Viral Video: ಅಯ್ಯೋ ದುರ್ವಿಧಿಯೇ…! ಮಿತಿಮೀರಿದ ಡಿಜೆ ಸೌಂಡ್’ಗೆ ಎದೆಒಡೆದು ಮಂಟಪದಲ್ಲಿಯೇ ಪ್ರಾಣಬಿಟ್ಟ ವರ

Groom got heart attack due to heavy DJ Sound: ಸುರೇಂದ್ರ ಕುಮಾರ್ ಎಂಬವರ ಮದುವೆ ಮೆರವಣಿಗೆಯು ಪರಿಹಾರ್ ಬ್ಲಾಕ್‌’ನ ಮನತಿಹಾರ್ ಗ್ರಾಮದಿಂದ ಸನ್‌ಬಾರ್ಸಾ ಬ್ಲಾಕ್‌’ನ ಇಂದರ್ವಾ ಗ್ರಾಮಕ್ಕೆ ಬುಧವಾರ ರಾತ್ರಿ ಆಗಮಿಸಿದೆ. ಮೆರವಣಿಗೆ ಆಗಮಿಸಿದ ಬಳಿಕ ವಿವಾಹ ಸಮಾರಂಭ ಪ್ರಾರಂಭಗೊಂಡಿದೆ.

Written by - Bhavishya Shetty | Last Updated : Mar 6, 2023, 06:29 PM IST
    • ವಧು -ವರರು ವೇದಿಕೆಗೆ ಆಗಮಿಸಿದ್ದು, ಒಬ್ಬರಿಗೊಬ್ಬರು ಹಾರ ಬದಲಾಯಿಸಲು ಮುಂದಾಗಿದ್ದಾರೆ.
    • ಆದರೆ ಇದ್ದಕ್ಕಿದ್ದಂತೆ ವರನು ಪ್ರಜ್ಞಾಹೀನನಾಗಿ ವೇದಿಕೆಯ ಮೇಲೆ ಬಿದ್ದಿದ್ದಾನೆ.
    • ಆದರೆ ಅಲ್ಲಿ ವರ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
Viral Video: ಅಯ್ಯೋ ದುರ್ವಿಧಿಯೇ…! ಮಿತಿಮೀರಿದ ಡಿಜೆ ಸೌಂಡ್’ಗೆ ಎದೆಒಡೆದು ಮಂಟಪದಲ್ಲಿಯೇ ಪ್ರಾಣಬಿಟ್ಟ ವರ title=
viral video

Groom got heart attack due to heavy DJ Sound: ಬಿಹಾರದ ಸೀತಮಾರಿ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಮಂಟಪದ್ದಲ್ಲಿದ್ದ ವರ ಇದ್ದಕ್ಕಿದ್ದಂತೆ ಪ್ರಾಣಬಿಟ್ಟಿದ್ದಾನೆ. ಸಂಭ್ರಮದಲ್ಲಿರಬೇಕಾದ ಮನೆ, ಶೋಕ ಸಾಗರದಲ್ಲಿ ಮುಳುಗಿದೆ.

ಇದನ್ನೂ ಓದಿ: Viral Video: ದೇವರೇ.. ವಿದ್ಯೆ ಕಲಿಯಿರಿ ಅಂದ್ರೆ ದಾರಿ ಮಧ್ಯೆ ವಿದ್ಯಾರ್ಥಿಗಳು ಇಂಥಾ ಅಸಹ್ಯ ಕೆಲಸ ಮಾಡೋದಾ!!

ಸುರೇಂದ್ರ ಕುಮಾರ್ ಎಂಬವರ ಮದುವೆ ಮೆರವಣಿಗೆಯು ಪರಿಹಾರ್ ಬ್ಲಾಕ್‌’ನ ಮನತಿಹಾರ್ ಗ್ರಾಮದಿಂದ ಸನ್‌ಬಾರ್ಸಾ ಬ್ಲಾಕ್‌’ನ ಇಂದರ್ವಾ ಗ್ರಾಮಕ್ಕೆ ಬುಧವಾರ ರಾತ್ರಿ ಆಗಮಿಸಿದೆ. ಮೆರವಣಿಗೆ ಆಗಮಿಸಿದ ಬಳಿಕ ವಿವಾಹ ಸಮಾರಂಭ ಪ್ರಾರಂಭಗೊಂಡಿದೆ.

ಈ ಮಧ್ಯೆ ಜಯಮಲಾ ಕಾರ್ಯಕ್ರಮ ಪ್ರಾರಂಭವಾಗಿದೆ. ವಧು -ವರರು ವೇದಿಕೆಗೆ ಆಗಮಿಸಿದ್ದು, ಒಬ್ಬರಿಗೊಬ್ಬರು ಹಾರ ಬದಲಾಯಿಸಲು ಮುಂದಾಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ವರನು ಪ್ರಜ್ಞಾಹೀನನಾಗಿ ವೇದಿಕೆಯ ಮೇಲೆ ಬಿದ್ದಿದ್ದಾನೆ. ಈ ಹಿನ್ನೆಲೆಯಲ್ಲಿ ವರನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಲ್ಲಿ ವರ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ, ಸಂತೋಷದ ಕ್ಷಣವು ಶೋಕ ಸಾಗರದಲ್ಲಿ ಮುಳುಗುವಂತಾಗಿದೆ. ಗ್ರಾಮಸ್ಥರ ಪ್ರಕಾರ, ಹಾರ ಬದಲಾಯಿಸಿಕೊಂಡ ನಂತರ, ಎರಡೂ ಕಡೆಯ ಜನರು ವರ ಮತ್ತು ವಧುವಿನೊಂದಿಗೆ ಫೋಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ.  

ಇದನ್ನೂ ಓದಿ: Viral Video : ಮೆಟ್ರೋದಲ್ಲಿ ಇದೆಲ್ಲಾ ಮಾಡ್ತಾರಾ? ಯುವತಿಯರ ಹುಚ್ಚಾಟ.. ನೆತ್ತಿಗೇರಿತು ಜನರ ಕೋಪ!

ಇನ್ನು ಘಟನೆ ಬಳಿಕ ಮಾತನಾಡಿದ ಮೃತ ವರನ ಹಿರಿಯ ಸಹೋದರ ಜಿತೇಂದ್ರ ಕುಮಾರ್, “ಮೆರವಣಿಗೆ ಬರುವ ತನಕ ಎಲ್ಲವೂ ಚೆನ್ನಾಗಿತ್ತು. ಸುರೇಂದ್ರ ಕೂಡ ಚೆನ್ನಾಗಿದ್ದ. ಆದರೆ, ಡಿಜೆ ಸೌಂಡ್ ಕಡಿಮೆ ಮಾಡುವಂತೆ ಆತ ಹೇಳುತ್ತಿದ್ದ. ಆದರೆ, ಯಾರೂ ಗಮನ ಹರಿಸಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವೈದ್ಯರ ಪ್ರಕಾರ ಸುರೇಂದ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News