ಇಂದಿನಿಂದ ಕಾಂಗ್ರೆಸ್‌ ಚಿಂತನ ಶಿಬಿರ ಆರಂಭ.. ರಾಹುಲ್‌ ಗಾಂಧಿಗೆ ಒಲಿಯುತ್ತಾ ಅಧ್ಯಕ್ಷ ಪಟ್ಟ!?

ಹಲವು ರಾಜ್ಯಗಳ ಚುನಾವಣೆ ಸೋಲಿನ ನಂತರ ಬಿಕ್ಕಟ್ಟು ಎದುರಿಸುತ್ತಿರುವ ಕಾಂಗ್ರೆಸ್‌ನ ಉನ್ನತ ನಾಯಕರು ಸೇರಿದಂತೆ 400 ಕ್ಕೂ ಹೆಚ್ಚು ಪದಾಧಿಕಾರಿಗಳು ಇಂದಿನಿಂದ (ಶುಕ್ರವಾರ) ರಾಜಸ್ಥಾನದಲ್ಲಿ ಪಕ್ಷವನ್ನು ಮತ್ತೆ ಬಲಿಷ್ಠಗೊಳಿಸಲು ತಂತ್ರಗಳನ್ನು ಹೆಣೆಯಲಿದ್ದಾರೆ. 

Written by - Chetana Devarmani | Last Updated : May 13, 2022, 10:18 AM IST
  • ಇಂದಿನಿಂದ ಕಾಂಗ್ರೆಸ್‌ ಚಿಂತನ ಶಿಬಿರ ಆರಂಭ
  • 400 ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗಿ
  • ರಾಹುಲ್‌ ಗಾಂಧಿಗೆ ಒಲಿಯುತ್ತಾ ಅಧ್ಯಕ್ಷ ಪಟ್ಟ!?
ಇಂದಿನಿಂದ ಕಾಂಗ್ರೆಸ್‌ ಚಿಂತನ ಶಿಬಿರ ಆರಂಭ.. ರಾಹುಲ್‌ ಗಾಂಧಿಗೆ ಒಲಿಯುತ್ತಾ ಅಧ್ಯಕ್ಷ ಪಟ್ಟ!?  title=
ರಾಹುಲ್‌ ಗಾಂಧಿ

ನವದೆಹಲಿ: ಹಲವು ರಾಜ್ಯಗಳ ಚುನಾವಣೆ ಸೋಲಿನ ನಂತರ ಬಿಕ್ಕಟ್ಟು ಎದುರಿಸುತ್ತಿರುವ ಕಾಂಗ್ರೆಸ್‌ನ ಉನ್ನತ ನಾಯಕರು ಸೇರಿದಂತೆ 400 ಕ್ಕೂ ಹೆಚ್ಚು ಪದಾಧಿಕಾರಿಗಳು ಇಂದಿನಿಂದ (ಶುಕ್ರವಾರ) ರಾಜಸ್ಥಾನದಲ್ಲಿ ಪಕ್ಷವನ್ನು ಮತ್ತೆ ಬಲಿಷ್ಠಗೊಳಿಸಲು ತಂತ್ರಗಳನ್ನು ಹೆಣೆಯಲಿದ್ದಾರೆ. ಉದಯಪುರದಲ್ಲಿ ಮೂರು ದಿನಗಳ ಕಾಲ ಮಂಥನ ನಡೆಯಲಿದೆ. ಇದಕ್ಕಾಗಿ ಚಿಂತನ ಶಿಬಿರ ಆಯೋಜಿಸಲಾಗಿದೆ. ಆದರೆ ಇದಕ್ಕೂ ಮುನ್ನವೇ ರಾಹುಲ್ ಗಾಂಧಿ ಅವರನ್ನು ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಬೇಕೆಂದು ನಾಯಕರು ಆಗ್ರಹಿಸುತ್ತಿದ್ದಾರೆ.

ರಾಹುಲ್ ಗಾಂಧಿ ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರಾ?

ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ. ಚುನಾವಣೆ ನೆಪ ಮಾತ್ರವಾಗಲಿದೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪಕ್ಷವು ಚಿಂತನ ಶಿಬಿರವನ್ನು ಆಯೋಜಿಸುತ್ತಿದೆ. ಈ ಚಿಂತನಾ ಶಿಬಿರದಲ್ಲಿ, 2024 ರ ಲೋಕಸಭೆ ಚುನಾವಣೆ ಯಾರ ನಾಯಕತ್ವದಲ್ಲಿ ಸ್ಪರ್ಧಿಸಲಿದೆ ಎಂಬುದಕ್ಕೆ ಕಾಂಗ್ರೆಸ್‌ನ ಭವಿಷ್ಯದ ಅಧ್ಯಕ್ಷರ ಚಿತ್ರಣವೂ ಸ್ಪಷ್ಟವಾಗುತ್ತದೆ. ಆದರೆ, ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಆದರೆ ಮೇ 9 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ದೊಡ್ಡ ನಾಯಕರು ರಾಹುಲ್ ಗಾಂಧಿ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದ್ದರು.

ಇದನ್ನೂ ಓದಿ:ಸಿಬಿಐನವರಂತೆ ನಟಿಸಿ ಕೋಟಿಗಟ್ಟಲೇ ಹಣಕ್ಕೆ ಬೇಡಿಕೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಪ್ಪ-ಮಗ!

ಚಿಂತನ ಶಿಬಿರದಲ್ಲಿ ವಿಶೇಷ ಕಾರ್ಯತಂತ್ರ:

ಪಕ್ಷದಲ್ಲಿ ‘ಕಾಲಮಿತಿ ಮತ್ತು ಅಗತ್ಯ ಬದಲಾವಣೆ’ಗಳನ್ನು ಮಾಡುವುದು, ‘ಧ್ರುವೀಕರಣದ ರಾಜಕೀಯ’ ಸೇರಿದಂತೆ ವಿವಿಧ ವಿಷಯಗಳಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಪರಿಣಾಮಕಾರಿಯಾಗಿ ಎದುರಿಸುವುದು ಮತ್ತು ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧರಾಗುವ ವಿಚಾರಗಳಿಗೆ ಚಿಂತನ ಶಿಬಿರದಲ್ಲಿ ಹೆಚ್ಚು ಒತ್ತು ಕೊಡಲಾಗುವುದ. ಮೇ 13-15ರಂದು ಉದಯಪುರದಲ್ಲಿ ನಡೆಯಲಿರುವ ಈ ‘ಚಿಂತನ ಶಿಬಿರ’ದ ನಂತರ ಬಿಡುಗಡೆಯಾಗಲಿರುವ ‘ನವ ಸಂಕಲ್ಪ’ ದಾಖಲೆ ಕ್ರಿಯಾಶೀಲ ಘೋಷಣೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಷ್ಟ್ರಮಟ್ಟದಲ್ಲಿ ಮೈತ್ರಿಗೆ ‘ಬಲವಾದ ಕಾಂಗ್ರೆಸ್’ ಅಗತ್ಯ ಎಂಬ ಸಂದೇಶವನ್ನೂ ಇದರಲ್ಲಿ ನೀಡಲಾಗುವುದು.

ಈ ವಿಷಯಗಳ ಕುರಿತು ಚಿಂತನ ಶಿಬಿರದಲ್ಲಿ ಚರ್ಚೆ ನಡೆಯಲಿದೆ

ಈಗಾಗಲೇ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರ ಮಟ್ಟ ಬದಲಾವಣೆ ಕುರಿತು ಈ ಶಿಬಿರದಲ್ಲಿ ಚರ್ಚೆ ನಡೆಯದಿರಬಹುದು ಎಂದು ಮೂಲಗಳು ತಿಳಿಸಿವೆ. ಈ ಚಿಂತನ ಶಿಬಿರದಲ್ಲಿ ರಾಜಕೀಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರ್ಥಿಕತೆ, ಸಂಘಟನೆ, ರೈತರು ಮತ್ತು ಕೃಷಿ ಮತ್ತು ಯುವಜನತೆಗೆ ಸಂಬಂಧಿಸಿದ ವಿಷಯಗಳ ಕುರಿತು ಆರು ಗುಂಪುಗಳಲ್ಲಿ 430 ನಾಯಕರು ಚರ್ಚೆ ನಡೆಸಲಿದ್ದಾರೆ, ಅಂದರೆ ಪ್ರತಿ ಗುಂಪಿನಲ್ಲಿ ಸುಮಾರು 70 ನಾಯಕರು ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:Employee Pension Scheme : ಪಿಂಚಣಿ ಬಗ್ಗೆ ಮಹತ್ವದ ಸುದ್ದಿ : ಇಪಿಎಸ್‌ನಿಂದ ಬಿಗ್ ಅಪ್‌ಡೇಟ್!

  • ಮೇ 13 ಚಿಂತನ ಶಿಬಿರದ ಮೊದಲ ದಿನ
  • ಎಲ್ಲಾ ಪ್ರತಿನಿಧಿಗಳು ಮಧ್ಯಾಹ್ನ 12 ಗಂಟೆಗೆ ಶಿಬಿರದ ಸ್ಥಳದಲ್ಲಿ ಸೇರುತ್ತಾರೆ.
  • 1 ಗಂಟೆಗೆ ಊಟದ ವಿರಾಮ ಇರುತ್ತದೆ.
  • 2 ಗಂಟೆಗೆ ಕಾಂಗ್ರೆಸ್ ಅಧ್ಯಕ್ಷರು ಆಗಮಿಸಲಿದ್ದಾರೆ.
  • 2.04 ರಂದು ಸಂಘಟನಾ ಸಮಿತಿ ಅಧ್ಯಕ್ಷರು ಸ್ವಾಗತಿಸುವರು.
  • 2.06ಕ್ಕೆ ಸ್ವಾಗತ ಭಾಷಣ ನಡೆಯಲಿದೆ.
  • ಮಧ್ಯಾಹ್ನ 2.10ಕ್ಕೆ ಕಾಂಗ್ರೆಸ್ ಅಧ್ಯಕ್ಷರ ಉದ್ಘಾಟನಾ ಭಾಷಣ ನಡೆಯಲಿದೆ.
  • ಮಧ್ಯಾಹ್ನ 3 ಗಂಟೆಗೆ ಗುಂಪು ಚರ್ಚೆ ನಡೆಯಲಿದೆ.
  • ಮೇ 14  ಚಿಂತನ ಶಿಬಿರ ಎರಡನೇ ದಿನ
  • ಗುಂಪು ಚರ್ಚೆ ಬೆಳಗ್ಗೆ 10.30ರಿಂದ ಆರಂಭವಾಗಲಿದೆ.
  • 1.00 ಕ್ಕೆ ಊಟದ ವಿರಾಮ ಇರುತ್ತದೆ.
  • 2.30ರಿಂದ 7.30ರವರೆಗೆ ಗುಂಪು ಚರ್ಚೆ ನಡೆಯಲಿದೆ.
  • ರಾತ್ರಿ 8.00 ಗಂಟೆಗೆ 6 ಸಮನ್ವಯ ಸಮಿತಿಗಳ ಸಮನ್ವಯಾಧಿಕಾರಿಗಳ ಸಭೆ ನಡೆಯಲಿದೆ.
  • ಮೇ 15 ಚಿಂತನ ಶಿಬಿರದ ಮೂರನೇ ಮತ್ತು ಅಂತಿಮ ದಿನ
  • ಭಾಗವಹಿಸುವವರೆಲ್ಲರೂ ಮಧ್ಯಾಹ್ನ 2.30 ಕ್ಕೆ ಚಿಂತನ ಶಿಬಿರದ ಸ್ಥಳದಲ್ಲಿ ಸೇರುತ್ತಾರೆ.
  • 3.00 ಕ್ಕೆ ಅಂದಿನ ಕಾಂಗ್ರೆಸ್ ಅಧ್ಯಕ್ಷರಿಂದ ಸಮಾರೋಪ ಭಾಷಣ ನಡೆಯಲಿದೆ. ಇದರೊಂದಿಗೆ ಕಾಂಗ್ರೆಸ್ ಅಧ್ಯಕ್ಷರ ಭಾಷಣವೂ ನಡೆಯಲಿದೆ.
  • ಧನ್ಯವಾದವನ್ನು ರಾಜಸ್ಥಾನ ಪಿಸಿಸಿ ಮುಖ್ಯಸ್ಥರು ನೀಡಲಿದ್ದಾರೆ.
  • ಸಂಜೆ 4.15ಕ್ಕೆ ರಾಷ್ಟ್ರಗೀತೆಯೊಂದಿಗೆ ನವ ಸಂಕಲ್ಪ ಶಿಬಿರ ಮುಕ್ತಾಯವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News