ಮಧ್ಯಪ್ರದೇಶದಲ್ಲಿ ಇಂದಿನಿಂದ ರೈತರ ಚಳುವಳಿ, ಹಾಲು-ಹಣ್ಣು-ತರಕಾರಿಗಳ ಸರಬರಾಜು ಸ್ಥಗಿತ ಸಾಧ್ಯತೆ

ಭಾರತೀಯ ರೈತರ ಸಂಘವು ಮೇ 29 ರಿಂದ 31 ರವರೆಗೆ ರೈತರ ಚಳುವಳಿ ನಡೆಸಲಿದೆ. ಅದರ ನಂತರ ಭಾರತೀಯ ರೈತರ ಒಕ್ಕೂಟವು ಜೂನ್ 1 ರಿಂದ ಜೂನ್ 5 ರವರೆಗೆ ಮುಷ್ಕರ ಕೈಗೊಳ್ಳಲಿದೆ. ಈ ಸಮಯದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ತರುವುದನ್ನು ಕಟ್ಟುನಿಟ್ಟಾಗಿ ನಿರಾಕರಿಸಿದರು. ಇಂತಹ ಪರಿಸ್ಥಿತಿಯಲ್ಲಿ, ಈ ಚಳವಳಿಯಿಂದ ಹಾಲು ಮತ್ತು ತರಕಾರಿಗಳ ಪೂರೈಕೆಯ ಮೇಲೆ ಪರಿಣಾಮ ಬೀರಬಹುದೆಂದು ನಿರೀಕ್ಷಿಸಲಾಗಿದೆ.

Last Updated : May 29, 2019, 10:50 AM IST
ಮಧ್ಯಪ್ರದೇಶದಲ್ಲಿ ಇಂದಿನಿಂದ ರೈತರ ಚಳುವಳಿ, ಹಾಲು-ಹಣ್ಣು-ತರಕಾರಿಗಳ ಸರಬರಾಜು ಸ್ಥಗಿತ ಸಾಧ್ಯತೆ title=
File Image

ಭೋಪಾಲ್: ಮಧ್ಯಪ್ರದೇಶ ಕೃಷಿ ಸಚಿವ ಸಚಿನ್ ಯಾದವ್ ನೀಡಿದ ಭರವಸೆಗಳ ಹೊರತಾಗಿಯೂ, ರೈತರ ಮೂರು ದಿನಗಳ ಚಳವಳಿಗೆ ಭಾರತೀಯ ರೈತ ಒಕ್ಕೂಟ ಕರೆ ನೀಡಿದ್ದು, ಆ ಚಳುವಳಿ ಇಂದಿನಿಂದ ಆರಂಭವಾಗಲಿದೆ. ಭಾರತೀಯ ರೈತರ ಸಂಘವು ಮೇ 29 ರಿಂದ 31 ರವರೆಗೆ ರೈತರ ಚಳುವಳಿ ನಡೆಸಲಿದೆ. ಅದರ ನಂತರ ಭಾರತೀಯ ರೈತರ ಒಕ್ಕೂಟವು ಜೂನ್ 1 ರಿಂದ ಜೂನ್ 5 ರವರೆಗೆ ಮುಷ್ಕರ ಕೈಗೊಳ್ಳಲಿದೆ. ಈ ಸಮಯದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ತರುವುದನ್ನು ಕಟ್ಟುನಿಟ್ಟಾಗಿ ನಿರಾಕರಿಸಿದರು. ಇಂತಹ ಪರಿಸ್ಥಿತಿಯಲ್ಲಿ, ಈ ಚಳವಳಿಯಿಂದ ಹಾಲು ಮತ್ತು ತರಕಾರಿಗಳ ಪೂರೈಕೆಯ ಮೇಲೆ ಪರಿಣಾಮ ಬೀರಬಹುದೆಂದು ನಿರೀಕ್ಷಿಸಲಾಗಿದೆ.

ಕಾಂಗ್ರೆಸ್ ಸರಕಾರವು ರಾಜ್ಯದ ರೈತರ ಸಾಲಮನ್ನಾ ಮತ್ತು ಉನ್ನತೀಕರಣದ ಕುರಿತು ಮಾತನಾಡುತ್ತಿದ್ದು, ಈಗಲೇ ಆ ಬಗ್ಗೆ ಮಾಹಿತಿ ತಿಳಿಯಬಯಸುತ್ತೇವೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಕಾರ್ಯಗತಗೊಳಿಸಲು ಒತ್ತಾಯಿಸಿ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮತ್ತು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳನ್ನೂ ಖರೀದಿಸಬಾರದು ಎಂಬ ಬೇಡಿಕೆ ಸಹಿತ ರೈತ ಪರವಾದ ಹಲವು ಬೇಡಿಕೆಗಳನ್ನಿಟ್ಟು ಈ ಚಳುವಳಿ ಆರಂಭಿಸಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ನ ಪ್ರದೇಶ ಅಧ್ಯಕ್ಷ ಅನಿಲ್ ಯಾದವ್ ತಿಳಿಸಿದ್ದಾರೆ.

ಕೃಷಿ ಸಚಿವ ಸಚಿನ್ ಯಾದವ್ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಲಾಗಿದ್ದು ಸಚಿವರು ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಅವರ ಮಾತಿನಲ್ಲಿ ನಮಗೆ ನಂಬಿಕೆಯೂ ಇದೆ. ಆದರೆ ರೈತರ ಸಾಲ ಮನ್ನಾ ಮುಖ್ಯಮಂತ್ರಿಯಡಿರುತ್ತದೆ, ಆದ್ದರಿಂದ ಮುಖ್ಯಮಂತ್ರಿ ಕಮಲ್ ನಾಥ್ ಈ ವಿಷಯದ ಬಗ್ಗೆ ಮಾತನಾಡಿದರೆ, ರೈತರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬಹುದು ಎಂದು ಅನಿಲ್ ಯಾದವ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅನಿಲ್ ಯಾದವ್ ಪ್ರಕಾರ, "ಈ ಚಳುವಳಿಯನ್ನು ಯಶಸ್ವಿಗೊಳಿಸಲು ಪ್ರತಿ ಗ್ರಾಮವನ್ನು ಸಂಪರ್ಕಿಸಲಾಗಿದೆ. ಈ ಚಳುವಳಿಯಿಂದಾಗಿ ಹಾಲು, ತರಕಾರಿಗಳ ಸರಬರಾಜಿನ ಮೇಲೆ ಪರಿಣಾಮ ಬೀರಬಹುದು."

ರೈತರ ನಾಯಕ ಶಿವಕುಮಾರ್ ಶರ್ಮಾ (ಕಕ್ಕಾಜಿ) ನೇತೃತ್ವದಲ್ಲಿ ಭಾರತೀಯ ಕಿಸಾನ್ ಯೂನಿಯನ್ ಮತ್ತು ಭಾರತೀಯ ರೈತ ಸಂಘಟನೆ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇ 29 ರಂದು ಸಂಘಟನೆ ವತಿಯಿಂದ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ರೈತರ ಸಾಲಮನ್ನಾ ಸೇರಿದಂತೆ ರೈತರ ಇತರ ಬೇಡಿಕೆಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

ರೈತರ ಬೇಡಿಕೆಗಳು:
ಸ್ವಾಮಿನಾಥನ್ ವರದಿಯನ್ನು ಸಾಧ್ಯವಾದಷ್ಟು ಬೇಗ ಅಳವಡಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಬೆಂಬಲ ಬೆಲೆಗಿಂತ ಕಡಿಮೆಗೆ ಮಾರುಕಟ್ಟೆಯಲ್ಲಿ ಇಳುವರಿಯನ್ನು ಸಂಗ್ರಹಿಸುವುದನ್ನು ನಿಷೇಧಿಸುವುದು. ರೈತರ ಸಂಪೂರ್ಣ ಸಾಲ ಮನ್ನಾ, ಸರ್ಕಾರ ಬೆಳೆ ವಿಮಾ ಯೋಜನೆ ಸುಧಾರಿಸುವುದು ಹೀಗೆ ಹಲವು ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಡಲಿದ್ದಾರೆ.
 

Trending News