ಲಡಾಖ್‌ನಲ್ಲಿ ಭಾರತೀಯ ಸೇನೆಯ ಪರಾಕ್ರಮ, 6 ಹೊಸ ಶಿಖರಗಳು ವಶಕ್ಕೆ

ಗಡಿಯಲ್ಲಿ ಭಾರತ-ಚೀನಾ ವಿವಾದದ ಮಧ್ಯೆ, ಭಾರತೀಯ ಸೇನೆಯು 6 ಪ್ರಮುಖ ಶಿಖರಗಳನ್ನು ವಶಪಡಿಸಿಕೊಂಡಿದ್ದು, ಇದು ಚೀನಾಕ್ಕೆ ಆಘಾತವನ್ನುಂಟು ಮಾಡಿದೆ.  

Last Updated : Sep 21, 2020, 08:05 AM IST
  • ಭಾರತೀಯ ಸೇನೆಯು ಆರು ಪ್ರಮುಖ ಶಿಖರಗಳನ್ನು ವಶಪಡಿಸಿಕೊಂಡಿದೆ
  • ಚೀನಾದ ಮೇಲೆ ಎತ್ತರದಿಂದ ಕಣ್ಣಿಡುವುದು ಸುಲಭ
  • ವಾಯುಪಡೆಯ ಐದು ರಾಫೆಲ್ ಲಡಾಖ್‌ನಲ್ಲಿ ಕಾರ್ಯನಿರತವಾಗಿವೆ.
ಲಡಾಖ್‌ನಲ್ಲಿ ಭಾರತೀಯ ಸೇನೆಯ ಪರಾಕ್ರಮ, 6 ಹೊಸ ಶಿಖರಗಳು ವಶಕ್ಕೆ title=
Image courtesy: ANI

ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ವಿವಾದದ ಮಧ್ಯೆ ಭಾರತೀಯ ಸೇನೆಯು 6 ಪ್ರಮುಖ ಶಿಖರಗಳನ್ನು ವಶಪಡಿಸಿಕೊಂಡಿದ್ದು ಚೀನಾಕ್ಕೆ ಆಘಾತ ನೀಡಿದೆ. ಲಡಾಖ್‌ನ (Ladakh) ಪೂರ್ವ ಪ್ರದೇಶದಲ್ಲಿನ ಈ ಆರು ಶಿಖರಗಳ ಆಕ್ರಮಣದೊಂದಿಗೆ ಭಾರತೀಯ ಸೇನೆಯು ಚೀನಾದ ಪ್ರತಿಯೊಂದು ಚಲನೆಯನ್ನು ಗಮನಿಸುತ್ತಿದೆ.

ಜೆಟ್ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ವಾಯುಪಡೆಯ (ಐಎಎಫ್) ರಾಫೇಲ್‌ಗಳು ವಾಸ್ತವ ನಿಯಂತ್ರಣ ರೇಖೆಯ (LAC) ಸುತ್ತ ಸುತ್ತುತ್ತವೆ. ಮಾಧ್ಯಮ ವರದಿಗಳ ಪ್ರಕಾರ ಸೆಪ್ಟೆಂಬರ್ 10 ರಂದು ಅಂಬಾಲಾ ವಾಯುನೆಲೆಯಲ್ಲಿ ಔಪಚಾರಿಕವಾಗಿ ನಿಯೋಜಿಸಲ್ಪಟ್ಟಿದ್ದ ಐದು ರಾಫಲ್‌ಗಳು ಇತ್ತೀಚೆಗೆ ಲಡಾಖ್‌ನಲ್ಲಿ ಕೆಲಸ ಮಾಡುತ್ತಿವೆ.

ದಕ್ಷಿಣ ಏಷ್ಯಾದಲ್ಲಿ ಚೀನಾ ಜೊತೆ ಸ್ಪರ್ಧಿಸಲು ಭಾರತ-ಜಪಾನ್ ಹೊಸ ತಂತ್ರ

ಹೆಚ್ಚು ಗಮನ ಸೆಳೆಯುವ ವಾಯುಪಡೆ!
ಚೀನಾದ ಪ್ರಚೋದನಕಾರಿ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಐಎಎಫ್ (IAF) ತನ್ನ ಯುದ್ಧ ಕೌಶಲ್ಯವನ್ನು ಹೆಚ್ಚಿಸಲು ನೋಡುತ್ತಿದೆ. ಕಳೆದ ವಾರ ಚೀನಾದ ಸೈನಿಕರು ನಡೆಸಿದ ವಾಯುದಾಳಿಯ ಮೂರು ಘಟನೆಗಳನ್ನು ಗಮನಿಸಿದರೆ ವಾಯುಪಡೆಯು ಹೆಚ್ಚು ಗಮನಹರಿಸಿದೆ. ಅದೇ ಸಮಯದಲ್ಲಿ ಕಳೆದ ಮೂರು ವಾರಗಳಲ್ಲಿ ಆರು ಹೊಸ ಪ್ರಮುಖ ಶಿಖರಗಳನ್ನು ಭಾರತೀಯ ಸೇನೆಯು ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ವಶಪಡಿಸಿಕೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಭಾರತೀಯ ಸೈನಿಕರ ಗಮನವನ್ನು ಬೇರೆಡೆ ಸೆಳೆಯಲು ಪಂಜಾಬಿ ಹಾಡುಗಳ ಮೊರೆಹೋದ ಚೀನಾ

ಈ ಶಿಖರಗಳ ಆಕ್ರಮಣದೊಂದಿಗೆ ಭಾರತವು ಚೀನಾ (China)ದ ಸೈನ್ಯದಿಂದ ಆಯಾ ಪ್ರದೇಶದಲ್ಲಿ ಹೆಚ್ಚಿನ ಎತ್ತರವನ್ನು ತಲುಪಿದೆ. ಅಂತಹ ಪರಿಸ್ಥಿತಿಯಲ್ಲಿ ಪಿಎಲ್‌ಎಯ ಪ್ರತಿಯೊಂದು ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವುದು ಸುಲಭವಾಗುತ್ತದೆ. ಏತನ್ಮಧ್ಯೆ ಭಾರತ ಮತ್ತು ಚೀನಾದ ಸೇನೆಗಳ ನಡುವೆ ಆರನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಾತುಕತೆ ಸೋಮವಾರ ನಡೆಯಲಿದ್ದು ಉಭಯ ದೇಶಗಳ ನಡುವಿನ ಐದು ಅಂಶಗಳ ಒಪ್ಪಂದದ ಅನುಷ್ಠಾನಕ್ಕೆ ಇದು ಒತ್ತು ನೀಡಲಿದೆ. 

LAC ಉದ್ವಿಗ್ನತೆಯ ಮಧ್ಯೆ ಭಾರತ-ಚೀನಾ ವಿದೇಶಾಂಗ ಸಚಿವರ ಸಭೆ, ಈ 5 ವಿಷಯಗಳಿಗೆ ಸಮ್ಮತಿ

ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ ಚೀನಾದ ಭಾಗವಾದ ಮೊಲ್ಡೊದಲ್ಲಿ ಬೆಳಿಗ್ಗೆ 9 ಗಂಟೆಗೆ ಮಾತುಕತೆ ನಡೆಯಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಮೊದಲ ಬಾರಿಗೆ ಭಾರತೀಯ ನಿಯೋಗದ ಭಾಗವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಭಾಷಣೆಯಿಂದ ಕೆಲವು ಖಚಿತ ಫಲಿತಾಂಶಗಳನ್ನು ಭಾರತ ಬಯಸಿದೆ.

Trending News