"ನಮಗೆ ಹಿಂದುತ್ವದ ಪಾಠ ಕಲಿಸಬೇಡಿ, ಅದಕ್ಕೆ ನೀವು ಅರ್ಹರಲ್ಲ"

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ (ಮಾರ್ಚ್ 3, 2021) ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಹಿಂದುತ್ವದ ಬಗ್ಗೆ ತಮಗೆ ಪಾಠ ಕಲಿಸಬಾರದು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

Last Updated : Mar 4, 2021, 08:32 AM IST
  • "ಗಡಿಯಲ್ಲಿ ನಿರ್ಮಿಸಬೇಕಿದ್ದ ಮುಳ್ಳುತಂತಿ ಬೇಲಿ, ರೈತರು ಮತ್ತು ದೆಹಲಿಯ ನಡುವೆ ನಿರ್ಮಿಸಲಾಗಿತ್ತು ... ಅಲ್ಲಿ (ಗಡಿಯುದ್ದಕ್ಕೂ) ಅಂತಹ ವ್ಯವಸ್ಥೆಯನ್ನು ಮಾಡಿದ್ದರೆ ಚೀನಾ ಒಳನುಗ್ಗುತ್ತಿರಲಿಲ್ಲ"
  • ನೀವು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಸರ್ಕಾರವನ್ನು ರಚಿಸಿದ್ದೀರಿ ... ನೀವು ಅವರೊಂದಿಗೆ ಅಧಿಕಾರವನ್ನು ಹಂಚಿಕೊಂಡಿದ್ದೀರಿ. ಆಗ ನಿಮ್ಮ ಹಿಂದುತ್ವವು ಭ್ರಷ್ಟವಾಗಲಿಲ್ಲವೇ?
"ನಮಗೆ ಹಿಂದುತ್ವದ ಪಾಠ ಕಲಿಸಬೇಡಿ, ಅದಕ್ಕೆ ನೀವು ಅರ್ಹರಲ್ಲ" title=
file photo

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ (ಮಾರ್ಚ್ 3, 2021) ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಹಿಂದುತ್ವದ ಬಗ್ಗೆ ತಮಗೆ ಪಾಠ ಕಲಿಸಬಾರದು ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

'ನೀವು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಸರ್ಕಾರವನ್ನು ರಚಿಸಿದ್ದೀರಿ ... ನೀವು ಅವರೊಂದಿಗೆ ಅಧಿಕಾರವನ್ನು ಹಂಚಿಕೊಂಡಿದ್ದೀರಿ. ಆಗ ನಿಮ್ಮ ಹಿಂದುತ್ವವು ಭ್ರಷ್ಟವಾಗಲಿಲ್ಲವೇ? ಸ್ಥಳಾಂತರಗೊಂಡ ಎಷ್ಟು ಕಾಶ್ಮೀರಿ ಪಂಡಿತರಿಗೆ ಮನೆಗಳು ಸಿಕ್ಕವು? ಹಿಂದುತ್ವದ ಬಗ್ಗೆ ನಮಗೆ ಕಲಿಸಬೇಡಿ, ಅದನ್ನು ಮಾಡಲು ನಿಮಗೆ ಅರ್ಹತೆ ಇಲ್ಲ" ಎಂದು ಹೇಳಿದರು.ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಬಜೆಟ್ ಅಧಿವೇಶನದ ಮೂರನೇ ದಿನದ ಸಂದರ್ಭದಲ್ಲಿ ಠಾಕ್ರೆ (Uddhav Thackeray) ಬಿಜೆಪಿ ವಿರುದ್ಧ  ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ವಿಚಾರವಾಗಿ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದೇನು?

ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವ ಭರವಸೆಯನ್ನು ಬಿಜೆಪಿ ಉಳಿಸಿಕೊಳ್ಳಲಿಲ್ಲ ,ಅಂದಿನ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ಕೊಠಡಿಯಲ್ಲಿ (ಠಾಕ್ರೆ ನಿವಾಸದಲ್ಲಿ) ಚರ್ಚಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು."ಇದು ಬಾಲಾಸಾಹೇಬನ ಮೇಲಿನ ನಿಮ್ಮ ಪ್ರೀತಿಯೇ? ನಾವು ಆ ಕೊಠಡಿಯನ್ನು ಕೋಣೆಯೆಂದು ಪರಿಗಣಿಸುವುದಿಲ್ಲ, ಆದರೆ ಇದು ದೇವಾಲಯವಾಗಿದೆ" ಎಂದು ಅವರು ಹೇಳಿದರು.

2019 ರ ವಿಧಾನಸಭಾ ಚುನಾವಣೆಯ ನಂತರ ಶಿವಸೇನೆ ಬಿಜೆಪಿಯಿಂದ ಪ್ರತ್ಯೇಕವಾಗಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗಿನ ಮೈತ್ರಿಕೂಟದ ಅಡಿಯಲ್ಲಿ 'ಮಹಾ ವಿಕಾಸ್ ಅಘಾಡಿ' ಸರ್ಕಾರವನ್ನು ರಚಿಸಿತು.ಇದೇ ವೇಳೆ ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರದ ಗಮನ ಸೆಳೆದರು.

ಇದನ್ನೂ ಓದಿ: Uddhav Thackeray: ಮತ್ತೆ ಕನ್ನಡಿಗರ ಸ್ವಾಭಿಮಾನ ಕೆಣಕಿದ ಮಹಾ ಸಿಎಂ ಉದ್ಧವ್ ಠಾಕ್ರೆ..!

"ಗಡಿಯಲ್ಲಿ ನಿರ್ಮಿಸಬೇಕಿದ್ದ ಮುಳ್ಳುತಂತಿ ಬೇಲಿ, ರೈತರು ಮತ್ತು ದೆಹಲಿಯ ನಡುವೆ ನಿರ್ಮಿಸಲಾಗಿತ್ತು ... ಅಲ್ಲಿ (ಗಡಿಯುದ್ದಕ್ಕೂ) ಅಂತಹ ವ್ಯವಸ್ಥೆಯನ್ನು ಮಾಡಿದ್ದರೆ ಚೀನಾ ಒಳನುಗ್ಗುತ್ತಿರಲಿಲ್ಲ" ಎಂದು ಅವರು ಹೇಳಿದರು.ರೈತರು ತಮ್ಮ ಆದಾಯವು ಭರವಸೆಯಂತೆ ದ್ವಿಗುಣಗೊಳ್ಳಲು ಕಾಯುತ್ತಿದ್ದಾರೆ ಆದರೆ ಅದು ಸಂಭವಿಸಿಲ್ಲ" ಎಂದು ಅವರು ಹೇಳಿದರು. "ಬದಲಿಗೆ, ಇಂಧನ ಬೆಲೆಗಳು ದ್ವಿಗುಣಗೊಂಡಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Uddhav Thackeray: 'ಕರ್ನಾಟಕ-ಮಹಾರಾಷ್ಟ್ರ ಗಡಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ

ಹಿಂದುತ್ವದ ಪ್ರತಿಪಾದಕ ವಿನಾಯಕ್ ದಾಮೋದರ್ ಸಾವರ್ಕರ್ ಅವರಿಗೆ ಭಾರತ್ ರತ್ನವನ್ನು ಏಕೆ ನೀಡಿಲ್ಲ ಎಂದು ಠಾಕ್ರೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು."ಸಾವರ್ಕರ್ ಅವರಿಗೆ ಭಾರತ್ ರತ್ನವನ್ನು ಕೋರಿ ಎರಡು ಬಾರಿ (ಕೇಂದ್ರಕ್ಕೆ) ಪತ್ರಗಳನ್ನು ಕಳುಹಿಸಲಾಗಿದೆ. ಭಾರತ ರತ್ನವನ್ನು ಯಾರು ನೀಡುತ್ತಾರೆ? ಇದು ಪ್ರಧಾನಿ ಮತ್ತು ಸಮಿತಿಯ ಹಕ್ಕು" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News