UP Election 2022 : ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ : ರೈತರಿಗೆ ಉಚಿತ ವಿದ್ಯುತ್; ಹುಡುಗಿಯರಿಗೆ ಸ್ಕೂಟಿ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆಯಲ್ಲಿ ಬಿಜೆಪಿ ಉತ್ತರ ಪ್ರದೇಶದ ಜನತೆಗೆ ಹಲವು ದೊಡ್ಡ ಭರವಸೆಗಳನ್ನು ನೀಡಿದೆ.

Written by - Channabasava A Kashinakunti | Last Updated : Feb 8, 2022, 03:03 PM IST
  • BJP ಯುಪಿ ವಿಧಾನಸಭೆ ಚುನಾವಣೆ 2022 ಗಾಗಿ ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ
  • ಪ್ರಣಾಳಿಕೆಯಲ್ಲಿ ಬಿಜೆಪಿ ಉತ್ತರ ಪ್ರದೇಶದ ಜನತೆಗೆ ಹಲವು ದೊಡ್ಡ ಭರವಸೆ
  • 2017ರ ಚುನಾವಣಾ ಪ್ರಣಾಳಿಕೆಯಲ್ಲಿ 212 ನಿರ್ಣಯಗಳಿದ್ದು, ಶೇ.92ರಷ್ಟು ನಿರ್ಣಯಗಳು ಪೂರ್ಣ
UP Election 2022 : ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ : ರೈತರಿಗೆ ಉಚಿತ ವಿದ್ಯುತ್; ಹುಡುಗಿಯರಿಗೆ ಸ್ಕೂಟಿ! title=

ಲಕ್ನೋ : ಭಾರತೀಯ ಜನತಾ ಪಕ್ಷ (BJP) ಯುಪಿ ವಿಧಾನಸಭೆ ಚುನಾವಣೆ 2022 ಗಾಗಿ ಇಂದು ಚುನಾವಣಾ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆಯಲ್ಲಿ ಬಿಜೆಪಿ ಉತ್ತರ ಪ್ರದೇಶದ ಜನತೆಗೆ ಹಲವು ದೊಡ್ಡ ಭರವಸೆಗಳನ್ನು ನೀಡಿದೆ.

ಬಿಜೆಪಿಯ ಚುನಾವಣಾ ಪ್ರಣಾಳಿಕೆ(BJP Menifesto) ಬಿಡುಗಡೆ ಮಾಡಿದ ಸಂದರ್ಭದಲ್ಲಿ ಸಚಿವ ಅಮಿತ್ ಶಾ ಅವರು ಕೃಷಿ ಕ್ಷೇತ್ರದ ನೀರಾವರಿಗಾಗಿ ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಿದರು. ಇದರಿಂದ ರೈತರ ಮೇಲಿನ ಸಾಲದ ಹೊರೆ ಕಡಿಮೆಯಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರತಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಉದ್ಯೋಗ ಅಥವಾ ಸ್ವಯಂ ಉದ್ಯೋಗದ ಅವಕಾಶವನ್ನು ಒದಗಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಪ್ರತಿ ಜಿಲ್ಲೆಯಲ್ಲಿ ತರಬೇತಿಯನ್ನು ಏರ್ಪಡಿಸಲಾಗುವುದು ಎಂದರು.

ಇದನ್ನೂ ಓದಿ : Aadhaar Update: ಬಿಗ್ ನ್ಯೂಸ್! ಇನ್ಮುಂದೆ ಮಗು ಹುಟ್ಟಿದ ತಕ್ಷಣ ಸಿಗಲಿದೆ Aadhaar Card, UIDAI ನೀಡಿದ ಮಾಹಿತಿ ಇದು

ಯುವಕರ ತರಬೇತಿಗಾಗಿ ಪ್ರತಿ ಬ್ಲಾಕ್‌ನಲ್ಲಿ ಐಟಿಐ ಕಾಲೇಜು ಸ್ಥಾಪಿಸಲಾಗುವುದು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಪ್ರತಿ ವರ್ಷ ಹೋಳಿ ಮತ್ತು ದೀಪಾವಳಿಯಂದು 2 ಉಚಿತ ಎಲ್ಪಿಜಿ ಸಿಲಿಂಡರ್ ಗಳನ್ನು ನೀಡಲಾಗುವುದು. 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಪ್ರಯಾಣದ ಅವಕಾಶವಿದೆ. ವಿಧವೆಯರು ಮತ್ತು ನಿರ್ಗತಿಕ ಮಹಿಳೆಯರು ಪಡೆಯುವ ಪಿಂಚಣಿಯನ್ನು 1,500 ರೂ.ಗೆ ಹೆಚ್ಚಿಸಲಾಗುವುದು.

14 ದಿನಗಳೊಳಗೆ ಕಬ್ಬು ಬೆಳೆಗಾರನಿಗೆ ಹಣ(Money) ಪಾವತಿಯಾಗದಿದ್ದರೆ ಸಕ್ಕರೆ ಕಾರ್ಖಾನೆಯವರು ರೈತರಿಗೆ ಬಡ್ಡಿ ಕೊಡುವ ಕಾನೂನು ರೂಪಿಸಿ ಅಂತಹ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅಗ್ರಿ ಇನ್ಫ್ರಾಸ್ಟ್ರಕ್ಚರ್ ಮಿಷನ್ ರಚಿಸಲಾಗುವುದು. ಇದರಿಂದ ರೈತರು ತಮ್ಮ ಉತ್ಪನ್ನಗಳ ಶ್ರೇಣಿಗೆ ಅನುಗುಣವಾಗಿ ಹೆಚ್ಚಿನ ಬೆಲೆಯನ್ನು ಪಡೆಯಬಹುದು.

ಯುವಕರಿಗೆ 2 ಕೋಟಿ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ನೀಡುವ ಭರವಸೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಜಿಮ್ ಮತ್ತು ಆಟದ ಮೈದಾನವನ್ನು ಸ್ಥಾಪಿಸಲಾಗುವುದು. ಶಾಲಾ-ಕಾಲೇಜುಗಳಲ್ಲಿ ಯೋಗ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಲಾಗುವುದು. ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ದೇವಬಂದ್‌ನಲ್ಲಿ ಭಯೋತ್ಪಾದನಾ ವಿರೋಧಿ ಕಮಾಂಡೋ ಕೇಂದ್ರವನ್ನು ನಿರ್ಮಿಸಲಾಗುವುದು. ಮೀರತ್, ರಾಂಪುರ, ಅಜಂಗಢ, ಕಾನ್ಪುರ ಮತ್ತು ಬಹ್ರೈಚ್‌ಗಳಲ್ಲಿ ಭಯೋತ್ಪಾದನಾ ನಿಗ್ರಹ ಕಮಾಂಡೋ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ(Amit Shah), 5 ವರ್ಷಗಳ ಹಿಂದಿನ ದೃಶ್ಯ ಇಂದು ನನಗೆ ನೆನಪಿದೆ ಎಂದು ಹೇಳಿದ್ದಾರೆ. ಇದು ಸ್ಥಳವಾಗಿತ್ತು, ಆಗ ಬಿಜೆಪಿಯವರು ಸಾರ್ವಜನಿಕರ ಮುಂದೆ ಚುನಾವಣಾ ಪ್ರಣಾಳಿಕೆ ಇಟ್ಟಿದ್ದರು. ಆಗ ನಾನು ಪಕ್ಷದ ಅಧ್ಯಕ್ಷನಾಗಿದ್ದೆ. 2017ರಲ್ಲಿ ಯುಪಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು 2014ರಲ್ಲಿಯೇ ಸಾರ್ವಜನಿಕರು ಹೇಳಿದ್ದರು. 2014ರಲ್ಲಿ ಬಿಜೆಪಿ 80ರಲ್ಲಿ 73ರಲ್ಲಿ ಗೆದ್ದಿದ್ದರೆ, 2017ರಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು.

ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯಾಗಿದೆ ಎಂದರು. ಇಂದು ರಾಜಕೀಯದಲ್ಲಿ ಅಪರಾಧಿಗಳಿಗೆ ಸ್ಥಾನವಿಲ್ಲ. ಅಪರಾಧ ಮುಕ್ತ ಮಾಡುವ ಕೆಲಸವನ್ನು ಸಿಎಂ ಯೋಗಿ ಮಾಡಿದ್ದಾರೆ. ಆಡಳಿತದಲ್ಲಿ ರಾಜಕೀಯ ಮಾಡುವುದನ್ನು ಸಿಎಂ ಯೋಗಿ ಅವರು ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Viral Video: ಹೆಂಡತಿಗೆ ಬಸ್ ಹತ್ತಿಸಲು ಗಂಡ ಏನು ಮಾಡಿದ್ದಾನೆ ನೋಡಿ..!

2017ರ ಚುನಾವಣಾ ಪ್ರಣಾಳಿಕೆ(BJP 2017 Menifesto)ಯಲ್ಲಿ 212 ನಿರ್ಣಯಗಳಿದ್ದು, ಶೇ.92ರಷ್ಟು ನಿರ್ಣಯಗಳು ಪೂರ್ಣಗೊಲಿಸಿದ್ದೇವೆ ಎಂದರು. ಈ ಬಾರಿಯೂ ಸಿಎಂ ಯೋಗಿ ನೇತೃತ್ವದಲ್ಲಿ ಯುಪಿಯಲ್ಲಿ ಬಿಜೆಪಿ ಬಹುಮತದ ಸರ್ಕಾರ ರಚಿಸಲಿದೆ. ರೈತರ ಖಾತೆಗೆ ಪ್ರತಿ ವರ್ಷ 6 ಸಾವಿರ ರೂಪಾಯಿ ಜಮಾ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಇನ್ನೊಂದೆಡೆ ಸರ್ಕಾರ ರಚನೆಯಾದ ಎರಡೇ ತಿಂಗಳಲ್ಲಿ ಸಣ್ಣ ಮತ್ತು ಮಧ್ಯಮ ರೈತರ 86 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಕೆಲಸವನ್ನು ಸಿಎಂ ಯೋಗಿ ಮಾಡಿದ್ದಾರೆ.

ಐದು ವರ್ಷಗಳ ಹಿಂದೆ ಉತ್ತರ ಪ್ರದೇಶವನ್ನು ಗಲಭೆ ಆಯೋಗದ ರಾಜ್ಯವೆಂದು ಪರಿಗಣಿಸಲಾಗಿತ್ತು. ಸಹೋದರಿಯರು ಮತ್ತು ಹೆಣ್ಣುಮಕ್ಕಳು ಸುರಕ್ಷಿತವಾಗಿರಲಿಲ್ಲ. ಬಿಜೆಪಿ ಸರ್ಕಾರದ ಐದು ವರ್ಷಗಳಲ್ಲಿ ರಾಜ್ಯದ ಅಪರಾಧಿಗಳು ವಲಸೆ ಹೋಗಿದ್ದಾರೆ. ಡಕಾಯಿತಿ ಪ್ರಕರಣಗಳಲ್ಲಿ ಶೇ.57 ರಷ್ಟು ಕಡಿಮೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಶೇ.42ರಷ್ಟು ಇಳಿಕೆಯಾಗಿದೆ. 2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಕ್ರಿಮಿನಲ್‌ಗಳಿಂದ ವಶಪಡಿಸಿಕೊಂಡಿದೆ ಎಂದು ತಿಳಿಸಿದರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News