ತನಗಿಷ್ಟವಾದ ಊಟ ಬಡಿಸಲಿಲ್ಲ ಅಂತ ಸಹೋದರಿಗೇ ಗುಂಡಿಕ್ಕಿದ! ಮುಂದೆ...?

ತನಗಿಷ್ಟವಾದ ಊಟ ಬಡಿಸಲಿಲ್ಲ ಎಂಬ ಕಾರಣಕ್ಕೆ ಸಹೋದರನೇ ತನ್ನ ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ.

Last Updated : Sep 3, 2019, 03:35 PM IST
ತನಗಿಷ್ಟವಾದ ಊಟ ಬಡಿಸಲಿಲ್ಲ ಅಂತ ಸಹೋದರಿಗೇ ಗುಂಡಿಕ್ಕಿದ! ಮುಂದೆ...? title=

ಲಖಿಂಪುರ್ ಖೇರಿ: ತನಗಿಷ್ಟವಾದ ಊಟ ಬಡಿಸಲಿಲ್ಲ ಎಂಬ ಕಾರಣಕ್ಕೆ ಸಹೋದರನೇ ತನ್ನ ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದಿದೆ.

ಇಲ್ಲಿನ ಮೊಹಮ್ಮದಿ ಪೊಲೀಸ್ ಠಾಣೆಯ ವ್ಯಾಪಿಯಲ್ಲಿ ಈ ಘಟನೆ ನಡೆದಿದ್ದು, ಎರಡು ದಿನಗಳ ಹಿಂದೆ ತನ್ನ ಅತ್ತೆಯ ಸೋದರ ಸಂಬಂಧಿ ಸುಮನ್ ಎಂಬ ಹುಡುಗಿ, ತನ್ನ ಸೋದರ ಸಂಬಂಧಿ ಸೋನುಗೆ ಊಟ ನೀಡಿದ್ದಳು. ಆದರೆ, ಆತನಿಗೆ ಅದು ಇಷ್ಟವಿಲ್ಲದ ಕಾರಣ ಇಬ್ಬರ ನಡುವಿನ ಮಾತು ವಾಗ್ವಾದಕ್ಕೆ ತಿರುಗಿ, ಮನೆಯಲೇ ಇದ್ದ ತನ್ನ ತಂದೆಯ ಲೈಸನ್ಸ್ ಇರುವ ಬಂದೂಕನ್ನು ತೆಗೆದುಕೊಂಡು ಸೋದರಿಯ ತಲೆಗೆ ಗುಂಡು ಹಾರಿಸಿದ ಪರಿಣಾಮ ಆಕೆ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾಳೆ. 

ಮೃತ ಸುಮನ್ ಸುಮಾರು ಒಂದು ವರ್ಷದ ಹಿಂದೆ ತಿಲ್ಹಾರ್ ಎಂಬವರನ್ನು ವಿವಾಹವಾಗಿದ್ದಳು. ಕೆಲವು ವರ್ಷಗಳ ಹಿಂದೆ ಈಕೆಯ ತಂದೆ ಸಾವನ್ನಪ್ಪಿದ ಬಳಿಕ ಸಮನ್ ತನ್ನ ಸೋದರಸಂಬಂಧಿಯನ್ನು ತನ್ನ ನಿಜವಾದ ಸಹೋದರನಂತೆಯೇ ನೋಡಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಆದರೆ ಈತ ಆಕೆಯನ್ನು ಹತ್ಯೆ ಮಾಡುವಷ್ಟು ಕಟುಕನಾಗುತ್ತಾನೆ ಎಂದು ಯಾರೂ ಭಾವಿಸಿರಲಿಲ್ಲ. ಘಟನೆಯ ಬಳಿಕ ಆರೋಪಿ ಸೋನು ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Trending News