ಕಾರು ಅಪಘಾತದಲ್ಲಿ ಎಐಎಡಿಎಂಕೆ ಸಂಸದ ಎಸ್. ರಾಜೇಂದ್ರನ್ ನಿಧನ

ಎಸ್. ರಾಜೇಂದ್ರನ್ ತಮಿಳುನಾಡಿನ ವಿಲುಪುರಂ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Last Updated : Feb 23, 2019, 10:43 AM IST
ಕಾರು ಅಪಘಾತದಲ್ಲಿ ಎಐಎಡಿಎಂಕೆ ಸಂಸದ ಎಸ್. ರಾಜೇಂದ್ರನ್ ನಿಧನ title=

ಚೆನ್ನೈ:  ತಮಿಳುನಾಡಿನ ವಿಲುಪುರಂ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಎಐಎಡಿಎಂಕೆ ಸಂಸದ ಎಸ್. ರಾಜೇಂದ್ರನ್(63) ಮೃತಪಟ್ಟಿದ್ದಾರೆ.

ವಿಲ್ಲಾಪುರಂ ಕ್ಷೇತ್ರದ ಸಂಸದರಾಗಿದ್ದ ರಾಜೇಂದ್ರನ್ ತಮ್ಮ ಕ್ಷೇತ್ರದಿಂದ ತ್ರಿವೇಂಡ್ರಮ್ ಗೆ ಸಂಚರಿಸುತ್ತಿದ್ದ ವೇಳೆ ಕಾರು ಚಾಲಕ ಡಿವೈಡರ್ ಕಾರನ್ನು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ತಮಿಳು ಸಾಹಿತ್ಯದಲ್ಲಿ ಪದವಿ ಪಡೆದಿರುವ ರಾಜೇಂದ್ರನ್ ರಸಗೊಬ್ಬರ ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ವಿಲುಪುರಂ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದರು.
 

Trending News