ಐಎನ್ಎಕ್ಸ್ ಪ್ರಕರಣ : ಮುಂಬೈಗೆ ಕಾರ್ತಿ ಚಿದಂಬರಂ ಕರೆದೊಯ್ದ ಸಿಬಿಐ

ಐಎನ್ಎಕ್ಸ್ ಮೀಡಿಯಾ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮುಂದಿನ ವಿಚಾರಣೆಗಾಗಿ ಕಾರ್ತಿ ಚಿದಂಬರಂ ಅವರನ್ನು ಮುಂಬೈಗೆ ಕರೆದೊಯ್ಯಲಾಗಿದೆ

Last Updated : Mar 4, 2018, 12:00 PM IST
ಐಎನ್ಎಕ್ಸ್ ಪ್ರಕರಣ : ಮುಂಬೈಗೆ ಕಾರ್ತಿ ಚಿದಂಬರಂ ಕರೆದೊಯ್ದ ಸಿಬಿಐ title=

ನವದೆಹಲಿ: ಐಎನ್ಎಕ್ಸ್ ಮೀಡಿಯಾ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮುಂದಿನ ವಿಚಾರಣೆಗಾಗಿ ಕಾರ್ತಿ ಚಿದಂಬರಂ ಅವರನ್ನು ಭಾನುವಾರ ಬೆಳಿಗ್ಗೆ 8 ಗಂಟೆಗೆ ಏರ್ ಇಂಡಿಯಾ ವಿಮಾನದಲ್ಲಿ ಮುಂಬೈಗೆ ಕರೆದೊಯ್ಯಲಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿದಂಬರಂ ಪುತ್ರನನ್ನು ಇಂದು ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಅವರೊಂದಿಗೆ ಮುಂಬೈನಲ್ಲಿ ಮುಖಾಮುಖಿ ತಂದು ಪ್ರತ್ಯೇಕ ವಿಚಾರಣೆ ನಡೆಸಲಾಗುವುದು ಎಂದು ಸಿಬಿಐ ಮೂಲ ಬಹಿರಂಗಪಡಿಸಿದೆ.

ಮಾರ್ಚ್ 1 ರಂದು ದೆಹಲಿಯಲ್ಲಿರುವ ಪಟಿಯಾಲಾ ಹೌಸ್ ಕೋರ್ಟ್ ಐಎನ್ಎಕ್ಸ್ ಮೀಡಿಯ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಅವರನ್ನು ಐದು ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿತ್ತು. ಝೀ ನ್ಯೂಸ್ ಪ್ರಕಾರ, ಕಾರ್ತಿ ಅವರನ್ನು ಸುಮಾರು ಏಳು ಗಂಟೆಗಳ ಕಾಲ ಸಿಬಿಐ ವಿಚಾರಣೆ ನಡೆಸಿದ್ದರು ಎನ್ನಲಾಗಿದೆ. 

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನಾಟಕೀಯ ಬೆಳವಣಿಗೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಅವರನ್ನು ಚೆನ್ನೈ ವಿಮಾನ ನಿಲ್ದಾಣದಿಂದ ಫೆಬ್ರವರಿ 28 ರಂದು ಸಿಬಿಐ ಬಂಧಿಸಿತ್ತು. ನಂತರ ಸಂಜೆ ದೆಹಲಿ ನ್ಯಾಯಾಲಯವು ಅವರನ್ನು ಒಂಡು ದಿನಗಳ ಸಿಬಿಐ ಬಂಧನಕ್ಕೆ ಒಪ್ಪಿಸಿತ್ತು. 

Trending News