, 2023, 09:56 PM IST
  • ಇಂದು ಬಹುತೇಕರು ಯಾವುದೇ ದೈಹಿಕ ಶ್ರಮವಿಲ್ಲದ ಜೀವನಶೈಲಿಯನ್ನು ರೂಢಿಸಿಕೊಂಡಿರುತ್ತಾರೆ
  • ಕುಳಿತಲ್ಲಿಯೇ ಕುಳಿತು 8-9 ಗಂಟೆಗಳ ಕಾಲ ಕೆಲಸ ಮಾಡುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ
  • ದಿನಕ್ಕೆ ಕನಿಷ್ಠ 10 ಸಾವಿರ ಹೆಜ್ಜೆ ನಡೆದ್ರೆ ನಿಮ್ಮ ದೇಹಕ್ಕೆ ಅಸಂಖ್ಯಾತ ಪ್ರಯೋಜನಗಳಿವೆ
Health Tips: ಪ್ರತಿದಿನ ಇಷ್ಟು ಸಾವಿರ ಹೆಜ್ಜೆ ನಡೆದರೆ ಹಲವು ಕಾಯಿಲೆಗಳಿಂದ ಸಿಗುತ್ತೆ ರಕ್ಷಣೆ! title=
ನಡಿಗೆಯ ಆರೋಗ್ಯಕರ ಪ್ರಯೋಜನ

ನವದೆಹಲಿ: ಇಂದಿನ ಧಾವಂತದ ಜೀವನದಲ್ಲಿ ಪ್ರತಿಯೊಬ್ಬರೂ ಕೆಲಸದಿಂದ ವಿಪರಿತ ದಣಿದಿರುತ್ತಾರೆ. ಯಾವುದೇ ದೈಹಿಕ ಚಟುವಟಿಕೆ ಅಥವಾ ವಾಕಿಂಗ್ ಇಲ್ಲದೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ದಿನಕ್ಕೆ ಕನಿಷ್ಠ 10 ಸಾವಿರ ಹೆಜ್ಜೆಗಳನ್ನು ನಡೆದರೆ ನಿಮ್ಮ ದೇಹವು ಅಸಂಖ್ಯಾತ ಪ್ರಯೋಜನಗಳನ್ನು ಪಡೆಯುತ್ತದೆ. ಸಂಶೋಧನೆಯೊಂದರ ಪ್ರಕಾರ, ಪ್ರತಿದಿನ 10 ಸಾವಿರ ಹೆಜ್ಜೆಗಳ ನಡಿಗೆ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.  

ಪ್ರತಿದಿನ ಎಷ್ಟು ಸಾವಿರ ಹೆಜ್ಜೆ ನಡೆಯಬೇಕು?

ಇಂದಿನ ಯುಗದಲ್ಲಿ ಹೆಚ್ಚಿನ ಜನರು ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಅನೇಕರು 8-9 ಗಂಟೆ ಕಚೇರಿಯಲ್ಲಿ ಕಳೆಯುತ್ತಾರೆ. ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದುರಿಂದ ಅವರ ದೇಹದ ತೂಕವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಹೀಗಾಗಿ ನೀವು ತೂಕವನ್ನು ನಿಯಂತ್ರಿಸಬಯಸಿದ್ರೆ ಪ್ರತಿದಿನ 10,000 ಹೆಜ್ಜೆಗಳನ್ನು ನಡೆಯಬೇಕು.

ಇದನ್ನೂ ಓದಿ: Skin cancer: ದೇಹದ ಮೇಲಿನ ಮಚ್ಚೆ ನೀಡುತ್ತೆ ಚರ್ಮದ ಕ್ಯಾನ್ಸರ್‌ನ ಸೂಚನೆ

ಇಂದು ವಯೋವೃದ್ಧರಷ್ಟೇ ಅಲ್ಲ ಯುವಕರಲ್ಲೂ ಮಂಡಿ ನೋವಿನ ಸಮಸ್ಯೆ ಕಾಡುತ್ತಿದೆ. ಇದನ್ನು ನಿವಾರಿಸಲು ನೀವು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವೇಗದ ನಡಿಗೆಯನ್ನು ರೂಢಿಸಿಕೊಳ್ಳಬೇಕು. ಇದರಿಂದ ನಿಮ್ಮ ಕೀಲು ನೋವು ಕ್ರಮೇಣ ಕಡಿಮೆಯಾಗುತ್ತದೆ. ನಿಮ್ಮ ಕಚೇರಿ ಕೊಂಚ ಹತ್ತಿರದಲ್ಲಿದ್ದರೆ ನೀವು ಕಾಲ್ನಡಿಗೆಯಲ್ಲಿ ಹೋಗಬೇಕು. ಉತ್ತಮ ಆರೋಗ್ಯಕ್ಕಾಗಿ ನೀವು ಪ್ರತಿದಿನ 15 ನಿಮಿಷ ಬೆಳಗ್ಗೆ ವಾಕ್ ಮಾಡಬೇಕು.

ನೀವು ಪ್ರತಿದಿನ 10,000 ಹೆಜ್ಜೆಗಳನ್ನು ನಡೆದರೆ ನಿಮ್ಮ ಮೆದುಳು ಆರೋಗ್ಯಕರವಾಗಿರುತ್ತದೆ. ಇದರೊಂದಿಗೆ ನಿಮ್ಮ ಮನಸ್ಸು ಕೂಡ ಚುರುಕಾಗಲು ಪ್ರಾರಂಭಿಸುತ್ತದೆ. ನೀವು ಕೆಲಸದಿಂದ ಟೆನ್ಶನ್ ಆಗಿದ್ದರೆ ವಾಕ್ ಹೋಗುವುದು ಉತ್ತಮ. ಇದು  ನಿಮ್ಮ ಮನಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಒತ್ತಡವನ್ನು ತಕ್ಷಣವೇ ಕಡಿಮೆಯಾಗುತ್ತದೆ. ಇದರಿಂದ ನಿಮಗೆ ಹೊಸ ತಾಜಾತನವೂ ಸಿಗುತ್ತದೆ.  

ಇದನ್ನೂ ಓದಿ: Health Tips: ಈ ಆಯುರ್ವೇದ ಚೂರ್ಣ ಸೇವಿಸಿದರೆ, ಮಧುಮೇಹ ನಿಯಂತ್ರಣಕ್ಕೆ ಔಷಧಿ ಬೇಕಾಗಿಲ್ಲ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News